ಸಾಲಿಗ್ರಾಮ ಗುರುನರಸಿಂಹ ದೇಗುಲ:ಅದ್ದೂರಿ ಜಾತ್ರೆ
ಸಾವಿರಾರು ಮಂದಿ ಭಕ್ತರು ಭಾಗಿ; ದೇಗುಲಕ್ಕೆ ವಿಶೇಷ ಪುಷ್ಪಾಲಂಕಾರ; ಕಾರಂತ ಬೀದಿಗೆ ವಿದ್ಯುತ್ ಅಲಂಕಾರ
Team Udayavani, Jan 18, 2020, 5:10 AM IST
ಕೋಟ: ಪುರಾಣ ಪ್ರಸಿದ್ಧ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಜಾತ್ರೆ ಜ.17ರಂದು ಜರಗಿತು. ಈ ಸಂದರ್ಭ ಬ್ರಹ್ಮರಥಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ ಸಾವಿರಾರು ಭಕಾದಿಗಳ ಸಮ್ಮುಖದಲ್ಲಿ ರಥಾರೋಹಣ ಕಾರ್ಯಕ್ರಮ ನೆರವೇರಿತು.
ಈ ಪ್ರಯುಕ್ತ ಜ.15ರಿಂದ ನರಸಿಂಹ ಹೋಮ, ಗಣಹೋಮ, ರಜತ ರಥೋತ್ಸವ, ಧ್ವಜಾರೋಹಣ, ವೇದ ಪಾರಾಯಣ, ಸುತ್ತು ಸೇವೆ, ರಜತಪಲ್ಲಕಿ ಉತ್ಸವ, ಕಟ್ಟೆ ಓಲಗ, ಹಿರಿರಂಗಪೂಜೆ, ಪುಷ್ಪರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆದಿದ್ದು, ಜ.17ರಂದು ಬೆಳಗ್ಗೆ ಹೋಮ, ರಥಶುದ್ಧಿ ಕಲಶಾಭಿಶೇಕ ಮುಂತಾದ ಉತ್ಸವಾದಿ ಕಾರ್ಯಕ್ರಮಗಳ ಅನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ರಥದಲ್ಲಿರಿಸಿ ವೇದಘೋಷದೊಂದಿಗೆ ಆಂಜನೇಯ ದೇವಸ್ಥಾನದವರೆಗೆ ರಥಾರೋಹಣಗೈಯಲಾಯಿತು.
ಭಕ್ತಾದಿಗಳು ಆಂಜನೇಯ ಹಾಗೂ ಗುರುನರಸಿಂಹನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅನ್ನಸಂತರ್ಪಣೆ ಮತ್ತು ಪಾನಕ, ಪನಿವಾರ ಸೇವೆ ನಡೆಯಿತು.
ಗುರುನರಸಿಂಹ ದೇವಸ್ಥಾನವನ್ನು ದೇಗುಲದ ವತಿಯಿಂದ ಹಾಗೂ ಆಂಜನೇಯ ದೇವಸ್ಥಾನವನ್ನು ಆಂಜನೇಯ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಯಿತು.
ಕಾರಂತ ಬೀದಿಯ ದಕ್ಷಿಣಭಾಗವನ್ನು ಬನಶ್ರೀ ಫ್ರೆಂಡ್ಸ್ ವತಿಯಿಂದ ಹಾಗೂ ಉತ್ತರ ಭಾಗವನ್ನು ಸ್ಥಳೀಯ ಭಕ್ತಾದಿಗಳ ವತಿಯಿಂದ ವಿದ್ಯುತ್ ದೀಪದಿಂದ ಶೃಂಗರಿಸಲಾಗಿತ್ತು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು, ತಂತ್ರಿಗಳು, ಜೋಯಿಸರು, ಅರ್ಚಕರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಉತ್ಸವಾದಿ ಕಾರ್ಯಕ್ರಮಗಳ ಅನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ರಥದಲ್ಲಿರಿಸಿ ಭಕ್ತಾದಿಗಳ ಹರ್ಷಘೋಷದೊಂದಿಗೆ ಆಂಜನೇಯ ದೇವಸ್ಥಾನದ ವರೆಗೆ ರಥಾರೋಹಣಗೈಯಲಾಯಿತು. ಭಕ್ತಾದಿಗಳು ಆಂಜನೇಯ,ಗುರುನರಸಿಂಹನ ದರ್ಶನ ಪಡೆದು ಪೂಜೆ ಪುನೀತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ