ನಾಗರಹಾವಿಗೆ ಧನ್ವಂತರಿಯಾದ ಉರಗ ತಜ್ಞ ಶ್ರೀಧರ ಐತಾಳ್‌


Team Udayavani, Aug 11, 2017, 7:25 AM IST

Aithal-10-8.jpg

ಕೋಟೇಶ್ವರ: ನಾಗರ ಹಾವು ಸಹಿತ ವಿಷಪೂರಿತ ಹಾವುಗಳನ್ನು ಅನಾಯಾಸವಾಗಿ ಹಿಡಿಯುವ ಪ್ರವೃತ್ತಿ ಹೊಂದರುವ ಶ್ರೀಧರ ಐತಾಳ್‌ ಅವರು ಈವರೆಗೆ ದಾಖಲೆಯ 4000 ಕ್ಕೂ ಮಿಕ್ಕಿ ಹಾವುಗಳನ್ನು ಹಿಡಿಯುವುದರೊಡನೆ ಈ ಭಾಗದಲ್ಲಿ ಉರಗ ತಜ್ಞರಾಗಿ ಜನಾನುರಾಗಿಯಾಗಿದ್ದಾರೆ.

ಹಾವು ಐತಾಳರೆಂದೇ ಪ್ರಸಿದ್ಧಿ
ಯಾವುದೇ ಫಲಾಪೇಕ್ಷೆ ಇಲ್ಲದೇ ಕರೆದ ಮನೆಯೆಡೆಗೆ ಸಾಗಿ ಅನಾಯಾಸವಾಗಿ ಹಾವುಗಳನ್ನು ಕೈಚಳಕದಿಂದ ಹಿಡಿದು ಮನೆಯವರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುವ ಐತಾಳ್‌ ಅವರು ತಮ್ಮ 74 ರ ಹರೆಯದಲ್ಲೂ ಈ ಒಂದು ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ತಾಲೂಕಿನ ಎಲ್ಲರ ಬಾಯಲ್ಲಿ ‘ಹಾವು ಐತಾಳ’ರೆಂದೇ ಖ್ಯಾತಿ ಗಳಿಸಿದ್ದಾರೆ. ತಮ್ಮ ಗುರುಗಳಾದ ಉರಗ ತಜ್ಞ ಪುತ್ತೂರಿನ ಡಾ| ರವೀಂದ್ರ ಐತಾಳ ಅವರ ಮಾರ್ಗದರ್ಶನದಲ್ಲಿ ಈ ಒಂದು ಗೀಳನ್ನು ಬೆಳೆಸಿಕೊಂಡಿರುವ ಐತಾಳರು ಉತ್ತಮ ಸಂಗೀತಗಾರನಾಗಿದ್ದು ಶಾಸ್ತ್ರೀಯ ಸಂಗೀತ ಸಹಿತ ಸಿನೆಮಾ ಗೀತೆಗಳನ್ನು ಸುಶ್ರಾವ್ಯ ಕಂಠದ ಮೂಲಕ ಹಾಡುವುದರೊಡನೆ ಜನಮನ ಸೂರೆಗೊಂಡಿದ್ದಾರೆ. ತಬಲ ವಾದಕರಾಗಿಯೂ ಗುರುತಿಸಿಕೊಂಡಿರುವ ಇವರು ವಿವಿಧ ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲಿ ತಬಲ ವಾದಕರಾಗಿ ನಾಟಕಕ್ಕೆ ಹಿನ್ನಲೆ ಸಂಗೀತ ನೀಡಿರುತ್ತಾರೆ.

ಗ್ರಾಮಸ್ಥರು ನಿಬ್ಬೆರಗು
ಇತ್ತೀಚೆಗೆ ಬಸ್ರೂರು ಮೂರುಕೈ ನಿವಾಸಿ ರಾಮಾಚಾರಿ ಅವರ ಮನೆಯಲ್ಲಿದ್ದ 7 ಫೀಟ್‌ ಉದ್ದದ ಬಹಳ ಅಪೂರ್ವವಾದ ನಾಗರ ಹಾವನ್ನು ಕಂಟಕವಿಲ್ಲದೆ ಹಿಡಿದು ದೂರದ ಅರಣ್ಯಕ್ಕೆ ಒಯ್ಯುವುದರೊಡನೆ ನೆರೆದ ಗ್ರಾಮಸ್ಥರನ್ನು ನಿಬ್ಬೆರಗುಗೊಳಿಸಿದರು.

ಉರಗೋದ್ಯಾನಕ್ಕಾಗಿ ಬೇಡಿಕೆ
ಕೋಟೇಶ್ವರ ಆಸುಪಾಸಿನಲ್ಲಿ ಸರಕಾರಿ ಸ್ವಾಯತ್ತೆಯ ಒಂದಿಷ್ಟು ಭೂಮಿಯನ್ನು ನೀಡಿದಲ್ಲಿ ಅಲ್ಲಿ ಉರಗೋದ್ಯಾನ ಆರಂಭಿಸಿ ನಾನಾ ರೀತಿಯ ಹಾವುಗಳಿಗೆ ಆಶ್ರಯ ನೀಡಿ ವೈವಿಧ್ಯಮಯ ಹಾವುಗಳ ಸಂಗ್ರಹದೊಡನೆ ಮ್ಯೂಸಿಯಂ ಆರಂಭಿಸುವ ಹಂಬಲ ಹೊಂದಿರುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಜನರು ನೀಡುವ ಹಣವನ್ನು ಪಡೆದು ತೃಪ್ತಿ ಪಡುವ ಶ್ರೀಧರ ಐತಾಳ್‌ ಅವರು ಕುಂದಾಪುರ ತಾಲೂಕಿನ ಉರಗ ತಜ್ಞರಾಗಿ ಪ್ರಸಿದ್ಧರಾಗಿದ್ದಾರೆ.

ಧನ್ವಂತರಿ ಸದೃಶ್ಯರು
ಕೇವಲ ಹಾವುಗಳನ್ನು ಹಿಡಿಯುವುದಲ್ಲದೇ ನಾನಾ ಕಾರಣಗಳಿಂದ ಗಾಯಗೊಂಡ ವಿಷಪೂರಿತ ನಾಗರ ಹಾವುಗಳಿಗೆ ಚಿಕಿತ್ಸೆ ನೀಡಿ ಅವುಗಳನ್ನು ಬದುಕಿಸುವುದರ ಮೂಲಕ ಧಾರ್ಮಿಕ ನಂಬಿಕೆಯ ಜನರಿಗೆ ಧನ್ವಂತರಿಯಾಗಿರುತ್ತಾರೆ. ಈಶ್ವರಿ ಬಳ್ಳಿ, ಚಂದನ, ಪಚ್ಚ ಕರ್ಪೂರ, ಹೆಬ್ಟಾಡಿ ಸೊಪ್ಪು ಮುಂತಾದ ಔಷಧ ದ್ರವ್ಯಗಳನ್ನು ಗಾಯಗೊಂಡ ಹಾವುಗಳಿಗೆ ಸವರಿ ಮನೆಯಲ್ಲೇ ಚಿಕಿತ್ಸೆ ನೀಡಿ ಅವುಗಳನ್ನು ಗುಣಪಡಿಸಿ ಸರಕಾರಿ ಸ್ವಾಮ್ಯದ ದಟ್ಟಾರಣ್ಯಕ್ಕೆ ಬಿಡುವ ಪ್ರವೃತ್ತಿ ಹೊಂದಿರುವ ಇವರ ಸಾಧನೆ ಅದ್ಭುತ.

– ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.