ಅಂಧನಾದರೂ ಸಾಧಿಸುವ ಛಲದ ಶ್ರೀನಿವಾಸ 


Team Udayavani, Jun 30, 2018, 6:00 AM IST

2806kpt6e-srinivas-blind.jpg

ಕಟಪಾಡಿ: ಹುಟ್ಟು ಅಂಧನಾದರೂ ಸಾಧನೆಗೆ ಕಿಂಚಿತ್ತೂ ಕಡಿಮೆ ಇಲ್ಲ. ಸ್ವಂತಕ್ಕೊಂದು ಕ್ಯಾಂಟೀನ್‌ ಇಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ಕೀಬೋರ್ಡ್‌ ನುಡಿಸುವ, ಕಾರು, ಸೈಕಲ್‌ ಹೊಡೆಯುವ, ಕಲಿಕೆಯಲ್ಲಿ ಬಿಎಸ್‌ಡಬ್ಲ್ಯೂ ಪದವಿ ಪಡೆದ ಛಲಗಾರ. ಇವರು ಉಡುಪಿ ಜಿಲ್ಲೆಯ ಉದ್ಯಾವರ ಶಂಭುಕಲ್ಲು ಹಳೆ ಗ್ಯಾಸ್‌ ಗೋಡೌನ್‌ ಬಳಿಯ ನಿವಾಸಿ ಗಣೇಶ ಪೂಜಾರಿ ಮತ್ತು ಜ್ಯೋತಿ ಅವರ ಪುತ್ರ ಶ್ರೀನಿವಾಸ ಪೂಜಾರಿ (23).  

ಇವರು ಮಂಗಳೂರು ಉರ್ವ ಸ್ಟೋರ್‌ನ ರೋಮನ್‌, ಕ್ಯಾಥರಿನ್‌ ಲೋಬೋ ಅಂಧ ಮಕ್ಕಳ ಶಾಲೆಯಲ್ಲಿ 10ನೇ ತರಗತಿ ಶಿಕ್ಷಣ ಪೂರೈಸಿದ್ದು, ಮೂಡಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ  ಬಿ.ಎಸ್‌.ಡಬ್ಲ್ಯೂ ಪದವಿ ಶಿಕ್ಷಣವನ್ನೂ ಪಡೆದಿದ್ದಾರೆ. 

ಕೀಬೋರ್ಡ್‌ ಕಲಾವಿದ 
ನೆಚ್ಚಿನ ಕೀಬೋರ್ಡ್‌ ನುಡಿಸುವ ಶ್ರೀನಿವಾಸ ಈವರೆಗೆ 70ಕ್ಕೂ ಅಧಿಕ ಆರ್ಕೆಸ್ಟ್ರಾ, ಭಜನ ಕಾರ್ಯಕ್ರಮಲ್ಲಿ ಭಾಗಿ ಯಾಗಿದ್ದಾರೆ. 

ಮಿಮಿಕ್ರಿ ಪಟುವಾಗಿಯೂ
ಗುರುತಿಸಿಕೊಂಡಿದ್ದಾರೆ. ಜತೆಗೆ ಯೋಗ ಪಟುವೂ ಹೌದು. ಗಿಟಾರ್‌ ಕೂಡ ನುಡಿಸುತ್ತಾರೆ. ಇವರಲ್ಲಿದ್ದ ಕಲೆ ಗುರುತಿಸಿದ “ಹರ್ಷ’ ಸಂಸ್ಥೆಯ ಮಾಲಕ ಸೂರ್ಯಪ್ರಕಾಶ್‌ ಅವರು ಕೀಬೋರ್ಡ್‌ ಅನ್ನು ಉಡುಗೊರೆಯಾಗಿ ನೀಡಿದ್ದರು. ತುಳು ಕವನ, ಯಕ್ಷಗಾನ ಭಾಗವತಿಕೆಯ ಆಸಕ್ತಿಯೂ ಇವರದು.
 
ಕಾರು, ಸೈಕಲ್‌ ಸವಾರಿ 
ಯಾರ ನೆರವೂ ಇಲ್ಲದೆ, ಪರಿಸರದ ತನ್ನ ಸ್ನೇಹಿತರ ಮನೆಗೆ ಸೈಕಲ್‌ ಸವಾರಿ ಮಾಡುವ ಶ್ರೀನಿವಾಸ ಕಾರು ಚಾಲನೆ ಕೂಡ ಮಾಡುತ್ತಾರೆ. ಟಚ್‌ಸ್ಕ್ರೀನ್‌ ಮೊಬೈಲ್‌ ಅನ್ನು ಆಪರೇಟ್‌ ಮಾಡುತ್ತಾರೆ.  

ಕ್ಯಾಂಟೀನ್‌ ಮೂಲಕ ಸ್ವಾವಲಂಬಿ 
ಅಂಗವಿಕಲರ ಇಲಾಖೆಯಿಂದ 35 ಸಾವಿರ ರೂ. ಸಾಲ ಪಡೆದು, ಸ್ನೇಹಿತರ ಸರಕಾರದಿಂದ 1 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟೀನ್‌ ಶುರುಮಾಡಿದ್ದು, ತಂದೆಯೊಂದಿಗೆ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಇವರಿಗೆ 1,400 ರೂ. ಮಾಸಾಶನ ಬರುತ್ತಿದೆ. ಸರಕಾರಿ ನೌಕರಿ ನಿಮಿತ್ತ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪರೀಕ್ಷೆಯನ್ನು ಮೈಸೂರಿನಲ್ಲಿ ಬರೆದಿದ್ದು, 200ರಲ್ಲಿ 187 ಅಂಕ ಗಳಿಸಿದ್ದರೂ ನೌಕರಿಯ ಸೂಚನೆ ಲಭಿಸಿಲ್ಲ.  

ಸ್ವಾವಲಂಬಿಯಾಗಿ ನೆರವಾಗುವ ಆಸೆ
ಸರಕಾರಿ ನೌಕರಿ ಪಡೆದು ಅಥವಾ ಸ್ವಾವಲಂಬಿಯಾಗಿ ಹೆತ್ತವರು ಮತ್ತು ಇಬ್ಬರು ತಂಗಿಯರಿರುವ ಕುಟುಂಬಕ್ಕೆ ನೆರವಾಗಬೇಕೆಂಬ ಮಹದಾಸೆ ಇದೆ. 
–  ಶ್ರೀನಿವಾಸ ಪೂಜಾರಿ 
ಕೀಬೋರ್ಡ್‌ ಕಲಾವಿದ 

– ವಿಜಯ ಆಚಾರ್ಯ ಉಚ್ಚಿಲ 

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.