ಪೇಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ವಿಶೇಷ ಘಟನೆ


Team Udayavani, May 28, 2018, 4:40 AM IST

koragajja-27-5.jpg

ಕಟಪಾಡಿ: ಕೋಟೆ ರಸ್ತೆಯ ಪೇಟೆಬೆಟ್ಟು ಭಗವಾನ್‌ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕೊರಗಜ್ಜನ ಸನ್ನಿಧಿಯಲ್ಲಿ ಅನ್ಯಮತೀಯ ಬಾಲಕನೊಬ್ಬ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಆತನ ತಂದೆ-ತಾಯಿ ದರ್ಶನ ಸೇವೆ ನಡೆಸಿ ಪರಿಹಾರ ಕಾಣುತ್ತಿರುವ ವಿಶೇಷ ಘಟನೆ ನಡೆದಿದೆ. ಬಾಲಕ ತನ್ನ ಸ್ನೇಹಿತರ ಜತೆ ಸೇರಿಕೊಂಡು ಸನ್ನಿಧಿಯನ್ನು ಅಪವಿತ್ರಗೊಳಿಸಿದ್ದು, ಆ ಬಳಿಕ ಮಾನಸಿಕ ಆಸ್ವಸ್ಥನಂತಾಗಿದ್ದುದಲ್ಲದೆ, ಸೊಂಟದಿಂದ ದೇಹದ ಕೆಳಭಾಗ ನಿಯಂತ್ರಣ ಕಳಕೊಂಡಿದ್ದ ಎನ್ನಲಾಗಿದೆ.

ಘಟನೆಯ ಹಿನ್ನೆಲೆ
ಬಡತನದಲ್ಲಿ ಜೀವನ ಸಾಗಿಸುತ್ತಿರುವ ಇಂದಿರಾ ನಗರ ನಿವಾಸಿ ಅನ್ಯಮತೀಯ ದಂಪತಿ ತಮ್ಮ ಪುತ್ರ ಮಾರ್ಚ್‌ ತಿಂಗಳಾರಂಭದಿಂದ ಮಾನಸಿಕ ಅಸ್ವಾಸ್ಥ್ಯದ ಲಕ್ಷಣಗಳನ್ನು ತೋರ್ಪಡಿಸಲು ಆರಂಭಿಸಿದ್ದರಿಂದ ಚಿಂತೆಗೀಡಾಗಿದ್ದರು. ಪರಿಹಾರ ಕಾಣಲು ಉಡುಪಿಯ ಜೋತಿಷಿಯೋರ್ವರ ಮೊರೆ ಹೊಕ್ಕಿದ್ದರು. ಕೊರಗಜ್ಜನ ಸನ್ನಿಧಾನದಲ್ಲಿ ಗೈದ ಅಕೃತ್ಯದಿಂದಾಗಿ ಯುವಕನಿಗೆ ಈ ಸ್ಥಿತಿ ಒದಗಿದೆ ಎಂದು ತಿಳಿದು ಬಂದಿತ್ತು.

ಪ್ರಸ್ತುತ ಕ್ಷೇತ್ರದ ಆರಾಧಕರೇ ಆಗಿರುವ ಈ ಕುಟುಂಬ ಕೆಲವು ದಿನಗಳ ಹಿಂದೆ ಭಕ್ತರೊಬ್ಬರು ನಡೆಸಿದ ಕೊರಗಜ್ಜನ ದರ್ಶನ ಸೇವೆಯ ಸಂದರ್ಭ ತಮ್ಮ ಕಷ್ಟದ ಬಗ್ಗೆ ಕೇಳಿಕೊಂಡಾಗ ಪ್ರತ್ಯೇಕವಾಗಿ ದರ್ಶನ ಸೇವೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ನುಡಿಯಾಗಿತ್ತು. ಅದರಂತೆ ಮೇ 25ರಂದು ದರ್ಶನ ಸೇವೆ ನೀಡಿದ್ದು, ಕೊರಗಜ್ಜ ದೈವವು ನೀಡಿದ ಅಭಯದಂತೆ ಹಂತಹಂತವಾಗಿ ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಮುಖ್ಯವಾಗಿ ಬಾಲಕನ ಎದೆ ಭಾಗದಲ್ಲಿ ಕಾಣಿಸುತ್ತಿದ್ದ ನೋವು ಮಾಸಿದೆ ಎಂದು ದೈವಸ್ಥಾನದ ಪ್ರಮುಖರು ಮಾಹಿತಿ ನೀಡಿದ್ದಾರೆ.

ಏನಾಗಿತ್ತು?
ಪ್ರತೀ ತಿಂಗಳಿಗೊಮ್ಮೆ ಶ್ರೀ ಕ್ಷೇತ್ರದ ಕಾಣಿಕೆ ಹುಂಡಿಯನ್ನು ತೆರೆಯಲಾಗುತ್ತಿದ್ದು, ಜನವರಿ ತಿಂಗಳಲ್ಲಿ ನಡೆದ ನೇಮದ ಬಳಿಕ ಫೆಬ್ರವರಿಯಲ್ಲಿ ಹುಂಡಿಯನ್ನು ತೆರೆದಾಗ ಅಶುದ್ಧ ವಸ್ತುಗಳು ಕಂಡುಬಂದು ಆಡಳಿತ ಮಂಡಳಿಯವರು ಬೇಸರಗೊಂಡಿದ್ದರು.

ಆಡಳಿತ ಮಂಡಳಿ ಪ್ರಾರ್ಥನೆ
ಅಶುದ್ಧ ವಸ್ತುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದ್ದ ಆಡಳಿತ ಮಂಡಳಿಯವರು, ಮಾನಸಿಕ ಅಸ್ವಸ್ಥರು ಇದನ್ನು ಮಾಡಿದ್ದಾದರೆ ಅವರನ್ನು ಸರಿಪಡಿಸು, ದುರುದ್ದೇಶಪೂರ್ವಕವಾಗಿದ್ದಲ್ಲಿ ಕಾರಣಿಕ ತೋರಿಸುವಂತೆ ಕೇಳಿಕೊಂಡಿದ್ದರು ಎಂದು ಕ್ಷೇತ್ರದ ಪ್ರಧಾನ ಅರ್ಚಕ ಜಯಕರ ಕಲ್ಮಾಡಿ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಈ ಕುಟುಂಬ ಹಿಂದಿನಿಂದಲೂ ಶ್ರೀ ಕ್ಷೇತ್ರದ ಭಕ್ತರು. ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಲು ಕೇಳಿಕೊಂಡಾಗ ನಮ್ಮಿಂದ ಪರಿಹಾರ ಅಸಾಧ್ಯ, ದೈವವೇ ತೀರ್ಮಾನಿಸಬೇಕಾಗಿದೆ ಎಂದು ತಿಳಿಸಿದ್ದೆವು. ಅನಂತರ ದರ್ಶನ ಸೇವೆ ಸಲ್ಲಿಸಿ ಕ್ಷಮೆ ಕೋರಿದ್ದರು. ಶಾಲೆಗೆ ಹೋಗುವ ಮಕ್ಕಳು ಮಾಡಿದ ತಪ್ಪನ್ನು ಕ್ಷಮಿಸುವಂತೆ ನಾವೂ ಪ್ರಾರ್ಥಿಸಿದ ಮೇರೆಗೆ ದೈವ ನೀಡಿದ ವಾಗ್ಧಾನದಂತೆ ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಇನ್ನೋರ್ವ ಬಾಲಕ ಕಿಡ್ನಿ ವೈಫಲ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಲಭಿಸಿದೆ. ಸುಮಾರು 8-10 ಮಕ್ಕಳ ತಂಡದಿಂದ ಈ ಅಕೃತ್ಯ ನಡೆದ ಬಗ್ಗೆ ಮಾಹಿತಿ ಇದೆ. 
– ತುಕಾರಾಮ್‌, ಆಡಳಿತ ಮಂಡಳಿ ಸದಸ್ಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.