ಹೂಳು ತುಂಬಿದ ಹೆಗ್ಗುಂಜೆ-ಯಡ್ತಾಡಿ ದೊಡ್ಡ ಹೊಳೆ


Team Udayavani, May 13, 2019, 12:15 AM IST

heggunje-yadtady

ಕೋಟ: ಹೆಗ್ಗುಂಜೆಯಲ್ಲಿ ಉಗಮಗೊಂಡು ಯಡ್ತಾಡಿ, ಕಾವಡಿ ಮೂಲಕ ಫಲವತ್ತಾದ ಕೃಷಿಭೂಮಿಯ ಮಧ್ಯದಲ್ಲಿ ಹರಿದು ಬನ್ನಾಡಿ ಹೊಳೆಯನ್ನು ಸೇರುವ ಯಡ್ತಾಡಿ ದೊಡ್ಡ ಹೊಳೆ ಈ ಭಾಗದ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿಗೆ ನೀರಿನಾಶ್ರಯವಾಗಿತ್ತು. ಆದರೆ ಪ್ರಸ್ತುತ ಇದರಲ್ಲಿ ಹೇರಳ ಪ್ರಮಾಣದ ಹೂಳು ತುಂಬಿದ್ದು ಮಾರ್ಚ್‌ ಆರಂಭದಲ್ಲೇ ನೀರು ಬತ್ತಿಹೋಗುತ್ತಿದೆ. ಹೀಗಾಗಿ ನೀರಿಗೆ ವ್ಯಾಪಕ ಸಮಸ್ಯೆ ಎದುರಾಗುತ್ತಿದೆ.

ಕೃಷಿ ಭೂಮಿಗೆ ನೀರಿನಾಸರೆ
ಈ ಹೊಳೆ ಹೆಗ್ಗುಂಜೆಯಿಂದ ಬನ್ನಾಡಿ ತನಕ ಸುಮಾರು ಒಂದು ಸಾವಿರ ಹೆಕ್ಟೆರ್‌ ( 2ಸಾವಿರ ಎಕ್ರೆಗೂ ಅಧಿಕ) ಕೃಷಿಭೂಮಿಗೆ ನೀರುಣಿಸುತ್ತದೆ. ಕುಡಿಯುವ ನೀರಿನ ಸಮಸ್ಯೆಯಿಂದಲೂ ಈ ಭಾಗ ಮುಕ್ತವಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ನೀರಿನ ಅಲಭ್ಯತೆಯೊಂದಿಗೆ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯದೆ ನೆರೆಗೆ ಕಾರಣವಾಗಿ ಕೃಷಿ ಭೂಮಿಗೆ ಹಾನಿಯಾಗುತ್ತದೆ.

ಹೊಳೆ ಒತ್ತುವರಿ
ಕೆಲವು ಭಾಗದಲ್ಲಿ ಹೂಳಿನಿಂದಾಗಿ ಹೊಳೆ ಮುಚ್ಚಿಹೋಗಿದ್ದರೆ ಇನ್ನೂ ಕೆಲವು ಭಾಗದಲ್ಲಿ ವ್ಯಾಪಕ ಒತ್ತುವರಿ ನಡೆದಿದೆ. ಹೊಳೆಗೆ ಮಣ್ಣು ತುಂಬಿ ಗದ್ದೆ ಹಾಗೂ ಜಮೀನುಗಳನ್ನು ವಿಸ್ತರಿಸುವ ಕಾರ್ಯ ಸದ್ದಿಲ್ಲದೆ ಸಾಗುತ್ತಿದೆ. ಹೀಗೆ ಆದರೆ ಹೊಳೆ ಸಣ್ಣ ಕಾಲುವೆಯಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ನೀರಿನ ಸಮಸ್ಯೆಗೆ ಪರಿಹಾರ
ಹೊಳೆಯ ಹೂಳೆತ್ತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುವಂತೆ ಮಾಡಿದರೆ ಇಲ್ಲಿನ ಕೃಷಿಭೂಮಿ, ನದಿ, ಹಳ್ಳಗಳಲ್ಲಿ ಸದಾ ಕಾಲ ನೀರು ತುಂಬಬಹುದು. ನೀರಿನ ಒರತೆ ಹೆಚ್ಚಲಿದ್ದು ಒಡ್ಡುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ಹಲವು ಬಾರಿ ಮನವಿ
ಹೊಳೆತ್ತಿ ಅಭಿವೃದ್ಧಿಗೊಳಿಸುವಂತೆ ಇಲ್ಲಿನ ರೈತರು, ಸ್ಥಳೀಯ ಮುಖಂಡರು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಪೂರಕ ಪ್ರತಿಕ್ರಿಯೆ ಸಿಕ್ಕಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಈ ಕುರಿತು ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಕಾಲುವೆ ವಿಸ್ತರಣೆ ಫ‌ಲ ನೀಡಲು ಹೊಳೆ ಅಭಿವೃದ್ಧಿ ಅವಶ್ಯ
ಇದೀಗ ವಾರಾಹಿ ಎಡದಂಡೆ ಎತ ನೀರಾವರಿ ಕಾಲುವೆಯ ವಿಸ್ತರಣೆ ಪ್ರಕ್ರಿಯೆ ಜಾರಿಯಲ್ಲಿದೆ. ಇದು ವಿಸ್ತರಣೆಯಾದರೆ ಶಿರೂರು ಮೂಕೈìಯಿಂದ 9ಕಿ.ಮೀ. ಉದ್ದದ ಕಾಲುವೆ ನಿರ್ಮಾಣವಾಗಿ ಶಿರೂರುಮೂಕೈì, ಹೆಗ್ಗುಂಜೆ, ಯಡ್ತಾಡಿ ಭಾಗಕ್ಕೆ ನೀರಾವರಿ ವ್ಯವಸ್ಥೆಯಾಗಲಿದೆ. ಈ ದೊಡ್ಡ ಹೊಳೆಗೆ ಕಾಲುವೆಯನ್ನು ಸಂಪರ್ಕಿಸುವ ಯೋಜನೆ ಕೂಡ ಇದೆ. ಹೀಗಾಗಿ ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದರೆ ಹೊಳೆ ಅಭಿವೃದ್ಧಿ ಅವಶ್ಯ.

ಶೀಘ್ರ ಅಭಿವೃದ್ಧಿ ಅಗತ್ಯ
ವಾರಾಹಿ ಎಡದಂಡೆ ಏತ ನೀರಾವರಿ ಕಾಲುವೆಯ ವಿಸ್ತರಣೆಯಾಗುವುದರಿಂದ ಹಾಗೂ ಹೆಗ್ಗುಂಜೆ, ಯಡ್ತಾಡಿ, ಕಾವಡಿ ಭಾಗದಲ್ಲಿ ಪ್ರತಿವರ್ಷ ಕಾಡುವ ವ್ಯಾಪಕ ಪ್ರಮಾಣದ ನೀರಿನ ಸಮಸ್ಯೆ ನಿವಾರಣೆಗಾಗಿ ಹೊಳೆಯ ಅಭಿವೃದ್ಧಿ ಅಗತ್ಯವಿದೆ. ಈ ಕುರಿತು ಶೀಘ್ರ ಕ್ರಮಕೈಗೊಳ್ಳಬೇಕು.
-ಸತೀಶ್‌ ಶೆಟ್ಟಿ ಯಡ್ತಾಡಿ, ಸ್ಥಳೀಯ ಪ್ರಗತಿಪರ ಕೃಷಿಕರು

ಮನವಿ ಮಾಡಲಾಗಿತ್ತು
ಹೊಳೆಯ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಮೂರು ಗ್ರಾ.ಪಂ. ವ್ಯಾಪ್ತಿಗೆಅನುಕೂಲವಾಗಲಿದೆ. ಹೀಗಾಗಿ ಹಿಂದೊಮ್ಮೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಲಾಗಿತ್ತು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಮತ್ತೂಮ್ಮೆ ಮನವಿ ಮಾಡಲಾಗುವುದು.
-ಗಣೇಶ್‌ ಶೆಟ್ಟಿ, ಅಧ್ಯಕ್ಷರು ಹೆಗ್ಗುಂಜೆ ಗ್ರಾ.ಪಂ.

– ರಾಜೇಶ್‌ ಗಾಣಿಗ ಅಚಾÉಡಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.