ಸುವರ್ಣಾ ನದಿ ತಟ ಪ್ರವಾಸಿ ತಾಣವಾಗಲು ಸುವರ್ಣಾವಕಾಶ
Team Udayavani, Mar 8, 2019, 1:00 AM IST
ಅಜೆಕಾರು: ಕಾರ್ಕಳ ತಾಲೂಕಿನ ಪ್ರಮುಖ ಜೀವ ನದಿ ಎಣ್ಣೆಹೊಳೆ ಸುವರ್ಣಾ ನದಿ ತಟದಲ್ಲಿ ಸುಮಾರು ಒಂದು ಎಕರೆ ಬಯಲು ಪ್ರದೇಶದ್ದು ಇಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.
ಈ ಜಾಗ ಪಂ. ಅಧೀನದಲ್ಲಿದ್ದು, ಅಭಿವೃದ್ಧಿಯತ್ತ ಗಮನ ಹರಿಸಿದಲ್ಲಿ ಆಕರ್ಷಕ ಪ್ರವಾಸಿ ಕ್ಷೇತ್ರವಾಗಬಹುದು.
ಎಲ್ಲಿದೆ ಪ್ರದೇಶ
ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿ ಎಣ್ಣೆಹೊಳೆಯ ಹಚ್ಚ ಹಸುರಿನ ಮಧ್ಯೆ ಈ ಪ್ರದೇಶವಿದೆ. ಜತೆಗೆ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದೆ. ಈ ಮಾರ್ಗವಾಗಿಯೇ ಶಿವಮೊಗ್ಗ, ಧರ್ಮಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಎಣ್ಣೆಹೊಳೆಯಲ್ಲಿ ಉದ್ಯಾನವನ ನಿರ್ಮಿಸಿದಲ್ಲಿ ಈ ಪ್ರದೇಶವನ್ನೂ ಪ್ರವಾಸಿ ಕೇಂದ್ರವನ್ನಾಗಿಸಬಹುದಾಗಿದೆ.
ಪಾಳುಬಿದ್ದ ಜಾಗ
ಈಗ ಪಾಳು ಬಿದ್ದಿರುವ ನದಿ ತಟದಲ್ಲಿ ಕಸಕಡ್ಡಿ ತ್ಯಾಜ್ಯಗಳೇ ತುಂಬಿವೆೆ. ಉದ್ಯಾನವನ ನಿರ್ಮಿಸಿದಲ್ಲಿ ಸ್ವತ್ಛತೆ ಕಾಪಾಡುವ ಜತೆಗೆ ಪರಿಸರವನ್ನು ಆಕರ್ಷಣೀಯಗೊಳಿಸಬಹುದಾಗಿದೆ.ಉದ್ಯಾನವನ ನಿರ್ಮಾಣ
ಸ್ಥಳೀಯ ದಾನಿಗಳು, ಗ್ರಾಮಸ್ಥರು, ಸರಕಾರದ ಅನುದಾನ ಸೇರಿಸಿ ಸುಂದರ ಉದ್ಯಾನವನ ಎಣ್ಣೆಹೊಳೆಯಲ್ಲಿ ಹಾಗೂ ತಾಲೂಕಿನ 3-4 ಕಡೆಗಳಲ್ಲಿ ನಿರ್ಮಾಣ ಮಾಡುವ ಕನಸಿದ್ದು ಈ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮದ ಹಿರಿಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
-ಸುನಿಲ್ ಕುಮಾರ್, ಶಾಸಕರು, ಕಾರ್ಕಳ
ಪ್ರಸ್ತಾವನೆ ಸಲ್ಲಿಕೆ
ನದಿ ತಟದಲ್ಲಿ ಉದ್ಯಾನವನ, ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಬಯಲು ರಂಗಮಂದಿರ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಪಂಚಾಯತ್ನಲ್ಲಿ ನಿರ್ಣಯ ಕೈಗೊಂಡು ಶಾಸಕ ಸುನಿಲ್ ಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನದ ಭರವಸೆ ನೀಡಿದ್ದಾರೆ.
-ಗೌತಮ್ ನಾಯಕ್, ಸ್ಥಳೀಯ ಪಂಚಾಯತ್ ಸದಸ್ಯರು, ಮರ್ಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ