ವ್ಯವಸ್ಥಿತ ತೋಟಗಾರಿಕೆ ಪದ್ಧತಿ: ವಾರ್ಷಿಕ ಆದಾಯ ದ್ವಿಗುಣ
Team Udayavani, May 26, 2019, 6:04 AM IST
ಉಡುಪಿ: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಅಳವಡಿಸಿ ಕೊಂಡ ವ್ಯವಸ್ಥಿತ ತೋಟಗಾರಿಕೆ ಪದ್ಧತಿಯಿಂದ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಾಗುತ್ತಿದ್ದು, ಫಾರ್ಮ್ಗಳಲ್ಲಿ ಬೆಳೆಸಲಾದ ಬಗೆ ಬಗೆ ಹಣ್ಣು, ತರಕಾರಿ ಸಸಿಗಳು ಜನರ ಗಮನ ಸೆಳೆಯುತ್ತಿದೆ.
59.28 ಲ. ರೂ.,ಆದಾಯ
ಜಿಲ್ಲೆಯ ತೋಟಗಾರಿಕೆ ಕ್ಷೇತ್ರ ಗಳು ಸಸಿ ಮಾರಾಟ ಮತ್ತು ಬೆಳೆಗಳ ಹರಾಜಿನಿಂದ ಉತ್ತಮ ಆದಾಯ ಗಳಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ 14.20 ಲಕ್ಷ ರೂ., ವಾರಂಬಳ್ಳಿ 7.16 ಲ.ರೂ., ಕೆದೂರು 6.53 ಲ. ರೂ., ಕುಂಭಾಶಿ 8 ಲ.ರೂ., ಕುಕ್ಕುಂದೂರು 10.14 ಲ.ರೂ., ರಾಮಸಮುದ್ರ 13.17 ಲ.ರೂ., ಸೇರಿದಂತೆ ಒಟ್ಟು ವಾರ್ಷಿಕ 59.28 ಲ.ರೂ., ಆದಾಯ ಗಳಿಸಿದೆ. 2017-18ನೇ ಸಾಲಿ ನಲ್ಲಿ 37.69 ಲ. ರೂ., 2016-17ರಲ್ಲಿ 30 ಲ.ರೂ., 2015-16ರಲ್ಲಿ 20 ಲ.ರೂ., ಆದಾಯ ಗಳಿಸಿತ್ತು.
700 ಹೆಕ್ಟೇರ್ ವಿಸ್ತರಣೆ ಗುರಿ
ಜಿಲ್ಲೆಯ ದೊಡ್ಡಣಗುಡ್ಡೆ ಶಿವಳ್ಳಿ 27.48 ಎಕ್ರೆ, ವಾರಂಬಳ್ಳಿ 2.74 ಎಕ್ರೆ, ಕುಂದಾಪುರದ ಕುಂಭಾಶಿ 22.22 ಎಕ್ರೆ, ಕೆದೂರು 13.62 ಎಕ್ರೆ, ಕಾರ್ಕಳದ ಕುಕ್ಕಂದೂರು 15.49 ಎಕ್ರೆ, ರಾಮಸಮುದ್ರ 196.97 ಎಕ್ರೆ ಪ್ರದೇಶ ಮಾದರಿ ತೋಟಗಾರಿಕೆ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಕಳೆದ ಸಾಲಿನಲ್ಲಿ 500 ಹೆಕ್ಟೇರ್ ತೋಟಗಾರಿಕೆ ಬೆಳೆ ವಿಸ್ತರಣೆ ಗುರಿ ದಾಟಿ 611 ಹೆಕ್ಟೇರ್ ವಿಸ್ತರಣೆಯಾಗಿದೆ. ಈ ಬಾರಿ 700 ಹೆಕ್ಟೇರ್ ಗುರಿಯನ್ನು ಹೊಂದಿದೆ.
ವಾಣಿಜ್ಯ ಸಸಿಗಳ ಬೇಡಿಕೆ
ಜಿಲ್ಲೆಯಲ್ಲಿ ವಾಣಿಜ್ಯ ಸಸಿಗಳ ಬೇಡಿಕೆ ಹೆಚ್ಚಿದೆ. ಕಳೆದ ಬಾರಿ 3.88 ಲ.ರೂ. ವಾಣಿಜ್ಯ ಸಸಿಗಳು ಮಾರಾಟವಾಗಿವೆ. ಅದರಲ್ಲಿ ಸುಮಾರು 53,000 ತರಕಾರಿ ಸಸಿಗಳು ಮಾರಾಟವಾಗಿವೆ.
ನೀರಿನ ಸಮಸ್ಯೆ
ತೋಟಗಳಿಗೆ ಅಧಿಕ ಪ್ರಮಾಣದಲ್ಲಿ ನೀರಿನ ಅಗತ್ಯತೆ ಇದ್ದು, ಅಂತರ್ಜಲ ವೃದ್ಧ್ದಿಗಾಗಿ, ವರ್ಷದ ಎಲ್ಲ ದಿನಗಳಲ್ಲಿ ನೀರಿನ ಆವಶ್ಯಕತೆಗೆ ಎಲ್ಲ ತೋಟಗಾರಿಕೆ ಕ್ಷೇತ್ರಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಲಾಗಿದೆ. ಆದರೆ ಈ ಬಾರಿ ರಾಮಸಮುದ್ರದಲ್ಲಿ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿರುವುದರಿಂದ ಸರದಿ ಪ್ರಕಾರ ಸಸಿಗಳಿಗೆ ನೀರು ಬಿಡಲಾಗುತ್ತಿದೆ. ಶಿವಳ್ಳಿಯಲ್ಲಿ ಬೇಸಗೆ ನೀರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಂತರ್ಜಲ ವೃದ್ದಿಗೆ 8.89 ಲಕ್ಷ ಲೀಟರ್ ಸಾಮರ್ಥ್ಯದ ಗುಂಡಿ ನಿರ್ಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ