ದಾಂಡಿಯಾ ನೃತ್ಯದಲ್ಲಿ ಶೋಭಾ ಕರಂದ್ಲಾಜೆ ಹೆಜ್ಜೆ
Team Udayavani, Oct 6, 2019, 7:00 AM IST
ಉಡುಪಿ: ಕಡಿಯಾಳಿಯ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಡಿಯಾಳಿ ಕಮಲಾಬಾಯಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ ದಾಂಡಿಯಾ ನೃತ್ಯದಲ್ಲಿ ಉಡುಪಿ ಸುತ್ತಮುತ್ತಲಿನ ಮಹಿಳೆಯರು ಜಾತಿ-ಪಕ್ಷಭೇದ ಮರೆತು ದೊಡ್ಡ ಸಂಖ್ಯೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.
ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ದಾಂಡಿಯಾ ನೃತ್ಯದಲ್ಲಿ ಸ್ವತಃ ಪಾಲ್ಗೊಂಡರು. ಶಾಂತಾ ವಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪವರ್ ಸಂಸ್ಥೆ ಅಧ್ಯಕ್ಷೆ ಶ್ರುತಿ ಜಿ. ಶೆಣೈ ಮುಖ್ಯ ಅತಿಥಿಗಳಾಗಿದ್ದರು.
ಶಾಸಕ ಕೆ. ರಘುಪತಿ ಭಟ್, ಸಮಿತಿಯ ಅಧ್ಯಕ್ಷ ಪ. ವಸಂತ ಭಟ್,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಮಹಿಳಾ ಮಂಡಳಿ ಪದಾಧಿಕಾರಿಗಳಾದ ವೇದಾ ವಿ. ಭಟ್, ಸಂಧ್ಯಾ ಪ್ರಭು, ಭಾರತೀ ಚಂದ್ರಶೇಖರ್, ಗಣ್ಯರಾದ ಉದಯ ಕುಮಾರ ಶೆಟ್ಟಿ, ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
ಆಶಿತಾ ರಾವ್ ಸ್ವಾಗತಿಸಿ ಡಾ| ಸ್ವಾತಿ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಿತಾ ಶೇರಿಗಾರ್ ವಂದಿಸಿದರು. ರಾತ್ರಿ 10.30ರ ಬಳಿಕವೂ ನೃತ್ಯ ಮುಂದುವರಿಯಿತು.
ಈ ನೃತ್ಯ ಗುಜರಾತ್, ಮಹಾರಾಷ್ಟ್ರ,ರಾಜಸ್ಥಾನದಲ್ಲಿ ಹೆಚ್ಚು ಜನಪ್ರಿಯ. ನವರಾತ್ರಿಯಲ್ಲಿ ಇದು ನಡೆಯುತ್ತದೆ. ಉಡುಪಿಯಲ್ಲಿ ಕಳೆದ 3ವರ್ಷಗಳಿಂದ ಕುಂಜಿಬೆಟ್ಟಿನ ಮೈದಾನದಲ್ಲಿ ನಡೆಯುತ್ತಿದ್ದರೆ ಈ ಬಾರಿ ಮೊದಲ ಬಾರಿಗೆ ಕಡಿಯಾಳಿಯಲ್ಲಿ ಆಯೋಜಿಸಲಾಯಿತು. ಇದರಿಂದಾಗಿ ಹೆಚ್ಚಿನ ಜನರಿಗೆ ಪಾಲ್ಗೊಳ್ಳಲು ಅವಕಾಶ ದೊರಕಿತು ಮತ್ತು ಮೈದಾನ ಕಿಕ್ಕಿರಿದಿತ್ತು.
ಸರ್ವಧರ್ಮೀಯರ ಸಹಭಾಗಿತ್ವ
ಹಿಂದೂ, ಮುಸ್ಲಿಂ, ಕ್ರೈಸ್ತರಾದಿ ಎಲ್ಲ ಧರ್ಮೀಯರೂ ದಾಂಡಿಯಾ ನರ್ತನದಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ