“ಸ್ಟಾಪ್ಲೆಸ್ಟಿಕ್ ಮಣಿಪಾಲ್’ ಆಂದೋಲನ ಆರಂಭ
Team Udayavani, Oct 11, 2019, 5:52 AM IST
ಉಡುಪಿ: ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಬೇಡವೆಂಬ ಆಂದೋಲನ “ಸ್ಟಾಪ್ಲೆಸ್ಟಿಕ್ ಮಣಿಪಾಲ್‘ ಮಣಿಪಾಲದಲ್ಲಿ ಆರಂಭವಾಗಿದೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಮಾಡದಿರಲು ಮತ್ತು ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತು ಬುಧವಾರ ಆಂದೋಲನ ನಡೆಸಿದರು. ಗ್ರಾಹಕರು, ಅಂಗಡಿ ಮಾಲಕರಿಗೆ ಜಾಗೃತಿ ರೂಪಿಸುವ ಪ್ರಯತ್ನದಲ್ಲಿ ಕಾರ್ಯಕ್ರಮ ನಡೆಸಲಾಯಿತು.
“ನಮ್ಮ ಕಡಲ ಕಿನಾರೆಗಳು ಮತ್ತು ಬೆಟ್ಟ ಗುಡ್ಡಗಳು ನಗರ ಸುತ್ತಮುತ್ತಲಿನವರ ತ್ಯಾಜ್ಯದಿಂದ ತುಂಬಿ ಹೋಗಿವೆ. ಸ್ಟಾಪ್ಲೆಸ್ಟಿಕ್ ಮಣಿಪಾಲ್ ಪ್ಲಾಸ್ಟಿಕ್ರಹಿತ ವಾತಾವರಣದ ಗುರಿ ಹೊಂದಿದೆ’ ಎಂದು ವಿದ್ಯಾರ್ಥಿಗಳು ಹೇಳಿದರು.
ಇದಕ್ಕಾಗಿ ಡಿಜಿಟಲ್ ಆಂದೋಲನವನ್ನು ಆರಂಭಿಸಲಾಗಿದ್ದು ಸಾರ್ವಜನಿಕ ಪ್ರಚಾರಾರ್ಥ ಆಂದೋಲನ ನಡೆಸಲಾಯಿತು.
ವಿದ್ಯಾರ್ಥಿಗಳ ಗುಂಪು ಮಣಿಪಾಲದ ಜನನಿಬಿಡ ಪ್ರದೇಶಗಳಲ್ಲಿ ತ್ಯಾಜ್ಯದ ಬ್ಯಾಗ್ನ್ನು ತಲೆಗೆ ಮುಚ್ಚಿಕೊಂಡು ವಿಶಿಷ್ಟ ರೀತಿಯಲ್ಲಿ ಜಾಗೃತಿ ರೂಪಿಸುವ ಮೂಲಕ ಮಾನವ ಜೀವಿಗಳನ್ನು ಪ್ಲಾಸ್ಟಿಕ್ ಹೇಗೆ ನುಂಗುತ್ತಿದೆ ಎಂಬುದನ್ನು ತೋರಿಸಲಾಯಿತು.
ಸ್ಟೂಡೆಂಟ್ ಪ್ಲಾಜಾ, ಟೈಗರ್ ಸರ್ಕಲ್, ಉಪೇಂದ್ರ ಪೈ ಸರ್ಕಲ್, ಎಂಐಟಿ ಮುಖ್ಯದ್ವಾರ, ಕೆನರಾ ಮಾಲ್, ವಿದ್ಯಾರ್ಥಿಗಳ ಹಾಸ್ಟೆಲ್, ಎಂಡ್ ಪಾಯಿಂಟ್, ಸರಳೆಬೆಟ್ಟು ರಸ್ತೆ, ಮಾಹೆ ವಿ.ವಿ. ಕಟ್ಟಡ, ಕೆಎಂಸಿ ಮೊದಲಾದೆಡೆ ಆಂದೋಲನ ನಡೆಸಲಾಯಿತು.
ವಿಶಿಷ್ಟ ಆಂದೋಲನವನ್ನು ಕಂಡ ಸಾರ್ವಜನಿಕರು ಕುತೂಹಲಗೊಂಡರು. ಈ ತೆರನಾದ ಜನಜಾಗೃತಿ ಪ್ರಯತ್ನ ಇದೇ ಮೊದಲ ಬಾರಿ ಮಣಿಪಾಲದಲ್ಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ