ಸ್ವಾತಂತ್ರ್ಯದ ಆದರ್ಶಕ್ಕಾಗಿ ಸಾಲಗಾರರಾಗಿಯೇ ಮೃತಪಟ್ಟ ಎಂ.ಎಸ್‌.ಅಧಿಕಾರಿ


Team Udayavani, Aug 15, 2019, 6:03 AM IST

swatantrya

ಉಡುಪಿ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಿ ಸೆರೆಮನೆ ವಾಸ ಅನುಭವಿಸಿದವರಲ್ಲಿ ಉಡುಪಿ ಸಮೀಪದ ಮಟ್ಟು ಮೂಲದ ಸುಬ್ರಾಯ ಅಧಿಕಾರಿ ಒಬ್ಬರು. ಇವರು ಎಂ.ಎಸ್‌.ಅಧಿಕಾರಿ ಎಂದೇ ಪ್ರಸಿದ್ಧರು.

ಆಗ ಮುಂಬಯಿ ಮತ್ತು ಮದ್ರಾಸ್‌ನಲ್ಲಿ ಮಾತ್ರ ಕಾನೂನು ಕಾಲೇಜು ಇದ್ದ ಕಾರಣ ಅಧಿಕಾರಿಯವರು ಮುಂಬಯಿಗೆ ತೆರಳಿ ಕಾನೂನು ಪದವೀಧರರಾದರು. ಆಗ ಸ್ವಾತಂತ್ರ್ಯದ ಹೋರಾಟದ ಕಾವು ಇತ್ತು. ಸ್ವಾತಂತ್ರ್ಯ ಹೋರಾಟದ ಪ್ರಯುಕ್ತ ಬೆಳಗ್ಗೆ ಪ್ರಭಾತ್‌ ಫೇರಿಯಲ್ಲಿ ಪಾಲ್ಗೊಂಡ ಅಧಿಕಾರಿಯವರನ್ನು ಬಂಧಿಸಿ ಯರವಾಡಾ ಜೈಲಿಗೆ ತಳ್ಳಲಾಯಿತು. ಆಗ ಕಾನೂನು ಕಟಕಟೆಯಲ್ಲಿ ಅಧಿಕಾರಿಯವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾದದ್ದು ಉಲ್ಲೇಖನೀಯ. ಇದು ನಡೆದದ್ದು 1930ರ ಡಿಸೆಂಬರ್‌ 7ರಂದು.

ಮುಂಬಯಿ ಉಚ್ಚ ನ್ಯಾಯಾ ಲಯಕ್ಕೆ ಬ್ರಿಟಿಷ್‌ ಸರಕಾರದ ವತಿಯಿಂದ ಮೇಲ್ಮನವಿ ಸಲ್ಲಿಕೆ ಯಾದದ್ದನ್ನು ಗಮನಿ ಸಿದರೆ ಕೆಳ ನ್ಯಾಯಾಲಯದಲ್ಲಿ ಅಧಿಕಾರಿ ಯವರಿಗೆ ನ್ಯಾಯದಾನವಾಗಿತ್ತು ಎಂದು ಅರ್ಥೈಸಬಹುದು. ಅಖೀಲ ಭಾರತ ಪ್ರಭಾತ್‌ ಫೇರಿ ಸಂಘವು ಕಾನೂನುಬಾಹಿರ ಸಂಘಟನೆ ಎಂಬ ಸರಕಾರದ ವಾದ, ಇದಕ್ಕೆ ಪ್ರತಿಯಾಗಿ ಪ್ರಭಾತ್‌ ಫೇರಿಗೆ ಧಾರ್ಮಿಕ ಆಯಾಮಗಳೂ ಇವೆ ಎಂಬ ಅಧಿಕಾರಿಯವರ ವಾದ ಇತ್ಯಾದಿಗಳು ದಾಖಲಾಗಿವೆ. ಚಳವಳಿಕಾರರ ಕೈಯಲ್ಲಿ ರಾಷ್ಟ್ರಧ್ವಜ, ತಾಳ ಗಳಿದ್ದವು. ರಾಷ್ಟ್ರಧ್ವಜ ಇದ್ದುದನ್ನು ಸರಕಾರವೂ ತಾಳವಿದ್ದದ್ದನ್ನು ಅಧಿಕಾರಿ ಯವರ ಪರವಾಗಿಯೂ ಉಲ್ಲೇಖೀ ಸಲಾಗುತ್ತದೆ. ಕೊನೆಗೆ ಅಧಿಕಾರಿಯವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಯಾಯಿತೆಂಬ ಮಾಹಿತಿ ದೊರಕುತ್ತದೆ.

‘ಜೈಲುವಾಸದ ಶಿಕ್ಷೆ ಆರು ತಿಂಗಳುಗಳಿಂದ ಮೂರು ತಿಂಗಳುಗಳಿಗೆ ಇಳಿಕೆಯಾಯಿತು’ ಎಂಬುದನ್ನು ಅವರ ಪುತ್ರ ರಾಂಚಿಯ ಕೋಲ್ ಇಂಡಿಯಾದ ನಿವೃತ್ತ ಮುಖ್ಯ ಎಂಜಿನಿಯರ್‌ ಪಾಂಡುರಂಗ ಅಧಿಕಾರಿಯವರು ಸ್ಮರಿಸಿಕೊಳ್ಳುತ್ತಾರೆ.

ಕಾನೂನು ಪದವಿ ಪಡೆದ ಅನಂತರ ಅಧಿಕಾರಿಯವರು ಕಾರ್ಕಳಕ್ಕೆ ಬಂದು ನೆಲೆಸಿದರು. ಕಾರ್ಕಳದ ರಾಮಸಮುದ್ರದ ಬಳಿ ಕುಷ್ಠ ರೋಗ ನಿವಾರಣ ಸಂಘವನ್ನು ಸ್ಥಾಪಿಸಿ ಅಲ್ಲಿ ಕುಷ್ಠ ರೋಗಿಗಳಿಗೆ ಔಷಧೋಪಚಾರ ನಡೆಸಿದರು. ಖಾದಿ, ಗಾಂಧಿ ಟೋಪಿ ಪ್ರಚಾರವನ್ನು ನಡೆಸುತ್ತಿದ್ದ ಅಧಿಕಾರಿಯವರು ಚಳವಳಿ, ಪ್ರಭಾತ್‌ ಫೇರಿಯಲ್ಲಿ ಕಾರ್ಕಳದಲ್ಲಿ ನಡೆಸುತ್ತಿದ್ದ ಸಮಯದಲ್ಲಿ ಪತ್ನಿ ಇಂದಿರಾಬಾಯಿ ಅಧಿಕಾರಿಯವರೂ ಚಿಕ್ಕಮಗುವನ್ನೂ ಕರೆದುಕೊಂಡು ಹೋಗುತ್ತಿದ್ದರು.

ಜನಪ್ರತಿನಿಧಿಗಳಾದ ಎ.ಬಿ. ಶೆಟ್ಟಿ, ಯು. ಶ್ರೀನಿವಾಸ ಮಲ್ಯರಂತವರು ಅಧಿಕಾರಿ ಯವರ ಸಂಪರ್ಕ ಹೊಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್‌ ಸರಕಾರದಲ್ಲಿ ಮಂತ್ರಿಗಳಾಗಿದ್ದ ಕೆ.ಆರ್‌.ಕಾರಂತರ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಉಡುಪಿ ಕಾನೂನು ಮಹಾವಿದ್ಯಾಲಯವನ್ನು ಡಾ| ಟಿ.ಎಂ.ಎ.ಪೈ ಅವರು ಸ್ಥಾಪಿಸಿದ ಬಳಿಕ ಕೆಲಕಾಲ ಉಪ ಪ್ರಾಂಶುಪಾಲರಾಗಿದ್ದರು. ಇದು ಸುಮಾರು 1960ರ ಸಮಯ.

‘ಎಂಜಲೆಲೆ ಕೊಂಡೊಯ್ಯಬಾರದು’

ಆ ಕಾಲದಲ್ಲಿ ತೀರಾ ಹಿಂದುಳಿದ ಕೊರಗ ಸಮುದಾಯದವರು ಇತರರು ಊಟ ಮಾಡಿದ ಎಲೆಯನ್ನು ಕೊಂಡೊಯ್ಯುತ್ತಿದ್ದ ಕಾಲದಲ್ಲಿ ಮನೆಯಲ್ಲಿ ಶ್ರಾದ್ಧ ಮೊದಲಾದ ವಿಶೇಷಗಳು ನಡೆಯುವಾಗ ಕೊರಗ ಬಂಧುಗಳನ್ನು ಕರೆದು ಊಟ ಹಾಕಿ ಎಂಜಲೆಲೆಯನ್ನು ಕೊಂಡೊಯ್ಯಬಾರದು ಎಂದು ಕಿವಿಮಾತನ್ನೂ ಹೇಳುತ್ತಿದ್ದರು ಎನ್ನುತ್ತಾರೆ ಈಗ ಉಡುಪಿ ಅಜ್ಜರ ಕಾಡಿನಲ್ಲಿ ನೆಲೆಸಿರುವ ಪುತ್ರ ಪಾಂಡುರಂಗ ಅಧಿಕಾರಿಯವರು.

ಒಂದು ಇಂಚು ಆಸ್ತಿ ಉಳಿಸಲಿಲ್ಲ

ಈಗಲೂ ಹಿರಿಯ ತಲೆಮಾರಿನವರು ಸಿಕ್ಕಿದಾಗ ನಮ್ಮ ತಂದೆಯ ಬಗೆಗೆ ಅಭಿಮಾನದಿಂದ ಹೇಳುತ್ತಾರೆ. ಅವರು 65ನೆಯ ವರ್ಷದಲ್ಲಿ ಸಾಲಗಾರರಾಗಿಯೇ 1967ರಲ್ಲಿ ನಿಧನ ಹೊಂದಿದರು. ಒಂದು ಇಂಚು ಆಸ್ತಿಯನ್ನೂ ಉಳಿಸಿಕೊಂಡಿರಲಿಲ್ಲ. ಕಾನೂನು ಪದವೀಧರರಾದರೂ ವಕೀಲಿ ವೃತ್ತಿಯಲ್ಲಿ ಆಸಕ್ತರಾಗದೆ ಸಾಮಾಜಿಕ ಚಟುವಟಿಕೆಗಳಲ್ಲಿಯೇ ಶಕ್ತಿಯನ್ನು ವಿನಿಯೋಗಿಸಿದರು.

  • ಪಾಂಡುರಂಗ ಅಧಿಕಾರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.