ಸಾರ್ವಜನಿಕ ಹಿಂದೂ ರುದ್ರಭೂಮಿ ಆವರಣದಲ್ಲೇ ಇಂಗು ಗುಂಡಿ ರಚನೆ


Team Udayavani, Jul 26, 2017, 8:10 AM IST

ingugundi.jpg

ಕಾಪು : ಗುಡ್ಡಗಾಡು ಮತ್ತು ರಸ್ತೆಯ ಮೇಲಿನಿಂದ ಹರಿದು ಬಂದು ಸುತ್ತಲಿನ ಮನೆಗಳಿಗೆ ನೆರೆಯ ಭೀತಿಯನ್ನು ಒಡ್ಡುತ್ತಿದ್ದ ಮಳೆ ನೀರನ್ನು ಸಾರ್ವಜನಿಕ ಹಿಂದೂ ರುದ್ರಭೂಮಿಯ ಆವರಣದಲ್ಲಿ ಇಂಗು ಗುಂಡಿ ತೋಡಿ, ಅಲ್ಲೇ ಶೇಖರಿಸಿ ಗ್ರಾಮದ ಅಂತರ್ಜಲ ವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಕೋಟೆ ಗ್ರಾ. ಪಂ. ಸದಸ್ಯ ರತ್ನಾಕರ ಕೋಟ್ಯಾನ್‌ ಆಧುನಿಕ ಭಗೀರಥನಾಗಿ ಮೂಡಿ ಬಂದಿದ್ದಾರೆ.

ಕೋಟೆ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿಯ ಸಮೀಪದಲ್ಲಿರುವ ಮಸೀದಿಯ ಆವರಣ ಗೋಡೆಯ ಒಳಗಿನಿಂದ ನುಗ್ಗಿ ಬರುವ ಮಳೆ ನೀರಿನಿಂದಾಗಿ ಪ್ರತೀ ವರ್ಷ ಇಲ್ಲಿನ ಕನಿಷ್ಟ ನಾಲ್ಕೈದು ಮನೆಯೊಳಗೆ ನೀರು ನುಗ್ಗಿ ನೆರೆ ಹಾವಳಿ ಉಂಟಾಗುತ್ತಿತ್ತು. ಮಾತ್ರವಲ್ಲದೇ ಈ ನೀರು ತೌಡಬೆಟ್ಟು ನಾಗಬನದ ಬಳಿಯ ಕೃಷಿ ಗದ್ದೆಗೆ ನುಗ್ಗಿ ಕೃಷಿ ಭೂಮಿಗೂ ಹಾನಿಯುಂಟಾಗುತ್ತಿತ್ತು.

ಇದನ್ನು ಮನಗಂಡ ಕೋಟೆ ಗ್ರಾ. ಪಂ. ಸದಸ್ಯ ರತ್ನಾಕರ ಕೋಟ್ಯಾನ್‌ ಅವರು ವಿವಿಧ ಅನುದಾನಗಳ ನಿರೀಕ್ಷೆಯೊಂದಿಗೆ ಹಿಂದು ರುದ್ರಭೂಮಿಯ ಆವರಣದೊಳಗೆಯೇ ಬƒಹತ್‌ ಗಾತ್ರದ ಇಂಗು ಗುಂಡಿಯನ್ನು ನಿರ್ಮಿಸಿದ್ದು, ಆ ಮೂಲಕ ಅಂತರ್ಜಲ ವೃದ್ಧಿಗೆ ಪೂರಕವಾದ ಯೋಜನೆಯನ್ನು ಹಾಕಿಕೊಂಡಿದ್ದಾರೆ.

2 ಲಕ್ಷ ರೂ. ಖರ್ಚು
ಗ್ರಾಮದ ಅಭಿವೃದ್ಧಿಯ ಬಗ್ಗೆ ಅತೀವ ಕಾಳಜಿ ಹೊಂದಿರುವ ರತ್ನಾಕರ ಕೋಟ್ಯಾನ್‌ ಅವರು ಸ್ಥಳೀಯ ಗ್ರಾ. ಪಂ., ತಾ. ಪಂ. ಮತ್ತು ಜಿ. ಪಂ. ಅನುದಾನದ ನಿರೀಕ್ಷೆಯಲ್ಲಿ ಗುತ್ತಿಗೆದಾರ ಪ್ರಭಾಕರ್‌ ಕೋಟ್ಯಾನ್‌ ಅವರ ಮೂಲಕವಾಗಿ ಸುಮಾರು 2 ಲಕ್ಷ ರೂ. ಹಣವನ್ನು ವ್ಯಯಿಸಿ ಇಂಗುಗುಂಡಿ ನಿರ್ಮಿಸುವ ಮೂಲಕ ನೆರೆ ನೀರಿನ ವಿಪತ್ತು ಪರಿಹಾರಕ್ಕೆ ಮಾರ್ಗೋಪಾಯ ಕಂಡು ಹುಡುಕಿರುವುದು ಮಾತ್ರವಲ್ಲದೇ ಜಲಸಂರಕ್ಷಿಸುವ ಮಹತ್ವದ ಯೋಜನೆಯನ್ನೂ ಕೈಗೆತ್ತಿಕೊಂಡಿದ್ದಾರೆ.

ಜನರೇ ಯೋಚಿಸಬೇಕು
ಇಂಗು ಗುಂಡಿ ನಿರ್ಮಾಣದಿಂದ ಸುತ್ತಲಿನ 25 ಎಕರೆಗೂ ಮಿಕ್ಕಿದ ವ್ಯಾಪ್ತಿ ಯಲ್ಲಿ ಅಂತರ್ಜಲ ವೃದ್ಧಿಯಾಗಲಿದ್ದು, ಪ್ರತೀ ವರ್ಷ ಕಾಡುವ ಕುಡಿಯುವ ನೀರಿನ ಬವಣೆಗೆ ಮುಕ್ತಿ ದೊರಕಿಸಲು ಮತ್ತು ಮಳೆಗಾಲದಲ್ಲಿ ಕಾಡುವ ನೆರೆ ಹಾವಳಿಯನ್ನು ತಡೆಗಟ್ಟಲೂ ಇದು ಸಹಕಾರಿಯಾಗಲಿದೆ. ಅವಕಾಶ ಸಿಕ್ಕಿದಲ್ಲಿ ಪ್ರತೀ ವಾರ್ಡುಗಳಲ್ಲೂ ಇಂತಹ ಇಂಗುಗುಂಡಿಗಳನ್ನು ನಿರ್ಮಿಸ ಬಹುದಾಗಿದ್ದು, ಈ ಬಗ್ಗೆ ಜನರೇ ಆಲೋ ಚಿಸಬೇಕಿದೆ ಎಂದು ರತ್ನಾಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ವರ ಸಹಕಾರ ಕಾರಣ
ಕೋಟೆ ಗ್ರಾ. ಪಂ. ಅಧ್ಯಕ್ಷೆ ಕೃತಿಕಾ ರಾವ್‌, ಉಪಾಧ್ಯಕ್ಷ ಗಣೇಶ್‌ ಕುಮಾರ್‌, ಗ್ರಾ.ಪಂ.ಸದಸ್ಯರು,ತಾ.ಪಂ. ಮತ್ತು ಜಿ. ಪಂ. ಸದಸ್ಯರ ಸಹಕಾರದಿಂದಾಗಿ ಇಂಗು ಗುಂಡಿ ರಚನೆಯ ಕನಸು ಸಾಕಾರಗೊಂಡಿದ್ದು, ಇದರ ಫಲಿತಾಂಶವನ್ನು ನೋಡಿಕೊಂಡು ನೀರಿನ ವೃಥಾ ಹರಿವನ್ನು ಬಳಸಿಕೊಂಡು 2-3 ಕಡೆಗಳಲ್ಲಿ ಇಂಗುಗುಂಡಿ ನಿರ್ಮಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.

2.50 ಲಕ್ಷ ಲೀ. ಮಳೆ ನೀರು ಸಂಗ್ರಹ
50 ಫೀಟ್‌ ಉದ್ದ, 15 ಫೀಟ್‌ ಅಗಲ ಮತ್ತು 15 ಫೀಟ್‌ ಆಳದ ಈ ಇಂಗು ಗುಂಡಿಯಲ್ಲಿ ಏಕಕಾಲಕ್ಕೆ 2.5 ಲಕ್ಷ ಲೀಟರ್‌ನಷ್ಟು ಮಳೆ ನೀರನ್ನು ಸಂಗ್ರಹಿಸಬಹುದಾಗಿದೆ. ಪಕ್ಕದ ಮಸೀದಿಯೊಳಗಿನಿಂದ ಬರುವ ನೀರನ್ನೂ ಈ ಇಂಗು ಗುಂಡಿಗೆ ಬರುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಬಾರಿಯ ಮಳೆಗಾಲದಲ್ಲಿ ತಲಾ 2.50 ಲೀ. ನಂತೆ ಇದುವರೆಗೆ 12 ಬಾರಿ ನೀರು ಭೂಮಿಯೊಳಕ್ಕೆ ಇಂಗಿದೆ.

ಮೊದಲ ಯತ್ನದಲ್ಲೇ ಯಶಸ್ಸು
ಇಂಗು ಗುಂಡಿಯಲ್ಲಿ ನೀರು ಶೇಖರಣೆಗೊಂಡಿರುವುದರಿಂದ ಹಿಂದೂ ರುದ್ರಭೂಮಿ ಸನಿಹದಲ್ಲಿರುವ ಪಂಚಾಯತ್‌ ನೀರು ಸರಬರಾಜಿನ ಕೊಳವೆ ಬಾವಿಯ ನೀರಿನ ಮಟ್ಟದಲ್ಲಿ ಈಗಾಗಲೇ ಏರಿಕೆಯಾಗಿದೆ. ರುದ್ರಭೂಮಿಯ ಒಳಗಿದ್ದ ಪಾಳು ಬಿದ್ದ ಕೊಳವೆ ಬಾವಿಯಲ್ಲಿಯೂ ಇದೀಗ ನೀರು ಶೇಖರಣೆಯಾಗಿದ್ದು, ಇದರಿಂದಾಗಿ ತಾನು ಮಾಡಿದ ಕೆಲಸ ಖುಷಿ ಕೊಟ್ಟಿದೆ ಎಂದು ಇಂಗುಗುಂಡಿ ನಿರ್ಮಾಣದ ರೂವಾರಿ ರತ್ನಾಕರ ಕೋಟ್ಯಾನ್‌ ತಿಳಿಸಿದ್ದಾರೆ.

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.