ಮಳೆ ಹಾನಿ: ನಗರಸಭೆ ಹೇಗೆ ಕೆಲಸ ಮಾಡಿತ್ತು?
Team Udayavani, Jun 1, 2018, 2:15 AM IST
ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಲೋಪವಾಗಿದೆಯೇ?
– ಇಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ನಗರಸಭೆ ಎಲ್ಲ ಸಿದ್ಧತೆಗಳನ್ನೂ ಮಾಡಿ ಕೊಂಡಿತ್ತು. ಮೂರು ತಂಡಗಳು ಕಾರ್ಯಾಚರಣೆಯಲ್ಲಿವೆೆ. ಮಳೆಯ ಪ್ರಮಾಣ ಹೆಚ್ಚಿದ್ದ ಕಾರಣ ಸ್ವಲ್ಪ ಸಮಸ್ಯೆ ಎದುರಾಯಿತು.
ಚರಂಡಿ ನಿರ್ವಹಣೆ ಅವ್ಯವಸ್ಥೆಯಿಂದ ಸಮಸ್ಯೆಯಾಯಿತೇ?
– ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಚರಂಡಿ ನಿರ್ವಹಣೆ ಮಾಡಲಾಗಿತ್ತು. ಕೆಲವೆಡೆಗಳಲ್ಲಿ ಪದೇ ಪದೇ ಹೂಳು ತುಂಬಿ ಸಮಸ್ಯೆಯಾಗಿದೆ. ನಗರಸಭೆ ಸಮಾರೋ ಪಾದಿಯಲ್ಲಿ ಕೆಲಸ ಮಾಡಿದೆ.
ಗಂಭೀರ ಸಮಸ್ಯೆ ಉದ್ಭವಿಸಿದೆಯೇ?
– ಅಂತಹ ಗಂಭೀರ ಸಮಸ್ಯೆಯಾಗಿಲ್ಲ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ತೋಡುಗಳ ಸಮೀಪದಲ್ಲಿದ್ದ ಮನೆಗಳಿಗೆ ಹೋಗಿದೆ. ಮಳೆ ಕಡಿಮೆಯಾದ ಅನಂತರ ಸರಿಯಾಗಿದೆ.
ತುರ್ತು ಪರಿಹಾರ ನೀಡಲಾಗಿದೆಯೇ?
– ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವುದಕ್ಕೆ ಸಂಬಂಧಿಸಿ ಅರ್ಜಿ ಕೊಟ್ಟರೆ ನಗರಸಭೆಯಿಂದ ಪರಿಹಾರ ಕೊಡುತ್ತೇವೆ. 2-3 ಅರ್ಜಿ ಬಂದಿದೆ. ಇನ್ನು ಮುಂದಕ್ಕೆ ಅರ್ಜಿಗಳು ಬರಬಹುದು.
ಒಳಚರಂಡಿ ಅವ್ಯವಸ್ಥೆ ಇತ್ತೇ?
– ಒಳಚರಂಡಿ ಅಂತಹ ಗಂಭೀರ ಸಮಸ್ಯೆ ಇರಲಿಲ್ಲ. ಪಂಪ್ ಹಾಳಾದಾಗ ಸ್ವಲ್ಪ ತೊಂದರೆಯಾಗುತ್ತದೆ. ಉಳಿದಂತೆ ಏನೂ ಸಮಸ್ಯೆಯಾಗಿಲ್ಲ.
ಸಹಾಯವಾಣಿ
ಬ್ರಹ್ಮಾವರ: ಜಿಲ್ಲಾ ವ್ಯಾಪ್ತಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗೆ 24×7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಅದರಂತೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯವರು ಕಚೇರಿ ದೂ: 0820-2560494 ಸಂಪರ್ಕಿಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ