ಇಂದಿನಿಂದ ಅಧಿಕೃತವಾಗಿ ಯಾಂತ್ರಿಕ ಮೀನುಗಾರಿಕೆ ಆರಂಭ

ದೋಣಿ, ಬಲೆ ದುರಸ್ತಿ ಮೂಲಕ ಮೀನುಗಾರಿಕೆಗೆ ಸಿದ್ಧತೆ

Team Udayavani, Aug 1, 2019, 5:47 AM IST

meenugarike-aramba

ಮಲ್ಪೆ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಯಾಂತ್ರಿಕ ಮೀನುಗಾರಿಕೆಗೆ ಹೇರಲಾಗಿದ್ದ ನಿಷೇಧದ ಅವಧಿ ಜು. 31ಕ್ಕೆ ಮುಗಿದಿದೆ. ಆ. 1ರಿಂದ ಅಧಿಕೃತವಾಗಿ ಯಾಂತ್ರಿಕ ಮೀನುಗಾರಿಕೆ ಪ್ರಾರಂಭವಾಗಲಿದೆ. ಮಲ್ಪೆ ಮೀನುಗಾರರು ಸ್ಥಳೀಯ ಮಾರಿಹಬ್ಬ ಮತ್ತು ನಾಗರಪಂಚಮಿಯ ಹಿನ್ನೆಲೆಯಲ್ಲಿ ಆ. 6ರ ಬಳಿಕ ಮೀನುಗಾರಿಕೆಗೆ ತೆರಳಲಿದ್ದಾರೆ.

ಮಲ್ಪೆ ಬಂದರಿನಲ್ಲಿ ಬೋಟ್‌ಗಳಲ್ಲಿ ಬಲೆ ತುಂಬಿ ಅಗತ್ಯ ಪರಿಕರಗಳನ್ನು ಜೋಡಿಸಿ ಸಜ್ಜುಗೊಳಿಸುವ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ.
ಮೀನುಗಾರಿಕೆಗೆ ಎರಡು ತಿಂಗಳ ರಜೆ ಕಾರಣ ಊರಿಗೆ ಹೋದ ಮೀನುಗಾರ ಕಾರ್ಮಿಕರು ಮತ್ತೆ ಬಂದರಿಗೆ ಬಂದು ಸಿದ್ಧತೆಯಲ್ಲಿ ತೊಡಗಿದ್ದಾರೆ. ಸ್ಥಳೀಯ ಮೀನುಗಾರರಲ್ಲದೆ ಉತ್ತರ ಕರ್ನಾಟಕ ಸೇರಿದಂತೆ ಹೊರರಾಜ್ಯ ಜಾರ್ಖಂಡ್‌, ಒಡಿಶಾ, ಆಂಧ್ರಪ್ರದೇಶ, ಕೇರಳದ ಬಹುತೇಕ ಮಂದಿ ಕಾರ್ಮಿಕರಾಗಿ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಡೀಸೆಲ್‌ ರೋಡ್‌ ಸೆಸ್‌ ವಿನಾಯಿತಿ
ಏರುತ್ತಿರುವ ಡೀಸೆಲ್‌ ದರ ಮೀನುಗಾರರಿಗೆ ದೊಡ್ಡ ಹೊರೆಯಾಗುತ್ತಿದೆ. ಜತೆಗೆ ರಫ್ತಾಗುವ ಮೀನಿನ ದರದ ಪ್ರಮಾಣ ಏರಿಕೆಯಾಗದೆ ನಷ್ಟ ಉಂಟಾಗುತ್ತಿದೆ. ಮೀನುಗಾರಿಕೆ ಡೀಸೆಲ್‌ಗೆ ಕೇಂದ್ರ ಸರಕಾರ ರೋಡ್‌ ಸೆಸ್‌ನಿಂದ ವಿನಾಯಿತಿ ನೀಡಬೇಕು. ಪಶ್ಚಿಮ ಕರಾವಳಿಯ 5 ರಾಜ್ಯಗಳಲ್ಲಿ ಏಕರೂಪದ ಸಮಗ್ರ ನೀತಿಯನ್ನು ರೂಪಿಸಿಬೇಕೆಂಬ ಮೀನುಗಾರರ ಹಲವು ವರ್ಷದ ಬೇಡಿಕೆ ಇನ್ನೂ ಜಾರಿಗೊಂಡಿಲ್ಲ.

ಡೀಸೆಲ್‌ ಪೂರೈಕೆ ವಾರ್ಷಿಕ ಲೆಕ್ಕಾಚಾರದಲ್ಲಿ ಬೇಕು
ಮೀನುಗಾರಿಕೆಗೆ ನೀಡುತ್ತಿರುವ ಡೀಸೆಲ್‌ ಕೋಟ ಈಗಿರುವ 300ಲೀ. ನಿಂದ 500 ಲೀ. ಗೆ ಹೆಚ್ಚಿಸಬೇಕೆಂಬ ಬೇಡಿಕೆ ಕಳೆದ ಕೆಲವು ವರ್ಷಗಳಿಂದ ಇದೆ. ಪ್ರಸ್ತುತ ಸರಕಾರವು ಡೀಸೆಲ್‌ ಕೋಟಾವನ್ನು ತಿಂಗಳವಾರು ಲೆಕ್ಕದಲ್ಲಿ ಪ್ರತೀ ಬೋಟಿಗೆ 9000 ಲೀ. ನಂತೆ ನೀಡುತ್ತಿದೆ. ಅದನ್ನು ವಾರ್ಷಿಕ ಲೆಕ್ಕದ ವಿಧಾನದಲ್ಲಿ (9000ಲೀ x 10ತಿಂಗಳು = 90,000 ಲೀ. ನಂತೆ ಪ್ರತಿ ಬೋಟಿಗೆ) ವಿತರಿಸಬೇಕೆಂಬಆಗ್ರಹ ಮೀನುಗಾರರದ್ದಾಗಿದೆ. ದೋಣಿಗಳ ದುರಸ್ತಿ ಮತ್ತು ಸಮುದ್ರದಲ್ಲಿ ಮೀನಿನ ಅಲಭ್ಯತೆಯಿರುವ ವೇಳೆ ಮೀನುಗಾರಿಕೆಗೆ ತೆರಳುವುದಿಲ್ಲ. ಈ ಸಂದರ್ಭ ತಿಂಗಳ ಲೆಕ್ಕಾಚಾರದಲ್ಲಿ ನೀಡುವ ಸಬ್ಸಿಡಿ ಡಿಸೆಲ್‌ ಆ ತಿಂಗಳು ಕೈ ಬಿಡಬೇಕಾಗುತ್ತದೆ. ಇದು ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಮೀನುಗಾರರ ಅಭಿಪ್ರಾಯ.

ಹೆಚ್ಚುವರಿ ಅವಧಿಗೆ ಆಗ್ರಹ
ಈ ಬಾರಿ ಸಮುದ್ರದಲ್ಲಿ ಉಂಟಾದ ಪ್ರತಿಕೂಲ ವಾತಾವರಣ, ಮೀನಿನ ಅಲಭ್ಯತೆಯಿಂದ ಮಳೆಗಾಲದ ಕಡಲತೀರದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಭಾರಿ ಹೊಡೆದ ಬಿದ್ದಿದೆ. ಎರಡು ತಿಂಗಳ ಅವಧಿ ಮುಗಿದರೂ ನಿರೀಕ್ಷಿತ ಮೀನು ಸಿಗದೇ ಕಂಗಾಲಾಗಿದ್ದಾರೆ. ಹೆಚ್ಚುವರಿ ಅವಧಿಯನ್ನು ನೀಡಬೇಕೆಂಬ ಬೇಡಿಕೆಯನ್ನು ಮಂಡಿಸಿದ್ದಾರೆ.

2 ಸಾವಿರ ಬೋಟ್‌ ಸಿದ್ಧ
ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಒಟ್ಟು 2000ಕ್ಕೂ ಅಧಿಕ ಯಾಂತ್ರಿಕ ಟ್ರಾಲ್‌ದೋಣಿಗಳಿವೆ. 1000ಡೀಪ್‌ಸೀ , 500 ತ್ರಿಸೆವೆಂಟಿ, 145 ಪಸೀìನ್‌, 250ಸಣ್ಣಟ್ರಾಲ್‌ಬೋಟ್‌ಗಳಿವೆ. ಮುಂದಿನ ಎರಡು ಮೂರು ವಾರದೊಳಗೆ ಪೂರ್ಣ ಪ್ರಮಾಣದಲ್ಲಿ ಬೋಟ್‌ಗಳು ಮೀನುಗಾರಿಕೆ ತೆರಳಲಿವೆ. ಕಳೆದ ವರ್ಷ ಮೀನುಗಾರಿಕೆ ಅವಧಿಯಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮೀನು ದೊರಕದೆ ಬಹುತೇಕ ಆಳಸಮುದ್ರ ಬೋಟ್‌ಗಳು ನಷ್ಟವನ್ನು ಅನುಭವಿಸಿದ್ದವು.

ನಿಯಮ ಪಾಲಿಸಲು ಸೂಚನೆ
ಅವೈಜ್ಞಾನಿಕ ನಿಷೇಧಿತ ಮೀನುಗಾರಿಕೆ ಕಂಡು ಬಂದಲ್ಲಿ ಅಂತಹ ದೋಣಿಗಳ ಲೈಸನ್ಸ್‌ ರದ್ದು ಗೊಳಿಸಲಾಗುವುದು ಮತ್ತು ಕರರಹಿತ ಡೀಸೆಲ್‌ ಸೌಲಭ್ಯವನ್ನು ನಿಲ್ಲಿಸಲಾಗುತ್ತದೆ. ದೋಣಿಗಳಿಗೆ ಏಕರೂಪದ ಬಣ್ಣ, 35 ಎಂಎಂ ಆಳತೆಯ ಚೌಕಾಕಾರ ಮೆಶ್‌ ಕಾಡ್‌ಎಂಡ್‌ ಬಲೆ ಉಪಯೋಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
-ಗಣೇಶ್‌ ಕೆ., ಮೀನುಗಾರಿಕೆ ಉಪ ನಿರ್ದೇಶಕರು, ಮಲ್ಪೆ

ಪ್ರಾರ್ಥನೆ ಬಳಿಕ ತೆರಳುತ್ತೇವೆ
ಕಲ್ಮಾಡಿ ಕಟ್ಟದಬುಡದ ಭಗವತೀ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ನಡೆಯುವ ಆಷಾಢ ಮಾರಿಹಬ್ಬ ಉತ್ಸವದ ಬಳಿಕ ಮೀನುಗಾರಿಕೆಗೆ ತೆರಳುತ್ತೇವೆ. ಆ. 3ರಂದು ಮಾರಿಹಬ್ಬ ಇದೆ. ಅಲ್ಲಿನ ಪ್ರಸಾದವನ್ನು ಬಂದರಿಗೆ ತಂದು ಸಾಮೂಹಿಕವಾಗಿ ಪ್ರಾರ್ಥಿಸಿ ಗಂಗಾಮಾತೆಗೆ ಸಮರ್ಪಿಸಿಯೇ ಕಡಲಿಗಿಳಿಯಲಾಗುವುದು.
-ರವಿರಾಜ್‌ ಸುವರ್ಣ, ಅಧ್ಯಕ್ಷರು ಮಲ್ಪೆ ಡೀಪ್‌ಸೀ ಟ್ರಾಲ್‌ಬೋಟ್‌
ತಾಂಡೇಲರ ಸಂಘ

ಆ.6ರ ಬಳಿಕ ಮೀನುಗಾರಿಕೆ
ಇಂದಿನಿಂದ ಯಾಂತ್ರಿಕ ಮೀನುಗಾರಿಕೆ ನಿಷೇಧ ತೆರವಾಗಿದ್ದರಿಂದ ಮೀನುಗಾರಿಕೆಗೆ ತೆರಳಲು ಅವಕಾಶವಿದೆ. ಈ ಬಾರಿ ಇದುವರೆಗೂ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕವಾದ ತೂಫಾನ್‌ ಆಗದಿರುವುದು ಮೀನುಗಾರರಲ್ಲಿ ಉತ್ಸಾಹ ಕಾಣುತ್ತಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಮುಗಿದು ಬಹುತೇಕ ದೋಣಿಗಳು ಆ.6ರ ಬಳಿಕವೇ ಮೀನುಗಾರಿಕೆಗೆ ತೆರಳಲಿವೆ.
-ಸತೀಶ್‌ ಕುಂದರ್‌, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.