ನೀರು ಪೋಲು ತಡೆಗೆ ಸ್ಮಾರ್ಟ್ಫ್ಲಶ್ ರೆಟ್ರೋಫಿಟ್
3 ಹಾಗೂ 6ನೇ ತರಗತಿ ವಿದ್ಯಾರ್ಥಿಗಳ ಆವಿಷ್ಕಾರ
Team Udayavani, Apr 30, 2022, 11:32 AM IST
ಉಡುಪಿ: ಶುದ್ಧ ನೀರು ಸಕಲ ಜೀವಿಗಳಿಗೆ ಆಧಾರ ಹಾಗೂ ಅತ್ಯಮೂಲ್ಯ. ಇದನ್ನು ಅರಿತ ಬ್ರಹ್ಮಾವರ ಹಂದಾಡಿಯ ಸಹೋದರರಾದ ಪ್ರದ್ಯುಮ್ನ ಅಡಿಗ ಮತ್ತು ಸಿದ್ಧಾರ್ಥ್ ಅಡಿಗ ಅವರು ಆಧುನಿಕ ಶೌಚಾಲಯ ಗಳಲ್ಲಿ ನೀರು ಅತಿಯಾಗಿ ಪೋಲಾಗದಂತೆ ತಡೆಯಲು ಸ್ಮಾರ್ಟ್ ಫ್ಲಶ್ ರೆಟ್ರೋಫಿಟ್ ಎಂಬ ಮರು ಸುಧಾರಣಾ ಸಾಧಕವನ್ನು ಆವಿಷ್ಕರಿಸಿ ಕೇಂದ್ರ ಸರಕಾರದ ವತಿಯಿಂದ ಹಕ್ಕು ಪತ್ರ(ಪೇಟೆಂಟ್) ಪಡೆದಿದ್ದಾರೆ. ರಾಜ್ಯದ ಅತೀ ಕಿರಿಯ ಪೇಟೆಂಟ್ ಸಾಧಕರೆಂಬ ಹೆಗ್ಗಳಿಕೆಗೆ ಈ ಸಹೋದರರು ಪಾತ್ರರಾಗಿದ್ದಾರೆ.
ಭಾರತದಲ್ಲಿ ಹೆಚ್ಚಾಗಿ ಈಗಾಗಲೇ ಬಳಕೆಯಲ್ಲಿರುವ ಏಕ / ಸಿಂಗಲ್ ಫ್ಲಶ್ ವ್ಯವಸ್ಥೆಯನ್ನು (ಅಂದರೆ ದ್ರವ ಹಾಗು ಘನ ತ್ಯಾಜ್ಯಗಳಿಗೆ ಒಂದೇ ಪ್ರಮಾಣದ ನೀರನ್ನು ಬಳಸಿ ಸ್ವಚ್ಛಗೊಳಿಸುವ ವ್ಯವಸ್ಥೆಯನ್ನು) ಅತೀ ಸುಲಭವಾಗಿ, ಕಡಿಮೆ ಖರ್ಚಿನಲ್ಲಿ, ಯಾವುದೇ ದೊಡ್ಡ ಬದಲಾವಣೆ ಇಲ್ಲದೆ, ದ್ವಂದ್ವ/ಡ್ಯುಯಲ್ ಫ್ಲಶ್ ವ್ಯವಸ್ಥೆಗೆ (ಅಂದರೆ ದ್ರವ ಹಾಗೂ ಘನ ತ್ಯಾಜ್ಯಗಳಿಗೆ ಪ್ರತ್ಯೇಕ ಪ್ರಮಾಣದ ನೀರನ್ನು ಒದಗಿಸುವ ವ್ಯವಸ್ಥೆಗೆ) ಬದಲಾಯಿಸುವ, ಉನ್ನತೀಕರಿಸುವ ಸಾಧನವೇ ಈ ಸ್ಮಾರ್ಟ್ ಫ್ಲಶ್ ರೆಟ್ರೋಫಿಟ್ ಎಂಬ ಆವಿಷ್ಕಾರ. ಈ ಸಾಧನದ ಅಳವಡಿಕೆಯಿಂದ ಆಧುನಿಕ ಶೌಚಾಲಯಗಳಲ್ಲಿ ಸುಲಭವಾಗಿ ನೀರನ್ನು ಸಂರಕ್ಷಿಸುವುದು ಸಾಧ್ಯವಾಗಲಿದೆ.
ಪ್ರದ್ಯುಮ್ನ ಅಡಿಗ ಮತ್ತು ಸಿದ್ಧಾರ್ಥ್ ಅಡಿಗ ಸಹೋದರರು ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ಕ್ರಮವಾಗಿ 3ನೇ ಹಾಗೂ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಮಣಿಪಾಲ ವಿ.ವಿ.ಯ ಆಯುರ್ವೇದ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ| ಶ್ರೀಪತಿ ಅಡಿಗ ಹಾಗೂ ಡಾ| ರಮ್ಯಾ ಅಡಿಗ ಅವರ ಪುತ್ರರು.
ಬೆಂಗಳೂರಿನ ಪ್ರತಿಷ್ಠಿತ ಒಎಂಎಸ್ ಪೇಟೆಂಟ್ ಸರ್ವೀಸಸ್ ಸಂಸ್ಥೆಯ ನಿರ್ದೇಶಕ ಓಂಪ್ರಕಾಶ್ ಶೃಂಗೇರಿ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಈ ಪೇಟೆಂಟ್ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು