ಪ್ರಾಚೀನ ಆಳುಪರ ಶಾಸನ ಪತ್ತೆ
Team Udayavani, Aug 16, 2019, 5:14 AM IST
ಕುಂದಾಪುರ: ಹಟ್ಟಿಯಂಗಡಿ – ಕನ್ಯಾನ ಗ್ರಾಮದಲ್ಲಿ ಸುಮಾರು ಕ್ರಿ.ಶ. 7-8ನೇ ಶತಮಾನಕ್ಕೆ ಸಂಬಂಧಪಟ್ಟ ಆಳುಪರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದೆ.
ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕ ಪ್ರೊ| ಪುರುಷೋತ್ತಮ ಬಲ್ಯಾಯ, ಪ್ರದೀಪ ಕುಮಾರ್ ಬಸ್ರೂರು ಹಾಗೂ ನಿವೃತ್ತ ಉಪನ್ಯಾಸಕ ಪ್ರೊ| ಬಿ.ಭಾಸ್ಕರ್ ಶೆಟ್ಟಿ ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಎರಡನೇಯ ಆಳುಪ ಅರಸನ ಕಾಲಕ್ಕೆ ಸಂಬಂಧಿಸಿದೆಂದು ತಿಳಿದು ಬಂದಿದೆ. ಈ ಶಾಸನದಲ್ಲಿ ಪಾಂಡ್ಯ ಆಳುಪೇಂದ್ರ ಪಟ್ಟಿಯಪುರಿ (ಹಟ್ಟಿಯಂಗಡಿ) ಹಾಗೂ ಭಟ್ಟರಕ ಎನ್ನುವ ಶಬ್ದಗಳು ಇದರಲ್ಲಿದ್ದು, ಎರಡೂ ಬದಿಗಳಲ್ಲಿ ಬರೆಯಲ್ಪಟ್ಟಿದೆ. ಪಾಂಡ್ಯ ಕುಲ ವಸ್ತುಸ್ಥಿತಿಯ ಕ್ರಿ.ಶ. 8 ನೇ ಶತಮಾನದ ಬೆಳ್ಮಣ್ಣು ತಾಮ್ರ ಶಾಸನ ಹಾಗೂ ಪೊಳಲಿ ಅಮ್ಮುಂಜೆ ಶಾಸನದಲ್ಲಿ ಬಂದಿರುವುದನ್ನು ಗಮನಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ