ಮೂಲ್ಕಿ ದೇವಸ್ಥಾನಕ್ಕೆ ಸ್ವರ್ಣ ಗರುಡ
Team Udayavani, Dec 3, 2017, 11:24 AM IST
ಉಡುಪಿ : ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ದಾನಿಗಳ ಕೊಡುಗೆಯಿಂದ ಸ್ವರ್ಣ ಗರುಡ ನಿರ್ಮಾಣವಾಗಿದ್ದು, ದೇವಳದ ಸಮಿತಿಯವರಿಗೆ ಹಸ್ತಾಂತರಿಸಲಾಗಿದೆ.
ಗರುಡನನ್ನು ಹಸ್ತಾಂತರಿಸುವ ವೇಳೆಯಲ್ಲಿ ದೇವಸ್ಥಾನದ ಸಮಿತಿಯ ನಾರಾಯಣ ಶೆಣೈ, ಸತ್ಯೇಂದ್ರ ಶೆಣೈ, ವಿಷ್ಣುದಾಸ್ ಭಟ್, ಜಿ.ಜಿ. ಕಾಮತ್, ಬಾಬುರಾಯ ಶೆಣೈ, ಸ್ವರ್ಣದ ನಿರ್ದೇಶಕ ಗುಜ್ಜಾಡಿ ರಾಮದಾಸ್ ನಾಯಕ್ ಅವರು ಉಪಸ್ಥಿತರಿದ್ದರು. ಗುಜ್ಜಾಡಿ ಸ್ವರ್ಣ ಜುವೆಲರ್ನ ಸ್ವರ್ಣೋದ್ಯಮ ವಿಭಾಗದವರು ಚಿನ್ನದ ಗರುಡನನ್ನು ಮಾಡಿದ್ದಾರೆ. ಸುಮಾರು 1 ಕೋ.ರೂ. ವೆಚ್ಚದಲ್ಲಿ ತಯಾರಾಗಿರುವ ಗರುಡನಿಗೆ 3.5 ಕೆ.ಜಿ. 22 ಕ್ಯಾರೆಟ್ ಚಿನ್ನ ಬಳಕೆಯಾಗಿದೆ.