ಹಾವು ಕಡಿತ: ಅರಣ್ಯಾಧಿಕಾರಿ ಭೇಟಿ
Team Udayavani, Mar 9, 2019, 12:45 AM IST
ಕುಂದಾಪುರ: ಕಂಬದಕೋಣೆ ಗ್ರಾಮದ ಹಳಗೇರಿ ತೆಂಕಬೆಟ್ಟು ಮಹಾಬಲ ಬಳೆಗಾರ ಅವರ ಪತ್ನಿ ರಾಧ ಬಳೆಗಾರ ಹಳಗೇರಿ ಅವರಿಗೆ ಗುರುವಾರ ಸಂಜೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿಷದ ಹಾವು ಕಡಿದಿದೆ.
ಕೂಡಲೇ ಅವರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ತಂದು, ವೈದ್ಯರ ಸಲಹೆಯಂತೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ವಿಷಯ ತಿಳಿದ ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು ಟಿ. ಅವರು ಅರಣ್ಯ ರಕ್ಷಕ ಆನಂದ ಬಳೆಗಾರ ಮತ್ತು ರಕ್ತನಿಧಿ ಕುಂದಾಪುರ ಇಲ್ಲಿನ ಸೂಪರ್ವೈಸರ್ ವೀರೇಂದ್ರ ಗುತ್ತಾಳ್ ಅವರೊಂದಿಗೆ ಆಸ್ಪತ್ರೆಗೆ ಆಗಮಿಸಿ ಘಟನೆಯ ಮಾಹಿತಿ ಪಡೆದರು.
ಸ್ಥಳೀಯರ ಮೆಚ್ಚುಗೆ
ಸರಕಾರದಿಂದ ಸಿಗುವ ವೈದ್ಯಕೀಯ ವೆಚ್ಚದ ಬಿಲ್ಲನ್ನು ಮರು ಪಾವತಿ ಮಾಡುವ ಬಗ್ಗೆ ಕ್ರಮ ವಹಿಸುವುದಾಗಿಯೂ ಭರವಸೆ ನೀಡಿದರು. ಅರಣ್ಯ ಅಧಿಕಾರಿಯ ಸ್ಪಂದನೆ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.