ಉಡುಪಿ ನಗರದಲ್ಲಿ ದಾರಿದೀಪ, ಹೈಮಾಸ್ಟ್‌ಗೆ ಗ್ರಹಣ


Team Udayavani, Jun 20, 2018, 2:10 AM IST

light-udp-19-6.jpg

ವಿಶೇಷ ವರದಿ – ಉಡುಪಿ: ನಗರದಲ್ಲಿ ದಾರಿದೀಪ, ಹೈಮಾಸ್ಟ್‌ ದೀಪಗಳಿಗೆ ಗ್ರಹಣ ಬಡಿದಿದೆ. ದೀಪಗಳು ಆಗಾಗ್ಗೆ ಕೈ ಕೊಡುತ್ತಿದ್ದರೂ, ಅವುಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಹೈಮಾಸ್ಟ್‌ ದೀಪ ಸ್ವಿಚ್‌ ಆಫ್
ತೆಂಕಪೇಟೆ ವಾರ್ಡ್‌ನಲ್ಲಿರುವ ಶ್ರೀಕೃಷ್ಣ ಮಠದ ರಥಬೀದಿಯ ನಾಲ್ಕು ದಿಕ್ಕುಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ಈ ಪೈಕಿ ಶ್ರೀ ಸೋದೆ ಮಠ ಮತ್ತು ಶ್ರೀ ಪೇಜಾವರ ಮಠದ ಸಮೀಪದಲ್ಲಿರುವ ದೀಪಗಳು ಕೈಕೊಟ್ಟು ತಿಂಗಳುಗಳೇ ಕಳೆದಿವೆೆ. ಉಡುಪಿ ಸಿಟಿ ಬಸ್ಸು ನಿಲ್ದಾಣದಲ್ಲೂ ಇದೇ ಕಥೆ. ಒಂದು ತಿಂಗಳಿನಿಂದ ಕೆಟ್ಟು ಹೋಗಿದ್ದ ಹೈಮಾಸ್ಟ್‌ ದೀಪವನ್ನು ಜೂನ್‌ ಮೊದಲ ವಾರಗಳಲ್ಲಿ ಸರಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಹೈವೋಲ್ಟೇಜ್‌ ಬಂದು ಹೈಮಾಸ್ಟ್‌ ದೀಪ ಮತ್ತೆ ಕೆಟ್ಟು ಹೋಗಿದೆ. ಉಳಿದಂತೆ ರಥಬೀದಿ, ರಾಜಾಂಗಣ, ಸರ್ವೀಸ್‌, ಸಿಟಿ ಬಸ್‌ ನಿಲ್ದಾಣ, ಸಿಪಿಸಿ ಪ್ಲಾಜಾದ ಬಳಿ ಇನ್ನಿತರ ಕಡೆಗಳಲ್ಲಿ ಹೈಮಾಸ್ಟ್‌ ದೀಪಗಳಿವೆೆ.

ನಿರ್ವಹಣೆ ಕಳಪೆ 
ದಾರಿದೀಪ ನಿರ್ವಹಣೆ ಕಳಪೆಯಾಗಿದೆ ಎಂದು ನಗರಸಭೆ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ದನಿ ಎತ್ತಿದ್ದರು. ನಿರ್ವಹಣೆ ಸರಿಯಾಗಿ ಮಾಡಿ, ಇಲ್ಲವಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಗಲಾಟೆಯನ್ನೂ ಮಾಡಿದ್ದರು. ಆದರೂ ಸಮಸ್ಯೆ ಹಾಗೆಯೇ ಇದೆ. ನಗರಸಭೆಗೆ ದೂರು ಕೊಟ್ಟು ಸಮಸ್ಯೆ ಬಗೆಹರಿಯದ ಕಾರಣ ಜನ ರೋಸಿ ಹೋಗಿದ್ದಾರೆ. ರಾತ್ರಿ ಹೊತ್ತು ಕತ್ತಲಲ್ಲಿ ಮಕ್ಕಳು, ಮಹಿಳೆಯರು ಭಯದಿಂದಲೇ ನಡೆದಾಡುವ ದುಃಸ್ಥಿತಿ ಇದೆ. ಮಳೆಗಾಲವಾದ್ದರಿಂದ ಅಲ್ಲಲ್ಲಿ ಸಮಸ್ಯೆಯಾಗಿದೆ. ಶೀಘ್ರ ಸರಿಯಾಗುತ್ತದೆ ಎಂದು ನಗರಸಭೆಯವರು ಹೇಳುತ್ತಾರೆ. ಈ ಬಾರಿಯ ಸಿಡಿಲಿಗೆ ನಗರದಲ್ಲಿನ ಕಂಬಗಳಲ್ಲಿದ್ದ 200ಕ್ಕೂ ಅಧಿಕ ಟೈಮರ್‌ ಗಳು ಕೆಟ್ಟು ಹೋಗಿದೆ.

ರಾತ್ರಿ ಉರಿಯದ ದೀಪ ಹಗಲು ಉರಿಯುತ್ತದೆ! 
ನಗರದಲ್ಲಿ ದಾರಿದೀಪಗಳ ನಿರ್ವಹಣೆ ಸಮಸ್ಯೆ ವಿಪರೀತ ಹೆಚ್ಚುತ್ತಲಿದೆ. ದೂರು ಕೊಟ್ಟು ತಿಂಗಳು ಕಳೆದರೂ ದೀಪಗಳ ದುರಸ್ತಿಯಾಗುತ್ತಿಲ್ಲ. ಕೆಲ ಕಡೆಗಳಲ್ಲಿ ರಾತ್ರಿ ದೀಪಗಳು ಉರಿಯುತ್ತಿಲ್ಲ. ಕಂಬದಲ್ಲಿ ಅಳವಡಿಸಿರುವ ಟೈಮರ್‌ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಹಗಲಲ್ಲೂ ದಾರಿದೀಪ ಉರಿಯುವಂತಾಗಿದೆ.

ದುರಸ್ತಿ ಸಮಸ್ಯೆ ಇದೆ
ಹೈಮಾಸ್ಟ್‌ ದೀಪ ಹಾಳಾಗಿರುವ ಬಗ್ಗೆ ನಗರಸಭೆ ಗಮನಕ್ಕೆ ತಂದಿದ್ದೆ. ಆದರೆ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಉಡುಪಿಯವರಿಗೆ ಟೆಂಡರ್‌ ಕೊಡದೆ ಅನ್ಯಜಿಲ್ಲೆಯವರಿಗೆ ಕೊಟ್ಟರೆ ಇದೇ ಸಮಸ್ಯೆ. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರೂ ಆಡಳಿತ ನಡೆಸುತ್ತಿರುವವರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ನಗರಸಭೆಯ ಆನ್‌ಲೈನ್‌ ದೂರು ಸ್ವೀಕರಿಸುವ ಜನಹಿತ ವಿಭಾಗವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ.
– ಶ್ಯಾಂ ಪ್ರಸಾದ್‌ ಕುಡ್ವ, ನಗರಸಭಾ ಸದಸ್ಯ

ತಿಂಗಳಾಂತ್ಯದೊಳಗೆ ಸರಿಯಾಗುತ್ತದೆ
5 ಲ.ರೂ.ಗಿಂತ ಜಾಸ್ತಿ ಮೊತ್ತದ ಕಾಮಗಾರಿಗಳಿಗೆ ಇ-ಪ್ರೊಕ್ಯೂರ್‌ವೆುಂಟ್‌ ಪ್ರಕಾರ ಆನ್‌ಲೈನ್‌ ಟೆಂಡರ್‌ ಕರೆಯಬೇಕು ಎನ್ನುವ ನಿಯಮ ಇದೆ. ಆ ಪ್ರಕಾರ ಟೆಂಡರ್‌ ಶಿವಮೊಗ್ಗದ ಗುತ್ತಿಗೆದಾರರ ಪರವಾಗಿದೆ.  ಹೊಸ ಟೆಂಡರ್‌ ನಲ್ಲಿ ಸಮಸ್ಯೆ ಸರಿಯಾಗಲಿದೆ. ಈ ನಡುವೆ ಸಿಡಿಲಿಗೆ 200 ಟೈಮರ್‌ಗಳು  ಹಾಳಾಗಿವೆೆ. ಹಾಳಾದ ಹೈಮಾಸ್ಟ್‌ ದೀಪಕ್ಕೆ ಅಗತ್ಯ ಸಲಕರಣೆ ಹೊಂದಾಣಿಕೆಯಾಗದೆ ತಡವಾಗಿದೆ. ಈ ತಿಂಗಳಾಂತ್ಯದೊಳಗೆ ಸಮಸ್ಯೆ ಬಗೆಹರಿಯುತ್ತದೆ.
– ಜನಾರ್ದನ ಭಂಡಾರ್ಕರ್‌, ನಗರಸಭೆ ಸದಸ್ಯರು

ಇಂದೇ ಚರ್ಚೆ ನಡೆಸುವೆ
ನಗರಸಭೆ ಅಧಿಕಾರಿಗಳೊಂದಿಗೆ ಜೂ. 20ರ ಅಪರಾಹ್ನ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದೇನೆ. ದಾರಿದೀಪ, ಹೈಮಾಸ್ಟ್‌ ದೀಪಗಳ ನಿರ್ವಹಣೆ ಕುರಿತು ಇದೇ ಸಭೆಯಲ್ಲಿ ಚರ್ಚಿಸಲಿದ್ದೇನೆ. ಕಳಪೆ ನಿರ್ವಹಣೆ ಬಗ್ಗೆ ನಗರದ ಸಾರ್ವಜನಿಕರಿಂದ ನನಗೂ ದೂರುಗಳು ಬಂದಿವೆೆ. ಹಿಂದೆ ಉಡುಪಿ ನಗರದ ಗುತ್ತಿಗೆದಾರರೊಬ್ಬರು ಉತ್ತಮವಾಗಿ ದಾರಿದೀಪಗಳ ನಿರ್ವಹಣೆ ಕಾರ್ಯ ಮಾಡುತ್ತಿದ್ದರು. ಈಗ ಶಿವಮೊಗ್ಗದ ಗುತ್ತಿಗೆದಾರರಿಗೆ ಟೆಂಡರ್‌ ಕೊಟ್ಟಿದ್ದಾರೆ. ಇದೇ ಪ್ರಮುಖ ಸಮಸ್ಯೆ. ರೀಟೆಂಡರ್‌ ಕರೆಯಲು ಸೂಚಿಸುತ್ತೇನೆ.
– ಕೆ. ರಘುಪತಿ ಭಟ್‌, ಉಡುಪಿ ಶಾಸಕರು

ಟಾಪ್ ನ್ಯೂಸ್

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.