ತಲ್ಲೂರು : ಚರಂಡಿ ಕಾಮಗಾರಿ ಆರಂಭ, ಡಿವೈಡರ್ ವಿಸ್ತರಣೆಗೆ ಆಗ್ರಹ
Team Udayavani, May 17, 2019, 6:10 AM IST
ತಲ್ಲೂರು: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಪೇಟೆಯಲ್ಲಿ ಚರಂಡಿಯಿಲ್ಲದೆ ತೊಂದರೆಯಾಗುತ್ತಿರುವುದರ ಬಗ್ಗೆ ಅಲ್ಲಿನ ಜನ ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಸ್ಥಿತಿಯ ತೀವ್ರತೆಯನ್ನರಿತು ಸದ್ಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್ಬಿ ಅಧಿಕಾರಿಗಳು ಸ್ಪಂದಿಸಿದ್ದಾರೆ.
ತಲ್ಲೂರು ಪೇಟೆಯಲ್ಲಿ ಚರಂಡಿ ಕಾಮಗಾರಿ ಆರಂಭಿಸಿದ್ದಾರೆ.
ತಲ್ಲೂರು ಪೇಟೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ, ಕೃತಕ ನೆರೆ ಸೃಷ್ಟಿಯಾಗುವ ಭೀತಿಯೂ ಇಲ್ಲಿಯ ಜನರಿಗಿತ್ತು.
ಅದಲ್ಲದೆ ಕೆಲದಿನಗಳ ಹಿಂದೆ ಸುರಿದ ಮಳೆ ನೀರು, ಮಣ್ಣೆಲ್ಲ ಅಕ್ಕಪಕ್ಕದಲ್ಲಿರುವ ಮನೆಯಂಗಳಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ತುರ್ತು ಅಗತ್ಯವಾಗಿ ಚರಂಡಿ ನಿರ್ಮಾಣದತ್ತ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಆಗ್ರಹಿಸಿದ್ದರು.
ಡಿವೈಡರ್ : ವಿಸ್ತರಣೆಗೆ ಆಗ್ರಹ
ಇಲ್ಲಿರುವ ಡಿವೈಡರ್ನ ಅಗಲ ಕಡಿಮೆಯಿದ್ದು, ಇದರಿಂದ ಉಪ್ಪಿನಕುದ್ರು ಕಡೆಯಿಂದ ಬರುವ ಬಸ್ ಸಹಿತ ಇತರೆ ವಾಹನಗಳು ಕುಂದಾಪುರ ಅಥವಾ ನೇರಳಕಟ್ಟೆ ಕಡೆಗೆ ಸಂಚರಿಸಲು ರಸ್ತೆ ಕ್ರಾಸ್ ಮಾಡಬೇಕಾದರೆ, ಹೆದ್ದಾರಿ ಮಧ್ಯೆ ಬಂದು ನಿಲ್ಲಬೇಕು. ಇದರಿಂದ ಅಪಘಾತವಾಗುವುದರ ಜತೆಗೆ ಟ್ರಾಫಿಕ್ ನಿಲುಗಡೆ ಕೂಡ ಆಗುತ್ತದೆ.
ಇದಕ್ಕೆ ಡಿವೈಡರ್ನ ಅಗಲವನ್ನು ಇನ್ನು 4-5 ಫೀಟ್ ಆದರೂ ವಿಸ್ತರಿಸಬೇಕು ಎಂದು ಇಲ್ಲಿನ ವಾಹನ ಸವಾರರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ