ಹೇರಿಕೆರೆ: ಹೂಳೆತ್ತುವ ಬದಲು ಕಲ್ಲು ಕಟ್ಟಿದ ಸಣ್ಣ ನೀರಾವರಿ ಇಲಾಖೆ


Team Udayavani, May 10, 2019, 6:10 AM IST

herikere

 ವಿಶೇಷ ವರದಿ

ಬಸ್ರೂರು: ಕಂದಾವರ ಗ್ರಾ.ಪಂ. ವ್ಯಾಪ್ತಿಯ ದೊಡ್ಡ ಕೆರೆಯೆನಿಸಿಕೊಂಡ ಹೇರಿಕೆರೆಗೆ ಸರಕಾರದ ಸಣ್ಣ ನೀರಾವರಿ ಇಲಾಖೆ ಕಾಯಕಲ್ಪ ಮಾಡಿದೆ. 15 ಲಕ್ಷ ರೂ. ವೆಚ್ಚದಲ್ಲಿ ಈ ಕೆರೆಯ ಪೂರ್ವಭಾಗದಲ್ಲಿ ಸುಮಾರು 200 ಮೀ. ಉದ್ದಕ್ಕೆ ಕೆರೆಯ ಬದಿಗಳಿಗೆ ಶಿಲೆಕಲ್ಲನ್ನು ಕಟ್ಟಲಾಗಿದೆ.

ಒಂದು ಕಾಲದಲ್ಲಿ ಸುಮಾರು 70 ಎಕರೆಯಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಈ ಕೆರೆಯಲ್ಲಿ ಈಗ ಕೇವಲ 25 ಎಕರೆಯಷ್ಟು ಜಾಗ ಮಾತ್ರವೇ ಉಳಿದಿದೆ. ಇನ್ನು ನೀರಿನ ವಿಚಾರಕ್ಕೆ ಬಂದರೆ ಅದರಲ್ಲಿಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಕಾಣಬಹುದಾಗಿದೆ.
ಉಳಿದ ಜಾಗದಲ್ಲಿ ಕೆಲವರು ಮನೆ ಕಟ್ಟಿಕೊಂಡರೆ ಮತ್ತೆ ಕೆಲವು ಭಾಗ ಗದ್ದೆಯಾಗಿ ಬದಲಾಗಿದೆ.

ಹೂಳೆತ್ತದೆ ಕಲ್ಲು ಕಟ್ಟಿದ್ದಾರೆ!
ಉಳಿದ 25 ಎಕರೆ ಜಾಗದಲ್ಲಿ ಹೂಳೆತ್ತುವತ್ತ ಗಮನಹರಿಸದೆ ಒಂದು ಭಾಗದಲ್ಲಿ ಕಲ್ಲನ್ನು ಕಟ್ಟಲಾಗಿದೆ. ಒಂದು ವೇಳೆ ಇದಕ್ಕೆ ಬಳಕೆಯಾದ ಹಣವನ್ನು ಹೂಳೆತ್ತುವುದಕ್ಕಾಗಿ ವಿನಿಯೋಗಿಸಿದ್ದರೆ ಅಂತರ್ಜಲವಾದರೂ ವೃದ್ಧಿಯಾಗುವ ಸಾಧ್ಯತೆ ಇತ್ತು.

ಕೆರೆಯಲ್ಲಿ ನೀರು ಹೆಚ್ಚಾದಾಗ ಒಂದು ತೂಬಿನಲ್ಲಿ ನೀರನ್ನು ಉಳ್ಳೂರು, ಮೂಡ್ಲಕಟ್ಟೆಗೆ ಹೋದರೆ ಮತ್ತೂಂದು ತೂಬು ಸಾಂತಾವರದ ಕೃಷಿ ಭೂಮಿಗೆ ಹೋಗುತ್ತಿತ್ತು. ಈಗ ಬರೇ ಒಂದು ಕಡೆಗೆ ಮಾತ್ರ ಕಲ್ಲನ್ನು ಕಟ್ಟಲಾಗಿರುವುದು ಯಾವ ಉದ್ದೇಶಕ್ಕಾಗಿ ಎಂಬುದು ಸಾರ್ವಜನಿಕರ ಪ್ರಶ್ನೆ.

ಈ ಬಗ್ಗೆ ಇಲಾಖೆ ಅಭಿಯಂತರರನ್ನು ಕೇಳಿದರೆ ಅಷ್ಟು ಕಲ್ಲನ್ನು ಕಟ್ಟುವುದರಲ್ಲೇ ಹಣ ಮುಗಿಯಿತು ಎನ್ನುವ ಉತ್ತರ ಬಂದಿದೆ. ಕೆರೆ ಹೂಳೆತ್ತಿದ್ದರೆ ಈ ಭಾಗದ ಸಾವಿರಾರು ಕುಟುಂಬಗಳಿಗೆ ಬಂದು ಒದಗಿರುವ ಜಲಕ್ಷಾಮಕ್ಕಾದರೂ ಮುಕ್ತಿ ದೊರೆಯುವ ಸಾಧ್ಯತೆ ಇತ್ತು. ಮಾತ್ರವಲ್ಲ ಬೆಳೆ ಬೆಳೆಯುವುದಕ್ಕೂ ಸಹಾಯವಾಗುತ್ತಿತ್ತು ಎನ್ನುವುದು ಜನರ ಅಭಿಪ್ರಾಯ.
ಈ ಹಿಂದೆ ಕೆರೆಯ ಬಗ್ಗೆ ಉದಯವಾಣಿ ಪತ್ರಿಕೆ ವರದಿ ಪ್ರಕಟಿಸಿತ್ತು.

ಪ್ರಯೋಜನವೇನು?
ಹೇರಿಕೆರೆಯನ್ನು ರೂ. 15 ಲಕ್ಷ ವೆಚ್ಚದಲ್ಲಿ ಹೂಳೆತ್ತಿದ್ದರೆ ಇಲ್ಲಿ ಅಂತರ್ಜಲ ವೃದ್ಧಿಯಾಗಿ ನೀರು ಹೆಚ್ಚುತ್ತಿತ್ತು. ಸುತ್ತಲ ಗದ್ದೆಗಳಿಗೆ ನೀರಾದರೂ ಹೋಗಬಹುದಿತ್ತು.ಈಗ ಕೆರೆಯ ಉತ್ತರ ಭಾಗದಲ್ಲಿ ಕಲ್ಲು ಕಟ್ಟಿ ಪ್ರಯೋಜನ ಏನು ಎನ್ನುವುದು ತಿಳಿದು ಬರುತ್ತಿಲ್ಲ . ಮುಂದೆ ಇಲಾಖೆ ಏನು ಕಾಮಗಾರಿ ಮಾಡುತ್ತದೋ ಗೊತ್ತಿಲ್ಲ!
-ನಾಗರಾಜ ಪೂಜಾರಿ, ಸ್ಥಳೀಯ ನಿವಾಸಿ

ಹೂಳೆತ್ತಲಾಗುವುದು
ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರೂ.15 ಲಕ್ಷ ವೆಚ್ಚದಲ್ಲಿ ಹೇರಿಕೆರೆಯ ಪೂರ್ವ ಭಾಗದಲ್ಲಿ ಕಲ್ಲನ್ನು ಕಟ್ಟಲು ಮಾತ್ರ ಹಣ ಮಂಜೂರಾಗಿತ್ತು (ಫಿಟ್ಟಿಂಗ್‌) ಈ ಹಣದಿಂದ ಕೆರೆಯ ಹೂಳೆತ್ತಲು ಸಾಧ್ಯವಿಲ್ಲ. ಹೂಳೆತ್ತಲು ಮೇಲಧಿಕಾರಿಗಳಿಗೆ ಬರೆದುಕೊಳ್ಳಲಾಗಿದೆ.ಹಣ ಮಂಜೂರಾದ ತಕ್ಷಣ ಕೆರೆಯನ್ನು ಹೂಳೆತ್ತಲಾಗುವುದು.ಇಷ್ಟು ಹಣದಲ್ಲಿ ಹೂಳೆತ್ತಲು ಸಾಧ್ಯವೂ ಇಲ್ಲ .
-ರಾಜೇಶ್‌, ಕಿರಿಯ ಆಭಿಯಂತರರು,ಸಣ್ಣ ನೀರಾವರಿ ಇಲಾಖೆ ,ಉಡುಪಿ

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.