ಗರುಡನಿಗೆ ಮಠದಲ್ಲೇ ಆರೈಕೆ, ಗುಣವಾದ ಬಳಿಕ ಪಿಲಿಕುಳಕ್ಕೆ
Team Udayavani, Feb 13, 2018, 11:55 AM IST
ಉಡುಪಿ: ದೃಷ್ಟಿಹೀನವಾಗಿ ಪೇಜಾವರ ಮಠದಲ್ಲಿ ಆರೈಕೆ ಪಡೆಯುತ್ತಿರುವ ಗರುಡ ಪಕ್ಷಿಯ ನೇತ್ರ ಚಿಕಿತ್ಸೆ ಯಶಸ್ವಿಯಾದ ಬಳಿಕ ಅದನ್ನು ಪಿಲಿಕುಳ ನಿಸರ್ಗಧಾಮಕ್ಕೆ ಕಳುಹಿಸಲಾಗುವುದು.
ಸೋಮವಾರ ಮಂಗಳೂರು ವನ್ಯಜೀವಿ ವಿಭಾಗದ ಅಧಿಕಾರಿಗಳು ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀಪಾದರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ನಿರ್ಧಾರಕ್ಕೆ ನಾವು ಬದ್ಧ. ಆದರೆ ಗರುಡನ ಆರೈಕೆಯಲ್ಲಿ ಲೋಪವಾಗಬಾರದು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ. ಇದಕ್ಕೆ ಅಧಿಕಾರಿಗಳು, ಗರುಡನ ಕಣ್ಣಿನ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಮಠದಲ್ಲಿಯೇ ಆರೈಕೆಯಲ್ಲಿರಲಿ. ಬಳಿಕ ಪಿಲಿಕುಳಕ್ಕೆ ದಾಖಲಿಸಿ ಎಂದು ಪ್ರತಿಕ್ರಿಯಿಸಿರುವುದಾಗಿ ಪೇಜಾವರ ಮಠದ ಮೂಲಗಳು ತಿಳಿಸಿವೆ.
ಈ ಗರುಡನಿಗೆ ಕಣ್ಣಿನ ವಿನಾ ಮತಾöವ ತೊಂದರೆಯೂ ಇಲ್ಲ. ಗರುಡ ನಿಗೆ ಕಣ್ಣು ಕಾಣ ಬೇಕು ಎನ್ನುವುದು ಶ್ರೀಗಳ ಹೆಬ್ಬಯಕೆಯಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಹಾರಿ ಬಿಡಬಾರದು ಯಾಕೆ?
ಹೆಚ್ಚಿನ ವನ್ಯಜೀವಿಗಳಲ್ಲಿ ವಿಶೇಷ ಗುಣವೊಂದಿದೆ. ಒಮ್ಮೆ ಮನುಷ್ಯನ ಆರೈಕೆಯನ್ನು ಪಡೆದ ಅವು ಮತ್ತೆ ಕಾಡಿಗೆ ಅಥವಾ ತಮ್ಮ ಸಂಕುಲ ಇರುವಲ್ಲಿಗೆ ಹೋದರೆ ಇತರ ಪ್ರಾಣಿ, ಪಕ್ಷಿಗಳು ಅವನ್ನು ದೂರ ಮಾಡುತ್ತವೆ. ಕೊಲ್ಲುವ ಸಾಧ್ಯತೆಯೂ ಇದೆ ಎಂದು ಪಕ್ಷಿ ತಜ್ಞರು ಹೇಳಿದ್ದಾರೆ. ವನ್ಯಜೀವಿ ಅಧಿಕಾರಿಗಳು ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ಹೀಗಾಗಿ ಆರೈಕೆಯಲ್ಲಿರುವ ಗರುಡನ ದೃಷ್ಟಿ ಮರಳಿದರೆ ಅದನ್ನು ಹಾರಿ ಬಿಡದೆ ಪಿಲಿಕುಳಕ್ಕೆ ದಾಖಲಿಸಲು ಸ್ವಾಮೀಜಿಯವರೂ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ