ಸಜೆಯಾಗದಿರಲಿ ಬೇಸಗೆ ರಜೆ : ಮಕ್ಕಳ ನೀರಾಟದ ಬಗ್ಗೆ ಇರಲಿ ಎಚ್ಚರ

ಅಪಾಯಕಾರಿ ಹೊಂಡಗಳ ಬಗ್ಗೆ ಜಾಗೃತಿ ಇರಲಿ ; ಮೃತ್ಯುಕೂಪವಾಗಿರುವ ಗಣಿಗಾರಿಕೆ ಹೊಂಡಗಳು

Team Udayavani, Apr 6, 2019, 6:00 AM IST

0504KOTA5E

ಕೋಟ: ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿ ಮುಗಿದು ಬೇಸಗೆ ರಜೆಯ ಮಜಾ ಆರಂಭ ಗೊಳ್ಳುತ್ತಿದೆ. ಪ್ರತಿ ವರ್ಷ ಈ ಸಂದರ್ಭಗಳಲ್ಲಿ ನೀರಿನ ಹೊಂಡ, ಕೆರೆ, ಹೊಳೆ, ಸಮುದ್ರಕ್ಕೆ ಆಡಲು ತೆರಳಿದಾಗ ಅನೇಕ ದುರಂತಗಳು ನಡೆದು ಮಕ್ಕಳ ಜೀವ ಬಲಿಯಾಗುವ ಪ್ರಕರಣಗಳು ಕರಾವಳಿಯಲ್ಲಿ ವರದಿಯಾಗುತ್ತವೆ.

ಈ ಬಾರಿ ಕೂಡ ಪುತ್ತೂರಿನಲ್ಲಿ ಈಗಾಗಲೇ ಇಂತಹದ್ದೇ ಘಟನೆ ಘಟಿಸಿ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿ ದ್ದಾರೆ. ಆದ್ದರಿಂದ ರಜೆಯಲ್ಲಿ ಹೆತ್ತವರು ತಮ್ಮ ಮಕ್ಕಳ ಚಟುವಟಿಕೆ ಬಗ್ಗೆ ತುಂಬಾ ಎಚ್ಚರದಿಂದಿರಬೇಕಾದ ಅಗತ್ಯವಿದೆ.

ನಿಗಾ ಇರಲಿ
ಬೇಸಗೆ ರಜೆಯಲ್ಲಿ ಹೆತ್ತವರು ಮಕ್ಕಳ ಆಟೋಟಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿರುತ್ತದೆ. ಮಕ್ಕಳು ಯಾರ ಜತೆ ಆಟವಾಡುತ್ತಾರೆ, ಎಲ್ಲಿಗೆ ತೆರಳುತ್ತಾರೆ. ಆಟವಾಡುವ ಸ್ಥಳದಲ್ಲಿ ಅಪಾಯಕಾರಿ ನೀರಿನ ಹೊಂಡಗಳಿದೆಯೇ ಎನ್ನುವ ಕುರಿತು ಕಾಳಜಿ ಅಗತ್ಯ ಮತ್ತು ನೀರಿನ ಹೊಂಡಗಳಿಗೆ ಬಟ್ಟೆ ಒಗೆಯಲು ತೆರಳುವಾಗ ಚಿಕ್ಕ ಮಕ್ಕಳನ್ನು ಕರೆದೊಯ್ಯದಿರುವುದು ಒಳಿತು.

ಎಚ್ಚರ ಅಗತ್ಯ
ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಗಣಿಗಾರಿಕೆ ಹೊಂಡಗಳು ಮೃತ್ಯಕೂಪವಾಗಿ ಪರಿಣಮಿಸಿವೆೆ. ಪರವಾನಿಗೆ ಇರುವ ಗಣಿಗಾರಿಕೆಗೆ ಹೊಂಡಗಳಿಗೆ ಪರವಾನಿಗೆ ದಾರರು ಬೇಲಿ ಅಳವಡಿಸಬೇಕು ಅಥವಾ ಜಾಗದ ಮಾಲಕರು ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಅಲ್ಲಿ ನಡೆಯುವ ದುರಂತಗಳಿಗೆ ಮಾಲಕರು, ಪರವಾನಿಗೆದಾರರು ಹೊಣೆಗಾರರಾಗು ತ್ತಾರೆ ಎನ್ನುವ ನಿಯಮವಿದೆ. ಆದರೂ ಕೆಲವು ಗಣಿಹೊಂಡಗಳು ಇನ್ನೂ ಅಪಾಯಕಾರಿ ಸ್ಥಿತಿಯಲ್ಲಿದೆ. ಇದರ ಜತೆಗೆ ಸರಕಾರಿ ಜಾಗದಲ್ಲಿ ನಡೆದ ಗಣಿಗಾರಿಕೆಗಳು, ಹೊಳೆ, ಕೆರೆ, ತೋಡು, ಟ್ಯಾಂಕ್‌ಗಳು ತೆರೆದ ಸ್ಥಿತಿಯಲ್ಲಿ ಅಪಾಯಕಾರಿಯಾಗಿದಲ್ಲಿ ಇವುಗಳ ಕುರಿತು ಎಚ್ಚರಿಕೆ ಅಗತ್ಯರಜಾ ದಿನ ಸದುಪಯೋಗಿಸಿ ಹಿಂದೆ ಬೇಸಗೆ ರಜೆಯಲ್ಲಿ ಸಂಬಂಧಿಗಳ ಮನೆಗೆ ತೆರಳಿ ಅಜ್ಜಿ,ತಾತ ಹಾಗೂ ಹಿರಿಯರಿಂದ ಜೀವನಕ್ಕೆ ಬೇಕಾಗುವ ಒಂದಷ್ಟು ವಿಚಾರ ಕಲಿಯುವ ಪದ್ಧತಿ ಇತ್ತು. ಆದರೆ ಇಂದಿನ ಮಕ್ಕಳಿಗೆ ಮೊಬೈಲ್‌, ವಿಡಿಯೋ ಗೇಮ್‌ ಸರ್ವಸ್ವವಾಗಿದೆ. ಹೀಗಾಗಿ ಸಂಬಂಧಿಗಳ ಮನೆಗೆ ತೆರಳುವುದು ಅಪರೂಪವಾಗಿದೆ. ಮಕ್ಕಳನ್ನು ಸಂಬಂಧಿಗಳ ಮನೆಗೆ ಕಳುಹಿಸುವ ಮೂಲಕ ಮೊಬೈಲ್‌, ವೀಡಿಯೋ ಗೇಮ್‌ಗಳ ದಾಸ ರಾಗುವುದನ್ನು ತಪ್ಪಿಸಬಹುದು.

ಬೇಸಗೆ , ಮಳೆಗಾಲದಲ್ಲಿ ಸಾಲು-ಸಾಲು ದುರಂತ
2015ರಿಂದ 2018 ಮೇ ತನಕ ಉಡುಪಿ ಜಿಲ್ಲೆಯಲ್ಲಿ ಬೇಸಗೆ ರಜಾ ಅವಧಿ ಹಾಗೂ ಮಳೆಗಾಲದಲ್ಲಿ ನಡೆದ ನೀರಿನ ದುರಂತಗಳು ಈ ರೀತಿ ಇವೆ. ಬ್ರಹ್ಮಾವರ ಪೊಲೀಸ್‌ ಠಾಣೆ 3 ಪ್ರಕರಣ 4ಸಾವು, ಹೆಬ್ರಿಯಲ್ಲಿ 2 ದುರಂತ 2 ಸಾವು, ಕೋಟದಲ್ಲಿ 7 ಘಟನೆಗಳಲ್ಲಿ 10 ಸಾವು, ಬೈಂದೂರಿನಲ್ಲಿ 1 ಘಟನೆ 1 ಸಾವು, ಕಾರ್ಕಳದಲ್ಲಿ 2 ಪ್ರಕರಣ 2ಸಾವು, ಕುಂದಾಪುರದಲ್ಲಿ 4 ದುರಂತ 5 ಸಾವು, ಮಣಿಪಾಲದಲ್ಲಿ 1 ಪ್ರಕರಣ 2 ಸಾವು, ಶಂಕರನಾರಾಯಣ 1 ಪ್ರಕರಣ 2ಸಾವು, ಕೊಲ್ಲೂರು 1 ಘಟನೆ 1ಸಾವು, ಮಲ್ಪೆ 1 ಪ್ರಕರಣ 1 ಸಾವು. ಹೀಗೆ 23 ಪ್ರಕರಣಗಳಲ್ಲಿ 30 ಜೀವಗಳು ಬಲಿಯಾಗಿವೆ.

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.