ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಕರ್ನಾಟಕದಿಂದ ಅಯೋಧ್ಯೆಗೆ 4,500 ಟನ್‌ ಶಿಲೆ

Team Udayavani, Oct 25, 2021, 7:10 AM IST

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು ಪಂಚಾಂಗ ನಿರ್ಮಾಣಕ್ಕಾಗಿ ಕರ್ನಾಟಕದ 4,500 ಟನ್‌ ಶಿಲೆ ಕಲ್ಲುಗಳು ರವಾನೆಯಾಗುತ್ತಿವೆ.

2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಿಲಾನ್ಯಾಸ ನಡೆದು ಕಾಮಗಾರಿ ಆರಂಭಗೊಂಡಿತ್ತು. ಎಲ್‌ ಆ್ಯಂಡ್‌ ಟಿ, ರೂರ್ಕಿ, ಹೈದರಾಬಾದ್‌, ಚೆನ್ನೈ ಐಐಟಿ, ಟಾಟಾ ಸಂಸ್ಥೆಯವರು ಪರೀಕ್ಷೆ ನಡೆಸಿ ಹಾರುಬೂದಿ, 20 ಎಂಎಂ ಮತ್ತು 10 ಎಂಎಂ ಜಲ್ಲಿ, ಜಲ್ಲಿ ಪುಡಿ, ಅತಿ ಕಡಿಮೆ ಪ್ರಮಾಣದಲ್ಲಿ ಸಿಮೆಂಟ್‌ (ಶೇ. 2.5) ಮಿಶ್ರಣವನ್ನು 425 ಅಡಿ ಉದ್ದ ಮತ್ತು 325 ಅಡಿ ಅಗಲದ ಜಾಗದಲ್ಲಿ 40 ಅಡಿ ಆಳದಲ್ಲಿ ತುಂಬಿಸುವ ಕೆಲಸ ಆರಂಭಿಸಲಾಯಿತು. ಇದಕ್ಕಾಗಿ 40 ಅಡಿ ಮಣ್ಣನ್ನು ಹೊರಗೆ ಹಾಕಿ ವಿಶಿಷ್ಟ ಮಿಶ್ರಣ ತುಂಬಿಸಲಾಗಿದೆ.

ಮಿಶ್ರಣ ತುಂಬಿಸುವ ರೋಲರ್‌ ಕಂಪ್ಯಾಕ್ಟೆಡ್‌ ಕಾಂಕ್ರಿಟ್‌ ಮಿಶ್ರಣವನ್ನು ಒಟ್ಟು 44 ಪದರಗಳಲ್ಲಿ ಹಾಕಿದ್ದಾರೆ. ಒಂದು ಪದರ 12 ಇಂಚಿನಷ್ಟು ದಪ್ಪ ಇದ್ದು, ಇದರ ಮೇಲೆ ರೋಲರ್‌ ಹಾಕಿದಾಗ ಅದು 10 ಇಂಚಿಗೆ ಇಳಿಯುತ್ತದೆ. ಅನಂತರ ಇನ್ನೊಂದು ಪದರ ಹಾಕಬೇಕು. ಹೀಗೆ ಎಲ್ಲ ಪದರಗಳ ಕೆಲಸ ಮುಗಿದಿದೆ.

ಮಣ್ಣು ಹೊರತೆಗೆದು ಅಲ್ಲಿ ತುಂಬಿಸಿರುವ ವಿಶಿಷ್ಟ ಮಿಶ್ರಣದ ಮೇಲೆ ಪಂಚಾಂಗಕ್ಕೆ ಶಿಲೆಗಲ್ಲುಗಳನ್ನು ಹಾಕಲಾಗುತ್ತದೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಲೆಗಲ್ಲಿಗೆ ಈ ಭಾಗ್ಯ ದೊರೆತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿಯ ಹನುಮಾನ್‌ ಗ್ರಾನೈಟ್ಸ್‌ ಸಂಸ್ಥೆ ಕಲ್ಲುಗಳನ್ನು ಪೂರೈಸುತ್ತಿದೆ. ಇದಲ್ಲದೆ ಕಾಶೀ ಸಮೀಪದ ಮಿರ್ಜಾಪುರದ ಶಿಲೆಗಲ್ಲುಗಳನ್ನೂ ತರಿಸಲಾಗುತ್ತಿದೆ. ಏಕಕಾಲದಲ್ಲಿ ಬೇಕಾದಷ್ಟು ಕಲ್ಲುಗಳ ಪೂರೈಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಂಚಿ ಹಾಕಲಾಗಿದೆ. ಈ ಪಂಚಾಂಗದ ಮೇಲೆ ರಾಜಸ್ಥಾನದ ಪಿಂಕ್‌ ಕಲರ್‌ ಕಲ್ಲಿನ (ಕೆಂಪು ಕಲ್ಲು) ಕಟ್ಟೆಯನ್ನು ಕಟ್ಟಲಾಗುತ್ತದೆ. ಇದು 16 ಅಡಿ ಎತ್ತರವಿರುತ್ತದೆ. ಮಂದಿರದ ಮುಖ್ಯ ರಚನೆ ಇದರ ಮೇಲೆ ಬರಲಿದೆ.
ಎಲ್‌ ಆ್ಯಂಡ್‌ ಟಿ ಮತ್ತಿತರ ಎಂಜಿನಿಯರಿಂಗ್‌ ಸಂಸ್ಥೆಯವರು, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ತರು ಚಿಕ್ಕಬಳ್ಳಾಪುರದ ಕಲ್ಲುಗಳನ್ನು ಪರಿಶೀಲಿಸಿ ಆಯ್ಕೆ ಮಾಡಿದ್ದಾರೆ. ಒಂದು ಲೋಡ್‌ ಕಲ್ಲುಗಳನ್ನು (200 ಕಲ್ಲುಗಳು) ಪೂರ್ವಭಾವಿಯಾಗಿ ಕಳುಹಿಸಿದ್ದು ಒಪ್ಪಿಗೆ ಆಗಿದೆ. 4ಗಿ2, 2ಗಿ2 ಅಡಿಯ ಕಲ್ಲುಗಳು ಭದ್ರ ಪಂಚಾಂಗಕ್ಕೆ ಬಳಕೆಯಾಗುತ್ತಿದೆ. ಇದರ ಆರೂ ಮಗ್ಗುಲುಗಳನ್ನು ಫಿನಿಶಿಂಗ್‌ ಮಾಡಿ ಕಳುಹಿಸಲಾಗುತ್ತದೆ.

ಇದನ್ನೂ ಓದಿ:ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಮೊದಲ ಲೋಡ್‌ ಇಂದು ಸಾಗಾಟ
ಪೂಜೆ ಸಲ್ಲಿಸಿ ಕಳುಹಿಸಲೋಸುಗ ಮೊದಲ ಆರ್ಡರ್‌ ಆಗಿ 10 ಲೋಡ್‌ ವಾಹನಗಳಲ್ಲಿ ಕಲ್ಲುಗಳನ್ನು ಕಳುಹಿಸಲು
ಅ. 25ರಂದು ಮುಹೂರ್ತ ನಿಗದಿಯಾಗಿದೆ. ಒಂದು ಲೋಡ್‌ನ‌ಲ್ಲಿ (ಟ್ರಕ್‌) 30 ಟನ್‌ ಕಲ್ಲುಗಳಿರಲಿದ್ದು ಮುಂದಿನ ಮೂರು ತಿಂಗಳಲ್ಲಿ ಒಟ್ಟು 150 ಲೋಡ್‌ ಕಲ್ಲುಗಳು ಅಯೋಧ್ಯೆಗೆ ಹೋಗಲಿವೆ. ಬೆಂಗಳೂರಿನಿಂದ ಹೊರಟ ಟ್ರಕ್‌ ಮೂರು ದಿನಗಳಲ್ಲಿ ಅಯೋಧ್ಯೆ ತಲುಪಲಿದ್ದು ಪಂಚಾಂಗದ ಕಲ್ಲುಗಳನ್ನು ಪೇರಿಸುವ ಕೆಲಸ ಸುಮಾರು 15 ದಿನಗಳಲ್ಲಿ ಆರಂಭವಾಗಲಿದೆ.

ನೀರು ಹೀರದ ಕಲ್ಲು
ಮಂದಿರವನ್ನು ರಾಜಸ್ಥಾನದ ಮಕರಾನ, ಭರತ್‌ಪುರ ಜಿಲ್ಲೆಯ ಬನ್ಸಿಪಹಾಡ್‌ ಪಿಂಕ್‌ ಸ್ಟೋನ್‌ನಿಂದ ನಿರ್ಮಿಸಲಾಗುತ್ತದೆ. ಕರ್ನಾಟಕದ (ಚಿಕ್ಕಬಳ್ಳಾಪುರ) ಕಲ್ಲುಗಳನ್ನು ಪಂಚಾಂಗಕ್ಕೆ ಬಳಸಲಾಗುತ್ತಿದೆ. ಇದೇಕೆಂದರೆ ಈ ಕಲ್ಲುಗಳು ನೀರನ್ನು ಹೀರುವುದಿಲ್ಲ. ದೇವಸ್ಥಾನದ ಪ್ಲಿಂತ್‌ ಏರಿಯಾದ ಭದ್ರ ಪಂಚಾಂಗವನ್ನು ಈ ಕಲ್ಲುಗಳಿಂದ ನಿರ್ಮಿಸಲಾಗುತ್ತಿದೆ. ಮಂದಿರದ ಬಾಳಿಕೆಗಾಗಿ ಈ ಕಲ್ಲುಗಳನ್ನು ಆಯ್ಕೆ ಮಾಡಲಾಗಿದೆ.
– ಕೇಶವ ಹೆಗ್ಡೆ, ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‌, ಕರ್ನಾಟಕ, ಆಂಧ್ರಪ್ರದೇಶ

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಅ. 25ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿಯ ಹನುಮಾನ್‌ ಗ್ರಾನೈಟ್ಸ್‌ನಿಂದ ಚಿಕ್ಕಬಳ್ಳಾಪುರದ ಶಿಲೆಕಲ್ಲುಗಳಿಗೆ ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ.
– ಮುನಿರಾಜು, ವಿಶೇಷ ಸಂಪರ್ಕ
ಸಹ ಪ್ರಮುಖ್‌, ವಿಹಿಂಪ,
ಕರ್ನಾಟಕ ದಕ್ಷಿಣ ಪ್ರಾಂತ, ಬೆಂಗಳೂರು

 

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.