ಕಠಿನ ಲಾಕ್ಡೌನ್ : ಪಡಿತರ ತರಲು ಗ್ರಾಮಾಂತರ ಭಾಗದ ಜನರ ಪ್ರಯಾಸ
Team Udayavani, May 11, 2021, 6:45 AM IST
ಕುಂದಾಪುರ: ಕಠಿನ ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹಾಕಿದ್ದರಿಂದ ಗ್ರಾಮಾಂತರ ಭಾಗದಲ್ಲಿ ಪಡಿತರ ತರಲು, ಹಾಲಿನ ಡೈರಿಗೆ ಹೋಗಲು ಜನ ಪ್ರಯಾಸ ಪಡುವಂತಾಗಿದೆ. ವಾಹನಗಳಲ್ಲಿ ಹೋಗಲು ತಡೆಯೊಡ್ಡಿದ್ದರಿಂದ ಹತ್ತಾರು ಕಿ.ಮೀ. ನಡೆದುಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕುಂದಾಪುರದ ಅಮಾಸೆಬೈಲಿನ ಕೆಲಾ ಪರಿಸರದ ಜನ ಹಾಲಿನ ಡೈರಿಗೆ ಹೋಗಿ ಬರಲು ಒಟ್ಟಾರೆ 8 ಕಿ.ಮೀ. ನಡೆಯಬೇಕಾಗಿದೆ. ಇನ್ನು ಪಡಿತರ ತರಬೇಕಾದರೆ 16-18 ಕಿ.ಮೀ. ದೂರ ಕ್ರಮಿಸಬೇಕು. ಇಷ್ಟು ದೂರ ಬೆಳಗ್ಗೆ 6ರಿಂದ 10ರೊಳಗೆ ನಡೆದುಕೊಂಡು ಹೋಗಿ, 20-25 ಕೆ.ಜಿ. ಅಕ್ಕಿ, ಸಕ್ಕರೆ ತರಲು ಸಾಧ್ಯವೇ ಎನ್ನುವುದು ಜನರ ಪ್ರಶ್ನೆಯಾಗಿದೆ.
ಇದು ಕೇವಲ ಈ ಒಂದು ಊರಿನ ಸಮಸ್ಯೆಯಲ್ಲ. ರಾಜ್ಯದೆಲ್ಲೆಡೆ ಈ ಸಮಸ್ಯೆ ಎಲ್ಲ ಕಡೆ ಇರಬಹುದು. ಹಾಲಿನ ಡೈರಿ, ಪಡಿತರವಲ್ಲದೇ ಗ್ರಾಮೀಣ ಪ್ರದೇಶದ ಜನರು ಅಗತ್ಯ ವಸ್ತುಗಳ ಖರೀದಿಗೆ ಕಿ.ಮೀ.ಗಟ್ಟಲೆ ದೂರ ಕಾಲ್ನಡಿಗೆಯಲ್ಲಿ ಸಾಗುವುದು ಅನಿವಾರ್ಯವಾಗಿದೆ.
ಗಾಯದ ಮೇಲೆ ಬರೆ
ಸರಕಾರ, ಜಿಲ್ಲಾಡಳಿತಗಳು ಲಾಕ್ಡೌನ್ ಮಾರ್ಗಸೂಚಿ ಮಾಡುವಾಗ ಗ್ರಾಮೀಣ ಭಾಗದ ಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಿ. ನಮ್ಮಲ್ಲಿ ದಿನಸಿ ತರಬೇಕೆಂದ್ರೆ 10 ಕಿ.ಮೀ. ನಡೆದೇ ಹೋಗಬೇಕು. ಇನ್ನು ಮೆಡಿಕಲ್ಗೆ ಹೋಗಬೇಕು ಅಂದ್ರೆ 20 ಕಿ.ಮೀ ಕ್ರಮಿಸಬೇಕು. ಹೀಗಿರುವಾಗ ನಡೆದುಕೊಂಡೇ ಹೋಗಬೇಕು ಅಂತ ನಿಯಮ ರೂಪಿಸಿದ್ರೆ ಈ ಕಾಡಿನ ಮಧ್ಯೆ ಜನರು ಹೇಗೆ ಹೋಗಬೇಕು..? ಮೊದಲೇ ಮೂಲ ಸೌಕರ್ಯಗಳಿಲ್ಲದೆ ಒದ್ದಾಡುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆಯಬೇಡಿ.ಸರಕಾರ ಮತ್ತು ಜಿಲ್ಲಾಡಳಿತ ದಯವಿಟ್ಟು ಹಳ್ಳಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅವರಿಗೆ ದಿನಸಿ, ಪಡಿತರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ತರುವುದಕ್ಕೆ ವಾಹನದ ಬಳಕೆಗೆ ಅವಕಾಶ ನೀಡಲಿ ಎನ್ನುವುದು ಗ್ರಾಮೀಣ ಪ್ರದೇಶದ ಜನರ ಒತ್ತಾಯವಾಗಿದೆ.
ಪಡಿತರಕ್ಕೆ ಅವಕಾಶ
ಗ್ರಾಮೀಣ ಭಾಗದಲ್ಲಿ ಪಡಿತರ ತರಲು ಸಾಕಷ್ಟು ದೂರವಿರುವುದರಿಂದ, ಪಡಿತರಕ್ಕೆ ಬಾಡಿಗೆ ವಾಹನ ಮಾಡಿಕೊಂಡು ಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಹೈನುಗಾರಿಕೆ, ಕೃಷಿ ಸಂಬಂಧಿ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ.
– ಜಿ. ಜಗದೀಶ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ