ಶಿರ್ವ: ಅರಣ್ಯ ಇಲಾಖೆಯಿಂದ ಸಸಿಗಳ ಮಾರಾಟ; ಸಸ್ಯ ಸಂತೆ
Team Udayavani, Jul 7, 2017, 3:45 AM IST
ಶಿರ್ವ: ಪ್ರಾದೇಶಿಕ ಅರಣ್ಯ ವಿಭಾಗ ಕುಂದಾಪುರ, ಪ್ರಾದೇಶಿಕ ಅರಣ್ಯ ವಲಯ ಉಡುಪಿ ಇವರ ವತಿಯಿಂದ ಅರಣ್ಯ ಇಲಾಖೆಯ ನೀರಿಗಾಗಿ ಅರಣ್ಯ ಎಂಬ ಧೇÂಯದಂತೆ ರಾಜ್ಯದಾದ್ಯಂತ ನಡೆಸುತ್ತಿರುವ ಕಾರ್ಯಕ್ರಮದಡಿ ಸಸಿಗಳ ಮಾರಾಟ ಕಾರ್ಯಕ್ರಮ ಶಿರ್ವ ಪೇಟೆಯಲ್ಲಿ ಗುರುವಾರ ನಡೆಯಿತು.
ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಮಳೆ ಮತ್ತು ನೀರಿನ ಉದೇªಶದಿಂದ ರಾಜ್ಯದಾದ್ಯಂತ ಅರಣ್ಯ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜನರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೆಲಸ ಇಲಾಖೆ ಮಾಡುತ್ತಿದೆ ಎಂದು ಕಾಪು ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ತಿಳಿಸಿದರು.
ಸಸಿಗಳಿಗೆ ಭಾರೀ ಬೇಡಿಕೆ
ಅರಣ್ಯ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಿಗುವ ಸಸಿಗಳಿಗೆ ಭಾರೀ ಬೇಡಿಕೆಯಿದ್ದು ಜನ ಮುಗಿಬಿದ್ದು ಸಸಿಗಳನ್ನು ಪಡೆದುಕೊಂಡರು.
ಪ್ರತೀ ಚಿಕ್ಕ ಸಸಿಗಳಿಗೆ 1 ರೂ.
ಮತ್ತು ದೊಡ್ಡ ಸಸಿಗಳಿಗೆ 3 ರೂ. ದರದಲ್ಲಿ ಮಾರಾಟ ಮಾಡಿದ್ದು ಹಲಸು, ಮಾವು, ಸಾಗುವಾನಿ, ಹೆಬ್ಬಲಸು ಸಹಿತ ವಿವಿಧ ತಳಿಯ ಸಸಿಗಳನ್ನು ಮಾರಾಟ ಮಾಡಲಾಯಿತು. ಬಹುತೇಕ ಜನರು ಸಸಿಗಳನ್ನು ಪಡೆದುಕೊಂಡಿದ್ದು ಗ್ರಾಮಸ್ಥರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕರಾದ ಪ್ರಭಾತ್ ಕುಮಾರ್, ಕೆ. ರಮೇಶ್, ಜಯರಾಮ ಶೆಟ್ಟಿ, ಅಶೋಕ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ