ಕಂಗೆಟ್ಟ ಕೃಷಿಕರ ಚಿತ್ತ ಕೊಳಕೆ ಬೆಳೆಯತ್ತ

ಕಾರ್ತಿ ಬೆಳೆಯ ನಷ್ಟ ಸರಿದೂಗಿಸಲು ಕೃಷಿಕರ ಪರದಾಟ, ಬೈಹುಲ್ಲು ಪಿಂಡಿಗೆ 300 ರೂ.

Team Udayavani, Dec 13, 2021, 6:57 PM IST

ಕಂಗೆಟ್ಟ ಕೃಷಿಕರ ಚಿತ್ತ ಕೊಳಕೆ ಬೆಳೆಯತ್ತ

ಬೆಳ್ಮಣ್‌: ನಿರಂತರ ಮಳೆಯಿಂದಾಗಿ ಕಾರ್ತಿ ಬೆಳೆಯಲ್ಲಿ ಸಂಪೂರ್ಣ ಕೈ ಸುಟ್ಟುಕೊಂಡ ಕರಾವಳಿಯ ಕೃಷಿಕರು ಭಾರೀ ನಿರೀಕ್ಷೆಗಳೊಂದಿಗೆ ಕೊಳಕೆ ಬೆಳೆಯತ್ತ ಮುಖ ಮಾಡಿದ್ದಾರೆ. ಮುಂಗಾರು ಮಳೆ ನಿರಂತರವಾಗಿ ಸುರಿದು ಭತ್ತ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿರುವ ರೈತರು ತಮ್ಮ ಉಪ ಕಸುಬು ಹೈನುಗಾರಿಕೆಗೆ ಬಳಕೆಯಾಗುತ್ತಿದ್ದ ಬೈ ಹುಲ್ಲನ್ನೂ ಕಳೆದುಕೊಂಡು ಚಡಪಡಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಕೊಳಕೆ ಕಾಲದ ಕೃಷಿಯತ್ತ ತೊಡಗಿಸಿಕೊಂಡಿದ್ದಾರೆ.

ಮುಂಡ್ಕೂರು, ಬೆಳ್ಮಣ್‌, ಬೋಳ, ಕಡಂದಲೆ, ಏಳಿಂಜೆ, ಸಂಕಲಕರಿಯ, ಪೊಸ್ರಾಲು ಭಾಗದ ನದಿ ಬದಿಯ ನೀರಿನಾಶ್ರಯ ಇರುವ ಗದ್ದೆಗಳ ಕೃಷಿಕರು ಇದೀಗ ಕೊಳಕೆ ಕಾಲದ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಡಿಸೆಂಬರ್‌ ಮೊದಲ ವಾರದ ವರೆಗೂ ನಿರಂತರ ಮಳೆ ಸುರಿಯುತ್ತಿದ್ದು ಬೆಳೆ ನೀರು ಪಾಲಾಗಿತ್ತು.

ಬೈ ಹುಲ್ಲು ಪಿಂಡಿಗೆ 300 ರೂ.
ಕಳೆದ ವರ್ಷ ಪಿಂಡಿಗೆ 150 ರೂ.ನಂತೆ ಧಾರಾಳವಾಗಿ ಸಿಗುತ್ತಿದ್ದ ಬೈ ಹುಲ್ಲು ಈ ಬಾರಿ 300 ರೂ.ಗೆ ತಲುಪಿದೆ. ಈ ಮೂಲಕ ಕರಾವಳಿಯ ರೈತರ ಉಪಕಸುಬು ಹೈನುಗಾರಿಕೆಯ ನೆಮ್ಮದಿಯನ್ನೂ ಈ ಬಾರಿಯ ಮಳೆ ಕಸಿದು ಕೊಂಡಿದೆ. ಈ ಬಾರಿ ನಿರಂತರ ಮಳೆಗೆ ಬಹುತೇಕ ಗದ್ದೆಗಳ ಬೈ ಹುಲ್ಲು ನೆರೆಪಾಲಾಗಿದೆ. ಅಲ್ಲದೆ ಗದ್ದೆಯಲ್ಲೇ ಕೊಳೆತು ಹೋಗುತ್ತಿದೆ.

ಕಾರ್ತಿ ಬೆಳೆಯ ನಷ್ಟ ಸರಿದೂಗಿಸಲು ಕರಾವಳಿಯ ರೈತರು ಕೊಳಕೆ ಬೆಳೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಡಂದಲೆ ಭಾಗಗಗಳಲ್ಲಿ ಬಿತ್ತನೆ ನಡೆದಿದೆ. ಸಂಕಲಕರಿಯ ಭಾಗಗಳಲ್ಲಿ ಉಳುಮೆ ಪ್ರಾರಂಭಗೊಂಡಿದೆ.

ನಷ್ಟ ಸರಿದೂಗಿಸುವ ಆಶಯ
ಮಳೆಗಾಲದ ಬೆಳೆ ವಿಪರೀತ ಮಳೆಗೆ ಕೊಚ್ಚಿ ಹೋಗಿ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಕೊಳಕೆ ಬೆಳೆಗೆ ತೊಡಗಿದ್ದೇವೆ. 1 ಲಕ್ಷ ರೂ. ಬೆಲೆಯ ಬೈ ಹುಲ್ಲೂ ನಷ್ಟವಾಗಿದೆ. ಈ ಬೆಳೆ ನಷ್ಟ ಸರಿದೂಗಿಸುವ ಆಶಯ ಇದೆ. -ಸುಧಾಕರ ಸಾಲ್ಯಾನ್‌ ಸಂಕಲಕರಿಯ, ಕೃಷಿಕ

ಬೆಂಬಲ ಬೆಲೆ ಘೋಷಣೆ ವಿಳಂಬ
ಮಳೆಯಿಂದ ಉಂಟಾದ ನಷ್ಟ ಸರಿದೂಗಿ ಸುವುದು ಕಷ್ಟ, ರೈತರಿಗೆ ಬೆಂಬಲ ಬೆಲೆ ಘೋಷಣೆಯೂ ವಿಳಂಬವಾಗಿದೆ. ಕೊಳಕೆ ಬೆಳೆ ನಮ್ಮನ್ನು ರಕ್ಷಿಸಬಹುದು.
-ಶರತ್‌ ಶೆಟ್ಟಿ ಸಚ್ಚೇರಿಪೇಟೆ, ಕೃಷಿಕ

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.