ಮೈಸೂರಿನ “ಮೋದಿ ಯೋಗ’ಕ್ಕೆ ಕರಾವಳಿಯ ಶಿವಾನಿ, ಅನ್ವಿ ಆಯ್ಕೆ
Team Udayavani, Jun 18, 2022, 11:50 PM IST
ಶಿವಾನಿ ಶೆಟ್ಟಿ ಮತ್ತುಅನ್ವಿ ಎಚ್. ಅಂಚನ್
ಕುಂದಾಪುರ: ಮೈಸೂರು ಅರಮನೆ ಎದುರು ಜೂ. 21ರಂದು ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಉಡುಪಿಯ ಶಿವಾನಿ ಶೆಟ್ಟಿ ಮತ್ತು ಕಾರ್ಕಳದ ಅನ್ವಿ ಎಚ್. ಅಂಚನ್ ಆಯ್ಕೆಯಾಗಿದ್ದಾರೆ.
ಉಡುಪಿ ವಿದ್ಯೋದಯ ಶಾಲೆಯ 5ನೇ ತರಗತಿಯ ಶಿವಾನಿ ಅವರು ಶಿವಾನಂದ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ದಂಪತಿಯ ಪುತ್ರಿ. ಕಾರ್ಕಳದ ರವಿಶಂಕರ ವಿದ್ಯಾ ಮಂದಿರದ 7ನೇ ತರಗತಿಯ ಅನ್ವಿ ಅವರು ಹರೀಶ ಮತ್ತು ಶೋಭಾ ದಂಪತಿಯ ಪುತ್ರಿ.
ಈಗಾಗಲೇ ನಡೆದ ಪೂರ್ವಭಾವಿ ಪ್ರದರ್ಶನ ತಯಾರಿಯಲ್ಲಿ ಇವರು ಭಾಗವಹಿಸಿದ್ದಾರೆ. ಪಾಲ್ಗೊಳ್ಳುವವರ ಪೈಕಿ ಅತಿ ಚಿಕ್ಕ ವಯಸ್ಸಿನವಳಾದ ಶಿವಾನಿ ಶೆಟ್ಟಿ ಅವರಿಗೆ ಕೋವಿಡ್ ಲಸಿಕೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ತಡೆ ಹಿಡಿಯಲಾಗಿತ್ತು. ಆದರೆ ಶುಕ್ರವಾರ ಅಧಿಕೃತ ಮಾಹಿತಿ ಬಂದಿದ್ದು 72 ಗಂಟೆಗಳ ಪೂರ್ವದ ಕೋವಿಡ್ ನೆಗೆಟಿವ್ ವರದಿಯ ಆಧಾರದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ