ಸಿದ್ದಾಪುರ: ಕಾಲೇಜು ಸ್ಥಾಪನೆಗೆ ಶಾಸಕರಿಂದ ಪೂರ್ವಭಾವಿ ಸಭೆ, ಸ್ಥಳ ಪರಿಶೀಲನೆ
Team Udayavani, Jun 8, 2019, 6:00 AM IST
ಸಿದ್ದಾಪುರ: ನಗರದಲ್ಲಿ ಸರಕಾರಿ ಕಾಲೇಜು ಸ್ಥಾಪನೆಯ ಬಗ್ಗೆ ಶಾಸಕ ಬಿ. ಎ. ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಊರ ನಾಗರಿಕರ, ಶಿಕ್ಷಣಾಭಿಮಾನಿಗಳ, ಜನಪ್ರತಿನಿಧಿಗಳ, ಶಿಕ್ಷಣ ಇಲಾಖಾಧಿಕಾರಿಗಳ ಸಭೆ, ಕಾಲೇಜು ಸ್ಥಾಪನೆಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
ಜಿ.ಪಂ. ಸದಸ್ಯ ರೋಹಿತ್ ಕುಮಾರ ಶೆಟ್ಟಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೆಶಕ ಅಪ್ಪಾಜಿ ಗೌಡ, ವಿಶೇಷ ಅಧಿಕಾರಿ ಡಾ| ಶ್ರೀಧರ್, ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಉಪಾಧ್ಯಕ್ಷ ಭರತ್ ಕಾಮತ್, ಸದಸ್ಯರಾದ ಕೆ. ಸತೀಶ್ ಕುಮಾರ ಶೆಟ್ಟಿ ಕಡ್ರಿ, ಪ್ರದೀಪ್ ಹೆಗ್ಡೆ, ಮಂಜುನಾಥ ಕುಲಾಲ್ ಜನ್ಸಾಲೆ, ಕೃಷ್ಣ ಪೂಜಾರಿ, ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ, ಕಾರ್ಯದರ್ಶಿ ರವೀಂದ್ರ, ಹಿರಿಯ ನಾಗರಿಕರ ವೇದಿಕೆಯ ಗೌರವಾಧ್ಯಕ್ಷ ನಾಗಪ್ಪ ಶೆಟ್ಟಿ ಬಾಳಿಬೇರು, ಸ್ಥಳೀಯ ಮುಖಂಡ ಸುದರ್ಶನ್ ಶೆಟ್ಟಿ ಬಾಳಿಬೇರು, ಗೋಪಾಲ್ ಕಾಂಚನ್, ಭಾಸ್ಕರ್ ಶೆಟ್ಟಿ ಹೆನ್ನಾಬೈಲು, ಕೆ. ಭೋಜ ಶೆಟ್ಟಿ ಕಡ್ರಿ, ಶೇಖರ್ ಕೋಟ್ಯಾನ್, ಬಿ.ಆರ್. ಭಾಸ್ಕರ್, ಮಹೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶೈಲೇಂದ್ರನಾಥ್ ಅವರು ಸ್ವಾಗತಿಸಿ, ವಂದಿಸಿದರು.