ಮಣಿಪಾಲ: ಟಿ.ಮೋಹನದಾಸ್ ಪೈ ಚಿತಾಭಸ್ಮ ಭೂವಿಸರ್ಜನೆ
Team Udayavani, Aug 2, 2022, 4:47 PM IST
ಮಣಿಪಾಲ: ರವಿವಾರ ಅಗಲಿದ ಮಣಿಪಾಲ ಪೈ ಕುಟುಂಬದ ಹಿರಿಯ ಚೇತನ ಟಿ.ಮೋಹನದಾಸ್ ಪೈಯವರ ಚಿತಾಭಸ್ಮವನ್ನು ಮಂಗಳವಾರ ಆಧುನಿಕ ಮಣಿಪಾಲದ ಶಿಲ್ಪಿ ಡಾ|ಟಿಎಂಎ ಪೈ, ಶಾರದಾ ಪೈ, ಟಿ.ಎ.ಪೈಯವರ ಸಮಾಧಿ ಇರುವ ಮಾಧವ ವಿಹಾರದಲ್ಲಿ ವಿಸರ್ಜಿಸಲಾಯಿತು.
ಸೋಮವಾರ ಅಂತಿಮ ಸಂಸ್ಕಾರ ನಡೆದ ಬೀಡಿನಗುಡ್ಡೆ ರುದ್ರಭೂಮಿಯಿಂದ ಚಿತಾಭಸ್ಮವನ್ನು ಮೋಹನದಾಸ್ ಪೈಯವರ ತಮ್ಮ ಟಿ.ಅಶೋಕ್ ಪೈಯವರು ತಂದು ಭೂಮಿಯಲ್ಲಿ ವಿಸರ್ಜಿಸಿದರು. ಮೋಹನದಾಸ್ ಪೈಯವರ ಸಮೀಪದ ಬಂಧುಗಳಾದ ಟಿ.ನಾರಾಯಣ ಪೈ, ಟಿ.ಸತೀಶ್ ಯು. ಪೈ, ಹರೀಶ ಪೈ, ಡಾ| ಬಾಲಕೃಷ್ಣ ಪೈ, ಇಂದುಮತಿ ಪೈ, ಆಶಾ ಪೈ, ಕುಸುಮಾ ಪೈ, ವಿಜಯಲಕ್ಷ್ಮೀ ಪೈ, ಗಾಯತ್ರೀ ಪೈ ಮತ್ತು ಒಡನಾಡಿ ನರಸಿಂಹ ಭಟ್, ಸಹಾಯಕ ರಾಘವೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.
ಈ ಹಿಂದೆ ಡಾ|ಟಿಎಂಎ ಪೈ, ಶಾರದಾ ಪೈ, ಟಿ.ಎ.ಪೈಯವರ ಅಂತಿಮ ಸಂಸ್ಕಾರವನ್ನು ಮಾಧವ ವಿಹಾರದಲ್ಲಿ ನಡೆಸಲಾಗಿತ್ತು. ಆದರೆ ಮಳೆ ಬರುವ ಸಂಭವವಿದ್ದ ಕಾರಣ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಮೋಹನದಾಸ್ ಪೈಯವರ ಅಂತಿಮ ಸಂಸ್ಕಾರವನ್ನು ನಡೆಸಲಾಯಿತು. ಅಲ್ಲಿನ ಭಸ್ಮವನ್ನು ತಂದು ಮಾಧವ ವಿಹಾರದಲ್ಲಿ ವಿಸರ್ಜಿಸಲಾಯಿತು. ಪ್ರತಿ ವರ್ಷ ಇವರ ಸ್ಮೃತಿದಿನದಂದು ಈ ಸ್ಥಳದಲ್ಲಿ ಪುಷ್ಪ ನಮನವನ್ನು ನಡೆಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ