ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: “ಕಂತು’ಗೆ ಪ್ರಥಮ ಪ್ರಶಸ್ತಿ


Team Udayavani, Jan 18, 2021, 2:26 AM IST

Untitled-1

ಉಡುಪಿ: ಉಡುಪಿ ರಂಗಭೂಮಿ ವತಿಯಿಂದ ಹಮ್ಮಿಕೊಳ್ಳಲಾದ 41ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ-2020ರ ಪ್ರಥಮ ಬಹುಮಾನವನ್ನು ಬೆಂಗಳೂರಿನ ಸಮಷ್ಠಿ ತಂಡದ “ಕಂತು’ ನಾಟಕ ಪಡೆದುಕೊಂಡಿದೆ.

ಈ ತಂಡವು ಪಿ.ವಿ.ಎಸ್‌. ಬೀಡೀಸ್‌ ಪ್ರಾಯೋಜಿತ ದಿ| ಪುತ್ತು ವೈಕುಂಠ ಶೇಟ್‌ ಸ್ಮಾರಕ ಪ್ರಥಮ ನಗದು ಬಹುಮಾನ 35 ಸಾವಿರ ರೂ. ಮತ್ತು ಸ್ಮರಣಿಕೆ ಹಾಗೂ ಡಾ| ಟಿಎಂಎ ಪೈ ಸ್ಮಾರಕ ಪರ್ಯಾಯ ಫ‌ಲಕವನ್ನು ಸತತವಾಗಿ 3ನೇ ಬಾರಿಗೆ ತನ್ನದಾಗಿಸಿಕೊಂಡಿದೆ.

ದ್ವಿತೀಯ ಬಹುಮಾನವಾದ ದಿ| ಮಲ್ಪೆ ಮಧ್ವರಾಜ್‌ ಸ್ಮಾರಕ ಪ್ರಮೋದ್‌ ಮಧ್ವರಾಜ್‌ ಕೊಡುಗೆಯಾದ 25 ಸಾವಿರ ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ| ಆರ್‌.ಪಿ. ಕೊಪ್ಪೀಕರ್‌ ಸ್ಮಾರಕ ಬಹುಮಾನವು ಧಾರವಾಡ ಸಮುದಾಯ ತಂಡದ “ತಲೆದಂಡ’ ನಾಟಕಕ್ಕೆ ಲಭಿಸಿದೆ.

ಉಡುಪಿ ಸುಮನಸ ಕೊಡವೂರು ತಂಡದ “ನೆರಳಿಲ್ಲದ ಮನುಷ್ಯರು’ ನಾಟಕ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು, ದಿ| ಪಿ. ವಾಸುದೇವ ರಾವ್‌ ಸ್ಮರಣಾರ್ಥ ಸೀತಾ ವಾಸುದೇವ ರಾವ್‌ ಕೊಡುಗೆಯಾದ 15 ಸಾವಿರ ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ದೊರೆತಿದೆ.

ಬಹುಮಾನಗಳ ವಿವರ :

ಶ್ರೇಷ್ಠ ನಿರ್ದೇಶನ: ಪ್ರಥಮ – ಮಂಜುನಾಥ ಎಲ್‌. ಬಡಿಗೇರ (“ಕಂತು’ ನಾಟಕ), ದ್ವಿತೀಯ – ಮಹದೇವ ಹಡಪದ (ತಲೆದಂಡ), ತೃತೀಯ – ಜೆ. ಜೋಸೆಫ್ (ನೆರಳಿಲ್ಲದ ಮನುಷ್ಯರು).

ಶ್ರೇಷ್ಠ ನಟ: ಪ್ರ – ಈರಣ್ಣ ಐನಾಪುರ (ತಲೆದಂಡ-ಬಿಜ್ಜಳ ಪಾತ್ರಧಾರಿ), ದ್ವಿ – ಪರಮೇಶ್ವರ್‌ ಕೆ. (ಕಂತು – ಸದಾನಂದ ಮಾಸ್ತರ್‌ ಪಾತ್ರಧಾರಿ), ತೃ: ಹರಿ ಸಮಷ್ಠಿ (ಕಂತು- ಪಾಂಡುರಂಗರಾಯ ಪಾತ್ರಧಾರಿ).

ಶ್ರೇಷ್ಠ ನಟಿ:  ಪ್ರ – ಸೌಮ್ಯಶ್ರೀ ಮಾರ್ನಾಡ್‌ (ಕಂತು – ಕಾವೇರಿ ಪಾತ್ರಧಾರಿ), ದ್ವಿ-ರಾಧಿಕಾ ದಿವಾಕರ್‌ (ನೆರಳಿಲ್ಲದ ಮನುಷ್ಯರು-ಅಜಿತ ಪಾತ್ರಧಾರಿ), ತೃ-ಕಿರಣಾ (ಕಂತು-ಸರಸ್ವತಿ/ಕಾತ್ಯಾಯಿನಿ ಪಾತ್ರಧಾರಿ).

ಶ್ರೇಷ್ಠ ಸಂಗೀತ: ಪ್ರ-ಮೈಸೂರು ಜಿಪಿಐಇಆರ್‌ ರಂಗತಂಡದ “ಮಂಟೇ ಸ್ವಾಮಿ ಕಥಾ ಪ್ರಸಂಗ’ ನಾಟಕ, ದ್ವಿ- ಕಂತು, ತೃ- ತಲೆದಂಡ.

ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ಪ್ರ-ಕಂತು, ದ್ವಿ- ತಲೆದಂಡ, ತೃ-ನೆರಳಿಲ್ಲದ ಮನುಷ್ಯರು.

ಶ್ರೇಷ್ಠ ಪ್ರಸಾಧನ: ಪ್ರ- ಕಂತು, ದ್ವಿ- ತಲೆದಂಡ, ತೃ- ಮಂಟೇಸ್ವಾಮಿ ಕಥಾ ಪ್ರಸಂಗ.

ಶ್ರೇಷ್ಠ ರಂಗಬೆಳಕು: ಪ್ರ     -ಕಂತು, ದ್ವಿ- ನೆರಳಿಲ್ಲದ ಮನುಷ್ಯರು, ತೃ- ತಲೆದಂಡ.

ಶ್ರೇಷ್ಠ ಹಾಸ್ಯ ನಟನೆ: ಪ್ರ-ಹರೀಶ್‌ ರುದ್ರಯ್ಯ (ಕಂತು-ಬುಗುರಿ ಪಾತ್ರಧಾರಿ).

ಮೆಚ್ಚುಗೆ ಬಹುಮಾನಗಳು: ಕಂತು ನಾಟಕದ ತರ್ಕಶಾಸಿŒ ಪಾತ್ರಧಾರಿ ಶಿವಾನಂದ ಜಿ.ಕೆ., ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕದ ಮಂಟೇಸ್ವಾಮಿ ಪಾತ್ರಧಾರಿ ನವೀನ್‌ ನೇತಾಜಿ, ನೆರಳಿಲ್ಲದ ಮನುಷ್ಯರು ನಾಟಕದ ಕುಂಟಿಯಾ ಪಾತ್ರಧಾರಿ ದಿವಾಕರ್‌ ಕಟೀಲು.

ಪ್ರೊ| ವಸಂತ ಬನ್ನಾಡಿ, ಚಂದ್ರಹಾಸ ಉಳ್ಳಾಲ, ಬೆಳಗೋಡು ರಮೇಶ್‌ ಭಟ್‌, ಪ್ರತಿಭಾ ಎಂ.ವಿ., ಗಣೇಶ್‌ ಮಂದಾರ್ತಿ ತೀರ್ಪುಗಾರರಾಗಿದ್ದರು. ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭವು ಫೆ. 13 ಮತ್ತು ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ಫೆ. 14ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ “ಕಂತು’ ನಾಟಕ ಮರು ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.