ಶಿರ್ವ ಅಂಚೆ ಕಚೇರಿಯಲ್ಲಿ ಸಿಬಂದಿ ಇಲ್ಲದೆ ಪರದಾಟ
Team Udayavani, Jul 25, 2018, 2:05 AM IST
ಶಿರ್ವ: ಗ್ರಾಮೀಣ ಪ್ರದೇಶಗಳಿಗೆ ಕೇಂದ್ರ ಸ್ಥಾನದಂತಿರುವ ಶಿರ್ವ ಉಪ ಅಂಚೆ ಕಚೇರಿಯಲ್ಲಿ ಸಿಬಂದಿ ಇಲ್ಲದ ಕಾರಣಕ್ಕೆ ಇದೀಗ ಗ್ರಾಹಕರು ಪರದಾಟ ನಡೆಸಿದ್ದಾರೆ. ಮಟ್ಟಾರು, ಪಡುಬೆಳ್ಳೆ ಕೋಡು- ಪಂಜಿಮಾರು, ಕುತ್ಯಾರು, ಪೆರ್ನಾಲು ಮತ್ತು ಸೂಡ ಶಾಖೆಗಳು ಶಿರ್ವ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿವೆ. ಈ ಆರೂ ಶಾಖೆಗಳಿಗೆ ಹೋಗುವ ಬಸ್ಸುಗಳ ಸಮಯದಲ್ಲಿ ಅಂಚೆ ಕಳಿಸಬೇಕಿದ್ದು, ಈ ಹೊತ್ತಿನಲ್ಲಿ ಸಿಬಂದಿಗಳಿಗೆ ಕಾರ್ಯದೊತ್ತಡ ಇರುವುದರಿಂದ ಕೌಂಟರ್ನಲ್ಲಿ ದಟ್ಟನೆ ಉಂಟಾಗುತ್ತಿದೆ.
ಶಿರ್ವದ ಹೆಚ್ಚಿನ ಜನರು ವಿದೇಶಗಳಲ್ಲಿದ್ದು ಅಂಚೆ ಕಚೇರಿ ಪ್ರಮುಖ ವ್ಯವಹಾರ ಕೇಂದ್ರವಾಗಿದೆ. ಅಂಚೆ ಸೇವೆಯೊಂದಿಗೆ ಬ್ಯಾಂಕಿಂಗ್ ವ್ಯವಹಾರ ಮತ್ತು ಪೋಸ್ಟಲ್ ಇನ್ಶೂರೆನ್ಸ್ ಸೌಲಭ್ಯವಿದ್ದು ಗ್ರಾಹಕರ ಸಂಖ್ಯೆ ಅಧಿಕವಾಗಿದೆ. ಸಿಬಂದಿ ಕೊರತೆಯಿಂದ ಇಲ್ಲಿ ಸಕಾಲಕ್ಕೆ ಸೇವೆ ಸಿಗುತ್ತಿಲ್ಲ.
ನಿಯೋಜಿತ ಸಿಬಂದಿ ವಾಪಾಸು
ಮೇ ತಿಂಗಳಿನಲ್ಲಿ ಇಲ್ಲಿನ ಸಿಬಂದಿ ಸಮಸ್ಯೆ ಬಗ್ಗೆ ಉದಯವಾಣಿ ವರದಿ ಮಾಡಿದ್ದು ಬಳಿಕ ಬೇರೆ ಕಡೆಯಿಂದ ಸಿಬಂದಿ ನಿಯೋಜಿಸಲಾಗಿತ್ತು. ಆದರೆ ಇದೀಗ ಮತ್ತೆ ಸಿಬಂದಿ ವಾಪಸ್ ಹೋಗಿದ್ದಾರೆ. ಇಲ್ಲಿ ಹಿಂದೆ ಓರ್ವ ಪೋಸ್ಟ್ಮಾಸ್ಟರ್ ಮತ್ತು 4 ಸಿಬಂದಿಯಿದ್ದರೆ ಓರ್ವ ಸಿಬಂದಿ ಕಡಿಮೆಯಿದ್ದಾರೆ. ಕೆಲಸದೊತ್ತಡ ಮತ್ತಷ್ಟು ಹೆಚ್ಚಿರುವುದರಿಂದ ಸಿಬಂದಿ ಸಂಖ್ಯೆ ಏರಿಕೆಯಾಗದೇ ಸಮಸ್ಯೆಯಾಗಿದೆ.
ಇಲ್ಲಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದಾರೆ. ಲಭ್ಯವಿರುವ ಸಿಬಂದಿ ಜನರನ್ನು ಹಿಂದೆ ಕಳುಹಿಸದೇ ಪ್ರತಿಕ್ರಿಯಿಸಬೇಕು.
– ಮೆಲ್ವಿನ್ ಡಿಸೋಜಾ, ಗ್ರಾಹಕರು
ಸಿಬಂದಿ ಕೊರತೆ
ಸಿಬಂದಿ ಕೊರತೆ ಕಾಡುತ್ತಿದೆ. ಉತ್ತಮ ಸೇವೆಯ ದೃಷ್ಟಿಯಿಂದ ಬೆಳಗ್ಗೆ 8ರಿಂದ 6ರ ಅನಂತರವೂ ದುಡಿಮೆ ಮಾಡುತ್ತಿದ್ದೇವೆ. ಸೂಕ್ತ ಸಿಬಂದಿ ನೇಮಿಸಬೇಕೆಂದು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
– ಕೃಷ್ಣಪ್ಪ , ಪೋಸ್ಟ್ ಮಾಸ್ಟರ್, ಶಿರ್ವ
ಸಮಸ್ಯೆ ಪರಿಶೀಲನೆ
ಗ್ರಾಹಕರ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕಾಪುವಿನಿಂದ ಸಿಬಂದಿ ನಿಯೋಜನೆ ಮಾಡಿದ್ದೇವೆ. ಜನರ ಸೇವೆಗೆ ಯಾವುದೇ ಕುಂದು ಬಾರದಂತೆ ಪ್ರಯತ್ನಿಸುತ್ತೇವೆ.
– ರಾಜಶೇಖರ ಭಟ್, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು