ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
Team Udayavani, May 6, 2017, 3:39 PM IST
ಸಿದ್ದಾಪುರ: ಸ್ನೇಹಿತರೊಂದಿಗೆ ಸೇರಿ ನದಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿಯೊಬ್ಬ ವಾರಾಹಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಶಂಕರನಾರಾಯಣದ ಶಾಡಿಗುಂಡಿ ಬಳಿ ಸಂಭವಿಸಿದೆ.
ಅಂಪಾರು ಮೂಡುಬಗೆ ನಿವಾಸಿ ಸುಬ್ಬಣ್ಣ ಶೆಟ್ಟಿ ಅವರ ಕಿರಿಯ ಪುತ್ರ ಅಮೋಘ ಶೆಟ್ಟಿ (19) ಮೃತಪಟ್ಟವರು. ಆತ ಶಂಕರನಾರಾಯಣ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ್ದು, ಎರಡು ದಿನಗಳ ಹಿಂದೆ ಸಿಇಟಿ ಪರೀಕ್ಷೆ ಬರೆದಿದ್ದರು.
ಅಮೋಘ ಹಾಗೂ 8 ವಿದ್ಯಾರ್ಥಿಗಳು ಮಧ್ಯಾಹ್ನ ಕುಂಬಾರಮಕ್ಕಿ ಬಳಿಯ ಶಾಡೆಗುಂಡಿ ಹತ್ತಿರದ ವಾರಾಹಿ ನದಿಗೆ ಈಜಲು ತೆರಳಿದ್ದರು. ಸ್ನೇಹಿತ ರೆಲ್ಲ ಸೇರಿ ಈಜುತ್ತಿದ್ದರೆ, ಅಮೋಘ ಶೆಟ್ಟಿ ಮಾತ್ರ ಈಜು ಬಾರದ ಕಾರಣ ನದಿಯ ದಂಡೆಯ ಮೇಲೆ ಕುಳಿತು ನೋಡುತ್ತಿದ್ದರು.
ಇದ್ದಕ್ಕಿದ್ದಂತೆ ಸ್ನೇಹಿತನೊಬ್ಬ ನೀರಿನಲ್ಲಿ ಮುಳುಗಿದ್ದನ್ನು ನೋಡಿ ಆತನನ್ನು ರಕ್ಷಿಸಲು ಅಮೋಘ ಸಹಿತ ಎಲ್ಲರೂ ನೀರಿಗೆ ಧುಮುಕಿದ್ದರು. ಮುಳುಗಿದವನು ಸೇರಿ ಇನ್ನೀತರ ಸ್ನೇಹಿತರು ನೀರಿನಿಂದ ಮೇಲೆ ಬಂದರು. ಆದರೆ ಅಮೋಘ ಸುಳಿಗೆ ಸಿಲುಕಿ ಮೃತಪಟ್ಟರು.
ಅಮೋಘ ಶೆಟ್ಟಿ ಅವರ ತಂದೆ ಸುಬ್ಬಣ್ಣ ಶೆಟ್ಟಿ ಗುತ್ತಿಗೆದಾರರಾಗಿದ್ದು, ತಾಯಿ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ