ಉಡುಪಿಯಲ್ಲಿ ಕನ್ನಡದ ಕಂಪು ಪಸರಿಸಿದ್ದ ಸುಷ್ಮಾ
Team Udayavani, Aug 8, 2019, 6:35 AM IST
ಉಡುಪಿ: ಸುಷ್ಮಾ ಸ್ವರಾಜ್ ಉಡುಪಿ ಜಿಲ್ಲೆಗೆ ಆಗಮಿಸಿದ್ದಾಗ ಕನ್ನಡದ ಕಂಪನ್ನು ಪಸರಿಸಿದ್ದು ಇಲ್ಲಿನವರಿಗೆ ಸದಾ ಹಸುರು ನೆನಪು.
1999ರಲ್ಲಿ ಸುಷ್ಮಾ ಅವರು ಸೋನಿಯಾ ಗಾಂಧಿ ವಿರುದ್ಧ
ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೇಳೆ ಕಲಿತ ಕನ್ನಡ ಕೆಲವೇ ದಿನಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಪ್ರಯೋಜನಕ್ಕೆ ಬಂತು. ಆಗ ಉಡುಪಿಯ ಚಿತ್ತರಂಜನ್ ಸರ್ಕಲ್ ಮತ್ತು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಸಭೆಗಳಲ್ಲಿ ಅವರು ಕನ್ನಡದಲ್ಲಿ ಮಾತನಾಡಿದ್ದರು.
“ಕುಂದಾಪುರದಲ್ಲಿ 25 ನಿಮಿಷ ನಿರರ್ಗಳವಾಗಿ ಮಾತನಾಡಿದ್ದು ಇನ್ನೂ ನೆನಪಿನಲ್ಲಿದೆ’ ಎನ್ನುತ್ತಾರೆ ಕೋಟ ಶ್ರೀನಿವಾಸ ಪೂಜಾರಿ.
ಶ್ರೀಕೃಷ್ಣ ಮಠದಲ್ಲಿ 2009ರ ಸೆ. 11ರಂದು ಶ್ರೀಕೃಷ್ಣಜನ್ಮಾಷ್ಟಮಿ ಉದ್ಘಾಟಿಸಲು ಬಂದಾಗಲೂ ಸುಷ್ಮಾ ಕನ್ನಡದಲ್ಲಿ ಮಾತನಾಡಿದ್ದರು. 1999ರಲ್ಲಿ ಆಗ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಶೀಲಾ ಕೆ. ಶೆಟ್ಟಿ, 2009ರಲ್ಲಿ ಸೋಮಶೇಖರ ಭಟ್ಟರ ಪತ್ನಿ ಶಾರದಾ ಭಟ್ ಮೊದ ಲಾದವರು ಬಾಗಿನ ನೀಡಿದ್ದರು.
1992ರ ಬಳಿಕ ಪೇಜಾವರ ಶ್ರೀಗಳ ಸಂಪರ್ಕಕ್ಕೆ ಬಂದ ಸುಷ್ಮಾ ಅವರು ಶ್ರೀಪಾದರು ದಿಲ್ಲಿಗೆ ಬಂದದ್ದು ಗೊತ್ತಾದಾಗ ಭೇಟಿ ಮಾಡುತ್ತಿದ್ದರು. ಉಮಾಶ್ರೀ ಭಾರತಿ ಆಯೋಜಿಸುತ್ತಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.
ಅಷ್ಟಮಿ ಉಂಡೆ, ಪತ್ರೊಡೆ ಇಷ್ಟ
ಸುಷ್ಮಾ ಅವರಿಗೆ ಅಷ್ಟಮಿ ಉಂಡೆ, ಪತ್ರೊಡೆ ಇಷ್ಟವಾಗಿತ್ತು. ಉಡುಪಿ ಯಿಂದ ದಿಲ್ಲಿಗೆ ಮರಳು ವಾಗ ಅವು ಗಳನ್ನು ಕಳುಹಿಸಿಕೊಟ್ಟಿದ್ದೆ. ಹಾಗೆಯೇ ಇಡ್ಲಿ ಸಾಂಬಾರ್, ಮಸಾಲೆ ದೋಸೆ, ಮಲ್ಲಿಗೆ ಹೂವು, ಉಡುಪಿ ಕೈಮಗ್ಗದ ಸೀರೆಗಳೂ ಪ್ರಿಯವಾಗಿದ್ದವು ಎಂದು ಸ್ಮರಿಸಿಕೊಳ್ಳುತ್ತಾರೆ ಉಡುಪಿಯ ಹಿರಿಯ ಬಿಜೆಪಿ ಕಾರ್ಯಕರ್ತೆ ಕಿರಣ ಕಾಮತ್.
ಮೃತದೇಹ ಹಸ್ತಾಂತರಕ್ಕೆ ನೆರವು
ಬಾರ್ಸಿಲೋನಾ ಪ್ರವಾಸಕ್ಕೆ ತೆರಳಿದ್ದ ಕುಂದಾಪುರ ಮೂಲದ ಮೀರಾ ಪ್ರವಾಸಿ ಹಡಗಿನಲ್ಲಿ ಮೃತಪಟ್ಟಿದ್ದರು. ಆಗ ಅವರ ಪಾರ್ಥಿವ ಶರೀರವನ್ನು ಕ್ಷಿಪ್ರವಾಗಿ ಸ್ವದೇಶಕ್ಕೆ ತರುವುದಕ್ಕೂ ಸುಷ್ಮಾ ಸ್ವರಾಜ್ ನೆರವಾಗಿದ್ದರು.
ತ್ವರಿತ ಸ್ಪಂದನೆ
ಸುಷ್ಮಾರನ್ನು ಎಲ್ಲರೂ ನೆನಪು ಮಾಡಿಕೊಳ್ಳುವುದು ವಿದೇಶ
ದಲ್ಲಿ ಭಾರತೀಯ ಮೂಲದ ವರು ತೊಂದರೆಗೊಳಗಾದರೆ ತತ್ಕ್ಷಣ ಸ್ಪಂದಿಸುತ್ತಿದ್ದುದಕ್ಕೆ. ಕಳೆದ ಮಾರ್ಚ್ನಲ್ಲಿ ಬಸೂÅರು ಮೂಲದ ಪ್ರಶಾಂತ್ ಹತ್ಯೆ ಪ್ರಕರಣದಲ್ಲಿಯೂ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಲ್ಲದೆ, ಕುಟುಂಬಿಕರಿಗೆ ವಿದೇಶಕ್ಕೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದರು.
“ಕಾಕಡಿ’ ಕೇಳಿ ಪಡೆದರು
2009ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಬರುವಾಗ ಕಟೀಲು ಪೇಟೆಯಲ್ಲಿ ಸುಷ್ಮಾ ಸ್ವರಾಜ್ ಒಮ್ಮೆಲೆ ವಾಹನ ನಿಲ್ಲಿಸಿ “ಕಾಕಡಿ ಬೇಕು’ ಎಂದರು. ಅದೇನೆಂದು ಗೊತ್ತಾಗದೆ ಕಾರ್ಯಕರ್ತರು ಗಲಿಬಿಲಿಯಾಗಿ ಸೌತೆ, ಹೀರೆ, ಬೆಂಡೆ ತಂದಾಗ ಮುಳ್ಳುಸೌತೆ ತೋರಿಸಿ ಅದು ಬೇಕು ಎಂದರು. ಆ ದೃಶ್ಯವನ್ನು ನಾವೆಂದೂ ಮರೆಯುವಂತಿಲ್ಲ ಎನ್ನುತ್ತಾರೆ ಆಗ ಜತೆಗಿದ್ದ ಶಾಸಕ ರಘುಪತಿ ಭಟ್ ಮತ್ತು ಸುವರ್ಧನ ನಾಯಕ್.
ಸದಾ ಸ್ಮರಣಾರ್ಹ ತ್ವರಿತ ಸ್ಪಂದನೆ
ಕುಂದಾಪುರ: ಬಸೂÅರು ಮೂಲದ ಪ್ರಶಾಂತ್ ಜರ್ಮನಿಯಲ್ಲಿ ಹತ್ಯೆ ಯಾದಾಗ ಸುಷ್ಮಾ ಸ್ವರಾಜ್ ತತ್ಕ್ಷಣ ಸ್ಪಂದಿಸಿದ್ದನ್ನು ಮರೆಯಲಾಗದು.
ಪರಿಣಾಮಕಾರಿ ರಾಜಕಾರಣಿ
ಸುಷ್ಮಾ ಸ್ವರಾಜ್ ಕಾರ್ಯ ತತ್ಪರ ರಾಜಕಾರಣಿ. ಹಲವು ಬಾರಿ ನಾನು ನೆರವಿಗಾಗಿ ಸಂಪರ್ಕಿಸಿದ್ದಾಗಲೂ ತ್ವರಿತವಾಗಿ ಸ್ಪಂದಿಸಿದ್ದರು. ರಾಜ್ಯದಲ್ಲಿ ಪ್ರೊಟೆಕ್ಟ್ ಫ್ಯಾಮಿಲಿಯನ್ ಕಚೇರಿ ತೆರೆಯಬೇಕು ಎಂದು ನಾನು ಸಂಸದನಾಗಿದ್ದಾಗ ಕೇಳಿದ್ದೆ. ಅವರು ಕೂಡಲೇ ಕಚೇರಿ ಮಂಜೂರು ಮಾಡಿ ಪತ್ರ ಬರೆದಿದ್ದರು.
– ಕೆ. ಜಯಪ್ರಕಾಶ್ ಹೆಗ್ಡೆ ಮಾಜಿ ಸಂಸದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್