“ಯಶಸ್ವಿ ಸಮುದಾಯದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯ’
Team Udayavani, Oct 5, 2019, 5:19 AM IST
ಕೊಲ್ಲೂರು: ಬೈಂದೂರು ವಲಯ ಮರಾಟಿ ಉದ್ಯೋಗಿಗಳ ಸಂಘದ ಆಶ್ರಯದಲ್ಲಿ ನಡೆದ ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ವಿತರಣೆ, ನಿವೃತ್ತ ಭೂಸೇನಾನಿ ಹಾಗೂ ಉತ್ತಮ ಶಿಕ್ಷಕ ಪುರಸ್ಕೃತರಿಗೆ ಸಮ್ಮಾನ ಕಾರ್ಯಕ್ರಮ ಜಡ್ಕಲ್ನಲ್ಲಿ ನಡೆಯಿತು.
ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ| ಶೇಖರ್ ನಾಯ್ಕ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಶಸ್ವಿ ಸಮುದಾಯದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯ. ದೇಶದ ನಿರ್ಮಾಣದೊಡನೆ ಸಮಾಜದ ಅಭಿವೃದ್ಧಿಯಾಗಬೇಕು. ಸಮಾಜ ಬಾಂಧವರು ಸುಶಿಕ್ಷಿತರಾಗಬೇಕು ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ, ಒ.ಎನ್. ಜಿ.ಸಿ.ಯ ನಿವೃತ್ತ ಡಿ.ಜಿ.ಎಂ. ನಾರಾಯಣ ನಾಯ್ಕ ಮಾತನಾಡಿ, ಸಮಾಜಮುಖೀ ಕಾರ್ಯಗಳೊಡನೆ ಸಾಮಾಜಿಕ ಕಳಕಳಿ ಇದ್ದಲ್ಲಿ ಸಾಮೂಹಿಕವಾಗಿ ಸಮಾಜದ ಅಭಿವೃದ್ಧಿª ಸಾಧ್ಯ ಎಂದರು.
ಕಾರ್ಕಳ ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಬಿ., ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ರಾಮಯ್ಯ ನಾಯ್ಕ, ಸಮಾಜದ ಮುಖಂಡ ರಂಗ ನಾಯ್ಕ, ಮೋಹಿನಿ ಬಾಯಿ, ಮುತ್ತಯ್ಯ ಮರಾಟ, ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಉಪಸ್ಥಿತರಿದ್ದರು,ರಾಮಕೃಷ್ಣ ಮರಾಟ ಸ್ವಾಗತಿಸಿದರು. ಮಂಜುನಾಥ ಮರಾಟ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ದಶಮಾನೋತ್ಸವ ವರದಿ ವಾಚಿಸಿದರು. ಉದಯ ನಾಯ್ಕ ಹುಲ್ಕಡಿಕೆ ನಿರೂಪಿಸಿ, ಕೆ.ಎಂ. ಹೋಸೆರಿ ವಂದಿಸಿದರು.
25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸ ಲಾಯಿತು. ನಿವೃತ್ತ ಭೂಸೇನೆ ಯೋಧ ಪ್ರಭಾಕರ ನಾಯ್ಕ ಶಂಕರನಾರಾಯಣ, ಸಂಜೀವ ಮರಾಟ ಹುಲ್ಕಡಿಕೆ, ಉತ್ತಮ ಜಿಲ್ಲಾ ಶಿಕ್ಷಕಿ ಪುರಸðತ ಮೋಹಿನಿ ಬಾಯಿ, ಜೀವ ರಕ್ಷಕ ನವೀನ್ ಕೊಲ್ಲೂರು, ಸಮುದಾಯದ ಮೊದಲ ಪದವಿ ವೈದ್ಯೆ ನಿವೇದಿತಾ ನಂದಿಗದ್ದೆ ಅವರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ