ಬಿಕೋ ಎನ್ನುತ್ತಿರುವ ಕೊಲ್ಲೂರು
Team Udayavani, Mar 20, 2020, 1:19 AM IST
ಕೊಲ್ಲೂರು: ಕೋವಿಡ್ 19 ಕಾರಣ ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಬಸ್ನಿಲ್ದಾಣವು ಯಾತ್ರಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದೆ. ದಿನಂಪ್ರತಿ 70 ಖಾಸಗಿ ಬಸ್ ಗಳು ಕೊಲ್ಲೂರಿನಿಂದ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದವು.
ಇದೀಗ ಪ್ರಯಾಣಿಕರ ಸಂಖ್ಯೆ ಕಡಿಮೆ ಯಾಗಿದ್ದು ಗುರುವಾರ ಕೇವಲ 17 ಬಸ್ಗಳು ಸಂಚರಿಸಿವೆ. ಕೊಲ್ಲೂರಿನಿಂದ ವಂಡ್ಸೆ, ಕುಂದಾಪುರ, ಉಡುಪಿ, ಮಂಗಳೂರಿಗೆ ಉದ್ಯೋಗ ನಿಮಿತ್ತ ತೆರಳುತ್ತಿರುವವರಿಗೂ ಇದರಿಂದ ಸಮಸ್ಯೆಯಾಗಿದೆ. ಹೆಚ್ಚಿನವರು ಟ್ಯಾಕ್ಸಿಗಳನ್ನು ಅವಲಂಬಿಸುವಂತಾಗಿದೆ.
ಕೊಲ್ಲೂರಿನ ಚರಿತ್ರೆಯಲ್ಲೇ ಮೊದಲೆನ್ನು ವಂತೆ ದೇಗುಲದ ವಿಶೇಷ ಸೇವೆ ಸ್ಥಗಿತ ಗೊಳಿಸಿ ರುವುದರಿಂದ ಭಕ್ತರಿಲ್ಲದೇ ಇಡೀ ಪೇಟೆ ಕಳೆಗುಂದಿದೆ. ಕೊಡಚಾದ್ರಿ ಸಹಿತ ಇನ್ನಿತರ ಪ್ರವಾಸೋದ್ಯಮ ಕೇಂದ್ರಗಳಿಗೆ ತೆರಳಲು ಯಾತ್ರಾರ್ಥಿಗಳಿಲ್ಲದೆ ಇಲ್ಲಿನ ಜೀಪ್ ಹಾಗೂ ಟ್ಯಾಕ್ಸಿ ಚಾಲಕ, ಮಾಲಕರೂ ನಷ್ಟ ಅನುಭವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು