ಕಾಪು ಸುಗ್ಗಿ ಮಾರಿಪೂಜೆ ಸಂಪನ್ನ
Team Udayavani, Mar 23, 2017, 12:43 PM IST
ಕಾಪು: ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಪ್ರಾರಂಭಗೊಂಡಿದ್ದ ಕಾಲಾವಧಿ ಸುಗ್ಗಿ ಮಾರಿಪೂಜೆಯು ಬುಧವಾರ ಸಂಜೆ ಸಂಪನ್ನಗೊಂಡಿತು.
ಕಾಪುವಿನ ಮೂರು ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಜರಗಿದ ಸುಗ್ಗಿ ಮಾರಿಪೂಜೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಭಾಗವಹಿಸಿ ಮಾರಿಯಮ್ಮ ದೇವಿಯ ದರ್ಶನ ಪಡೆದರು. ಮತ್ತು ವಿವಿಧ ಹರಕೆ, ಸೇವೆಗಳನ್ನು ಸಮರ್ಪಿಸಿದರು.
50,000ಕ್ಕೂ ಅಧಿಕ ಗದ್ದಿಗೆ ಪೂಜೆ ಸೇವೆ
ಗದ್ದಿಗೆಯೇ ಪ್ರಧಾನವಾಗಿರುವ ಕಾಪುವಿನ ಮಾರಿಗುಡಿಗಳಲ್ಲಿ ಸುಗ್ಗಿ ಮಾರಿಪೂಜೆಯ ಸಂದರ್ಭ 50,000ಕ್ಕೂ ಹೆಚ್ಚು ಗದ್ದಿಗೆ ಪೂಜೆ ಸೇವೆ, 20,000ಕ್ಕೂ ಹೆಚ್ಚು ಕುಂಕುಮಾರ್ಚನೆ ಮತ್ತು 20,000ಕ್ಕೂ ಹೆಚ್ಚು ಹೂವಿನ ಪೂಜೆ ಸೇವೆಯನ್ನು ಸಮರ್ಪಿಸಿದರು.
ಎರಡೂವರೆ ಲಕ್ಷ ಕೋಳಿ, 700 ಕುರಿ-ಆಡು ಮಾರಾಟ
ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಕುರಿ, ಆಡು ಮತ್ತು ಕೋಳಿಗಳನ್ನು ಮಾರಾಟ ಮಾಡಲು ಮತ್ತು ರಕ್ತಾಹಾರ ನೀಡಲು ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲಾಗಿತ್ತು. ದಾಖಲೆ ಸಂಖ್ಯೆಧಿಯಲ್ಲಿ 700ಕ್ಕೂ ಅಧಿಕ ಕುರಿ-ಆಡುಗಳು ಮತ್ತು ಎರಡೂವರೆ ಲಕ್ಷಕ್ಕೂ ಅಧಿಕ ಕೋಳಿಗಳು ಮಾರಾಟಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಸುಗ್ಗಿ ಮಾರಿಪೂಜೆಯು ತುಳುನಾಡಿನ ಪ್ರಮುಖ ಏಳು ಜಾತ್ರೆಗಳಲ್ಲಿ ಒಂದು ಎಂಬ ಪ್ರಸಿದ್ಧಿ ಪಡೆದಿದ್ದು, ಈ ಬಾರಿಯ ಸುಗ್ಗಿ ಮಾರಿಪೂಜೆಯ ಸಂದರ್ಭ 8 ಕೋ.ರೂ.ಗಳಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ. ಮಾರಿಗುಡಿಗಳಲ್ಲಿ ಹರಕೆ – ಸೇವೆ ಸಲ್ಲಿಕೆ, ಹಣ್ಣುಕಾಯಿ – ಹೂ ಮಾರಾಟ, ವಿವಿಧ ಸೊತ್ತುಗಳ ಮಾರಾಟ, ಕುರಿ – ಆಡು ಮತ್ತು ಕೋಳಿಗಳ ಮಾರಾಟದಿಂದಾಗಿ ಭಾರೀ ಆರ್ಥಿಕ ವ್ಯವಹಾರ ಸಂಚಯನವಾಗಿದೆ.
ಬಿಗಿ ಬಂದೋಬಸ್ತ್
ಈ ಬಾರಿಯ ಸುಗ್ಗಿ ಮಾರಿಪೂಜೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಸಿ ಕೆಮರಾ ಸಹಿತವಾಗಿ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಭಕ್ತರು ಆತಂಕರಹಿತರಾಗಿ ದೇವರ ದರ್ಶನ ಮಾಡುವಂತಾಯಿತು.
ಗಮನ ಸೆಳೆದ ಸ್ವತ್ಛತಾ ವ್ಯವಸ್ಥೆ
ಕಾಪು ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರ ನೇತೃತ್ವದಲ್ಲಿ ಸ್ವತ್ಛತೆ ಕಾಪಾಡಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಲ್ಲಲ್ಲಿ ಫಲಕಗಳನ್ನು ಅಳವಡಿಸಲಾಗಿದ್ದು, ಜತೆಗೆ 50ಕ್ಕೂ ಅಧಿಕ ಕಸದ ಡ್ರಮ್ಗಳನ್ನೂ ಇರಿಸಲಾಗಿತ್ತು. ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮತ್ತು ವ್ಯಾಪಾರಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ