ಶ್ರೀಕೃಷ್ಣ ಮಠದ ಸ್ವರ್ಣಗೋಪುರ ಶೇ.75 ಪೂರ್ಣ
ಮೇ 31ರಿಂದ ಸಮರ್ಪಣೆ ಸಮಾರಂಭ
Team Udayavani, May 28, 2019, 6:10 AM IST
ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಗೆ ನೂತನವಾಗಿ ನಿರ್ಮಿಸುತ್ತಿರುವ ಸ್ವರ್ಣಗೋಪುರದ ಕೆಲಸ ಸುಮಾರು ಶೇ.75 ಪೂರ್ಣಗೊಂಡಿದೆ.
ಗರ್ಭಗುಡಿಯ ಮೇಲಿನ ನಾಲ್ಕೂಕಡೆ ಛಾವಣಿಯ ಮೇಲೆ ಸ್ವರ್ಣದ ಹಾಳೆಯನ್ನು ಮಡಾಯಿಸಲಾಗಿದೆ. ಮೇಲೆ ಹೋಗಲು ಅನುಕೂಲವಾಗುವಂತೆ ದೊಂಬೆಯ ಭಾಗವನ್ನು ಮಾತ್ರ ಹಾಕದೆ ಉಳಿಸಿಕೊಳ್ಳಲಾಗಿದೆ. ಕೆಳಭಾಗ ಎರಡು ಕಡೆ ತಾಮ್ರದ ತಗಡನ್ನು ಮಡಾಯಿಸಲಾಗಿದೆ. ಒಂದೆರಡು ದಿನಗಳಲ್ಲಿ ಈ ನಾಲ್ಕೂ ಕಡೆ ಚಿನ್ನದ ಹಾಳೆಯನ್ನೂ ಹೊದೆಸಲಾಗುತ್ತದೆ.
ಕೆಳಭಾಗ ಸಾಗುವಾನಿಯ ಮರ, ಅದರ ಮೇಲೆ ತಾಮ್ರದ ತಗಡನ್ನು ಹಾಕಿ, ಅದರ ಮೇಲೆ ಚಿನ್ನದ ಹಾಳೆಯನ್ನು ಜೋಡಿಸಲಾಗುವುದು. ಒಟ್ಟು 100 ಕೆ.ಜಿ. ಚಿನ್ನ, 800 ಕೆ.ಜಿ. ಬೆಳ್ಳಿ, 250 ಕೆ.ಜಿ. ತಾಮ್ರವನ್ನು ಬಳಸಲಾಗುತ್ತಿದೆ. ಒಟ್ಟು 2,500 ಚದರಡಿಯ ಛಾವಣಿಗೆ ಸಾಗುವಾನಿ ಮರದ ಮುಚ್ಚಿಗೆ ಅದರ ಮೇಲೆ ತಾಮ್ರ, ಚಿನ್ನದ ತಗಡು ಹೊದೆಸಲಾಗಿದೆ. ಸರ್ವಮೂಲ, ಹಂಸಮಂತ್ರ, ದಾನಿಗಳ ಹೆಸರನ್ನು ತಗಡಿನಲ್ಲಿ ಬರೆಸಲಾಗಿದೆ.
ಹಿಂದಿನ ತಾಮ್ರದ ತಗಡನ್ನು ಭಕ್ತರಿಗೆ ಟಂಕೆ ರೂಪದಲ್ಲಿ ಕೊಡಲಾಗುತ್ತದೆ. ಟಂಕೆ ಮಾಡಿಸುವ ಕೆಲಸವೂ ನಡೆಯುತ್ತಿದೆ.
ಮೇ 31ರಿಂದ ಜೂ. 10ರ ವರೆಗೆಸುವರ್ಣ ಗೋಪುರ ಸಮರ್ಪಣಾ ಸಮಾರಂಭ ಆಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ