ತ್ಯಾಜ್ಯ ಎಸೆಯದಂತೆ ಕಣ್ಗಾವಲು, ಗ್ರಾ.ಪಂ., ಸ್ಥಳೀಯರಿಂದ ಸ್ವಚ್ಛತೆ
Team Udayavani, Jul 19, 2019, 5:29 AM IST
ಕಟಪಾಡಿ: ಕಟಪಾಡಿ- ಮಣಿಪುರ ಸಂಪರ್ಕ ರಸ್ತೆಯ ಬೀದಿ ಬದಿ ಎಸೆಯುವ ತ್ಯಾಜ್ಯವನ್ನು ಪಿಡಿಒ, ಸಿಬಂದಿ, ಉಪಾಧ್ಯಕ್ಷೆ, ಸದಸ್ಯರು, ಸ್ಥಳೀಯರು ಸೇರಿಕೊಂಡು ಬೀದಿಗಿಳಿದು ಸ್ವಚ್ಛತೆಯನ್ನು ನಡೆಸಿದ್ದು ತ್ಯಾಜ್ಯ ಎಸೆಯದಂತೆ ಸ್ಥಳೀಯರು ಕಣ್ಗಾವಲು ಬುಧವಾರ ಪ್ರಾರಂಭಿಸಿರುತ್ತಾರೆ.
ಚರ್ಚ್ ಜಂಕ್ಷನ್ನಿಂದ ಮಣಿಪುರ ರೈಲ್ವೇ ಮೇಲ್ಸೇತುವೆ, ಶ್ಮಶಾನದವರೆಗೆ ಸುಮಾರು ಒಂದೂವರೆ ಕಿ.ಮೀ.ನಷ್ಟು ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಅನಾಗರಿಕರು ಎಸೆದ ತ್ಯಾಜ್ಯವನ್ನು ಅಧಿಕಾರಿ, ಜನಪ್ರತಿನಿಧಿಗಳು ಮತ್ತು ಸುಮಾರು 30 ರಷ್ಟಿದ್ದ ಸ್ಥಳೀಯರು ಸೇರಿಕೊಂಡು ಸ್ವಚ್ಛಗೊಳಿಸಿ ವಿಲೇವಾರಿಗಾಗಿ ಪೇರಿಸಿಟ್ಟಿರುತ್ತಾರೆ. ತ್ಯಾಜ್ಯವನ್ನು ಎಸೆಯದಂತೆ ಮತ್ತು ಎಸೆದವರಿಗೆ ದಂಡದ ಬಗ್ಗೆ ಉಲ್ಲೇಖೀಸಿದ ಬ್ಯಾನರನ್ನೂ ಸ್ಥಳದಲ್ಲಿ ಅಳವಡಿಸಲಾಗಿದೆ.
ಇನ್ನು ಮುಂದಕ್ಕೆ ಇಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ತಂಡವಾಗಿ ಕಾದು ಕುಳಿತು ತ್ಯಾಜ್ಯ ಎಸೆಯುವವರ ವಿರುದ್ಧ ತಂಡವಾಗಿಯೇ ಕಾರ್ಯಾಚರಣೆಯನ್ನು ನಡೆಸಲಿದ್ದು ಮುಂದಕ್ಕೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ನಯೀಂ ತಿಳಿಸುವಂತೆ ತ್ಯಾಜ್ಯ ಎಸೆಯುವುದು ನಿಲ್ಲಿಸುವವರೆಗೆ ತಂಡವಾಗಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಸ್ಥಳೀಯರೊಂದಿಗೆ ಗ್ರಾಮದ ಸ್ವಚ್ಛತೆಗಾಗಿ ಕೈ ಜೋಡಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಪಿ.ಡಿ.ಒ. ಇನಾಯತುಲ್ಲಾ ಬೇಗ್, ಉಪಾಧ್ಯಕ್ಷೆ ಪ್ರಭಾ ಬಿ.ಶೆಟ್ಟಿ, ಸದಸ್ಯರಾದ ಮೊಹಮ್ಮದ್ ನಯೀಂ, ಸುಗುಣಾ, ಸಿಬಂದಿ ಸರೋಜಾ ಸಾಲ್ಯಾನ್, ಸ್ಥಳೀಯರಾದ ಗ್ರೇಸಿ ಮೊಂತೆರೋ, ಶಾಂತಿ ಮೊಂತೆರೋ, ಸಿಂಥಿಯಾ ಡಿಸೋಜ, ಜೋಸೆಫ್ ಮೊಂತೆರೋ, ಫ್ರೀಡಾ ಪಿಂಟೋ, ವಿನ್ಸೆಂಟ್ ಪಿರೇರಾ, ಸ್ಟಾ ್ಯನಿ ಪಿರೇರಾ, ಡಯಾನಾ ಮೊಂತೆರೋ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
MUST WATCH
ಹೊಸ ಸೇರ್ಪಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು