ಕೊಲ್ಲೂರು ಪರಿಸರದಲ್ಲಿ ಬಿರುಸಿನ ಕೃಷಿ ಚಟುವಟಿಕೆ
Team Udayavani, Jul 16, 2019, 5:51 AM IST
ಕೊಲ್ಲೂರು: ಸತತ 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಪರಿಸರದ ಕೃಷಿಕರು ಬಿರುಸಿನ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.
ಜಡ್ಕಲ್, ಮುದೂರು, ಇಡೂರು, ವಂಡ್ಸೆ, ಕೆರಾಡಿ, ಹೊಸೂರು, ಬೆಳ್ಳಾಲ, ಮೂಡಮುಂದು, ನೆಂಪು, ನೂಜಾಡಿ, ದೇವಲ್ಕುಂದ ಪರಿಸರದಲ್ಲಿ ಕೃಷಿ ಕಾರ್ಯ ಚುರುಕಿನಿಂದ ನಡೆಯುತ್ತಿದೆ.
ರೈತರಲ್ಲಿ ಮಂದಹಾಸ
ಜೂನ್ ತಿಂಗಳಲ್ಲಿ ಕಡಿಮೆ ಪ್ರಮಾಣದ ಮಳೆಯಿಂದಾಗಿ ಚಿಂತಾಗ್ರಸ್ತರಾದ್ದ ಈ ಭಾಗದ ಕೃಷಿಕರು ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹರ್ಷಿತರಾಗಿದ್ದಾರೆ.
ತೆಂಗು, ಕಂಗು, ಬಾಳೆ ಭತ್ತ ಬೆಳೆಯುವ ಕೃಷಿಕರು ದಿನವಿಡೀ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರ್ಮಿಕರ ಕೊರತೆ
ಭತ್ತದ ಗದ್ದೆಯ ಉಳುಮೆಗೆ ವಿವಿಧ ವಿನೂತನ ಮಾದರಿಯ ಯಂತ್ರಗಳ ಬಳಕೆ ನಡೆಯುತ್ತಿದೆ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಗ್ರಾಮೀಣ ಪ್ರದೇಶದ ಅನೇಕ ಕಾರ್ಮಿಕರು ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ತೆರಳಿರುವುದರಿಂದ ಇರುವ ಕಾರ್ಮಿಕರಿಗೆ ದುಬಾರಿ ಕೂಲಿ ತೆರಬೇಕಾದ ಪ್ರಸಂಗ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ