ಪುತ್ತಿಗೆ ಮಠ: ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಚಾಲನೆ?
Team Udayavani, Apr 21, 2019, 6:14 AM IST
ಉಡುಪಿ: ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಲು ನಿರ್ಧರಿಸಿದ್ದು ಇದರ ಪ್ರಕ್ರಿಯೆ ಶನಿವಾರ ಹಿರಿಯಡಕ ಸಮೀಪದ ಪುತ್ತಿಗೆ ಮೂಲಮಠದಲ್ಲಿ ಆರಂಭವಾಗಿದೆ.
ಉತ್ತರಾಧಿಕಾರಿಯು ಕುಂಜಿಬೆಟ್ಟಿನ ನಿವಾಸಿಯಾಗಿದ್ದು, ಎಂಜಿನಿಯರಿಂಗ್ ಪದವೀಧರರು ಎಂದು ತಿಳಿದುಬಂದಿದೆ.
ಅಷ್ಟಮಠಗಳ ಸ್ವಾಮೀಜಿಯಾಗಿ ಇನ್ನೊಬ್ಬ ಎಂಜಿನಿಯರಿಂಗ್ ಪದವೀಧರ ನೇಮಕವಾದಂತಾಗುತ್ತದೆ. ಶ್ರೀ ಅದಮಾರು ಕಿರಿಯ ಸ್ವಾಮೀಜಿಯವರೂ ಎಂಜಿನಿಯರಿಂಗ್ ಪದವೀಧರರು.