ವಿದ್ಯುತ್‌ ಮರುಸಂಪರ್ಕ ಸಮಸ್ಯೆ ಇನ್ನೂ ಕಗ್ಗಂಟು

ಹಕ್ಕೆಲ್‌, ಮದಕ, ಮಜಲೋಡಿ, ಅದಮಾರ್‌ ವ್ಯಾಪ್ತಿ

Team Udayavani, Nov 25, 2019, 5:05 AM IST

PALLI-KEB1

ಕೆರೆಯ ಮೇಲೆ ಹಾದುಹೋಗಿರುವ ಹಳೆಯ ಕಾಲದ ವಿದ್ಯುತ್‌ ತಂತಿ.

ಕಾಂತಾವರ: ಕಾಂತಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಕ್ಕೆಲ್‌, ಮದಕ, ಮಜಲೋಡಿ, ಅದಮಾರ್‌ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು ಸ್ಥಳೀಯರಿಗೆ ವಿದ್ಯುತ್‌ ಸಂಪರ್ಕ ಸಮಸ್ಯೆ ಮಾತ್ರ ಇನ್ನೂ ಕಗ್ಗಂಟಾಗಿದೆ. ಈ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಈ ಭಾಗಕ್ಕೆ ಮೂಡಬಿದಿರೆ ವ್ಯಾಪ್ತಿಯಿಂದ ವಿದ್ಯುತ್‌ ಸಂಪರ್ಕವಾಗುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

ವಿದ್ಯುತ್‌ ಪರಿವರ್ತಕ
ಈ ಭಾಗದಲ್ಲಿ ಎರಡು ವಿದ್ಯುತ್‌ ಪರಿವರ್ತಕಗಳಿದ್ದು , ಅದರಲ್ಲಿ ಅದಮಾರ್‌ ಬೆಟ್ಟ ಎಂಬಲ್ಲಿರುವ ವಿದ್ಯುತ್‌ ಪರಿವರ್ತಕಮಾತ್ರ ಖಾಸಗಿ ಜಾಗದಲ್ಲಿ ಅಳವಡಿಸ ಲಾಗಿದೆ. ಅಲ್ಲಿಗೆ ಸಂಪರ್ಕಿಸಲು ಯಾವುದೇ ರಸ್ತೆ ಇಲ್ಲದೆ ವಿದ್ಯುತ್‌ ಪರಿವರ್ತಕ ಕೆಟ್ಟುಹೋದಲ್ಲಿ ತಿಂಗಳುಗಟ್ಟಲೆ ಮೆಸ್ಕಾಂ ಅಧಿಕಾರಿಗಳನ್ನು ಕಾಯಬೇಕಾಗುತ್ತದೆ.

ಮೂಡುಬಿದಿರೆ ವ್ಯಾಪ್ತಿಈ ಭಾಗಕ್ಕೆ ವಿದ್ಯುತ್‌ ವಿತರಣೆ
ಮೂಡುಬಿದ್ರಿ ವ್ಯಾಪ್ತಿಯಿಂದ ಒದಗಿಸಲಾಗುತ್ತಿದ್ದು ಗ್ರಾಮಸ್ಥರ ಯಾವುದೇ ಸಮಸ್ಯೆ, ಬಿಲ್‌ ಪಾವತಿ ಮತ್ತು ಇನ್ನಿತರ ಕಡತಗಳಿಗೆ ಬೆಳುವಾಯಿ ಮಾರ್ಗವಾಗಿ,ಅಲ್ಲದೆ ಕಡಂದಳೆ -ಕೆಪ್ಲಾಜೆ ಮಾರ್ಗವಾಗಿ ಸುತ್ತು ಬಳಸಿ ಮೂಡುಬಿದಿರೆ ತಲುಪ ಬೇಕು. ಕಾಂತಾವರ ಗ್ರಾಮ ಕಾರ್ಕಳ ತಾಲೂಕನ್ನು ಒಳಗೊಂಡಿದ್ದು, ಕೇವಲ 50 ಮನೆಯವರು ತಮ್ಮ ಯಾವುದೇ ಸಮಸ್ಯೆಗೆ ಮೂಡಬಿದ್ರಿ ಮೆಸ್ಕಾಂ ಇಲಾಖೆಗೆ ಅಲೆಯುವಂತಾಗಿದೆ. ಆದ್ದರಿಂದ ಈ ಭಾಗದ ವಿದ್ಯುತ್‌ ಸಂಪರ್ಕವನ್ನು ಕಾರ್ಕಳ ವ್ಯಾಪ್ತಿಗೆ ವರ್ಗಾಯಿಸು ವಂತೆ ಹಲವು ಬಾರಿ ಮನವಿ ಸಲ್ಲಿಸಿದರೂಇದುವರೆಗೆ ಯಾವುದೇ ಪ್ರಯೋಜನ ವಾಗಿಲ್ಲ ಎಂಬುದು ಇಲ್ಲಿಯವರ ಅಳಲು.

ತುರ್ತು ಸಂದರ್ಭ ವಿಳಂಬ
ಮಳೆಗಾಲ ಹಾಗೂ ಇನ್ನಿತರ ತುರ್ತು ಸಂದರ್ಭ ಯಾವುದೇ ವಿದ್ಯುತ್‌ ಸಮಸ್ಯೆ ಹಾಗೂ ವಿದ್ಯುತ್‌ ತಂತಿಗಳ ಮೇಲೆ ಮರದ ಕೊಂಬೆಗಳು ಉರುಳಿ ಸಂಪರ್ಕ ಕಡಿತಗೊಂಡಲ್ಲಿ ಮೂಡುಬಿದಿರೆಯಿಂದ ಸಿಬಂದಿ ಆಗಮಿಸಬೇಕಾಗುತ್ತದೆ. ಅವರು ಸಮಯಕ್ಕೆ ಸರಿಯಾಗಿ ಆಗಮಿಸುವುದಿಲ್ಲ. ಈ ಬಗ್ಗೆ ಕಾಂತಾವರ ಸಿಬಂದಿಯನ್ನು ಸಂಪರ್ಕಿಸಿದರೆ ಇದು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎನ್ನುತ್ತಾರೆ. ಇದರಿಂದ ಇಲ್ಲಿಯವರು 3-4 ದಿನ ವಿದ್ಯುತ್‌ ಸಂಪರ್ಕ ಇಲ್ಲದೆ ಕತ್ತಲಲ್ಲೇ ದಿನ ಕಳೆಯಬೇಕಾಗುತ್ತದೆ. ಸಂಪರ್ಕಕಡಿತಗೊಂಡಲ್ಲಿ ಯಾವ ಭಾಗದ ಇಲಾಖೆ ಸಿಬಂದಿಯನ್ನು ಸಂಪರ್ಕಿಸಬೇಕೆಂದು ತಿಳಿಯದ ಪರಿಸ್ಥಿತಿ ಇಲ್ಲಿಯವರದ್ದಾಗಿದೆ.

ಜೋತು ಬಿದ್ದ ವಿದ್ಯುತ್‌ ತಂತಿ
ಈ ಭಾಗದಲ್ಲಿ ಮದಕ ಕೆರೆಯ ಮೇಲೆಯೆ ವಿದ್ಯುತ್‌ ತಂತಿ ಹಾದು ಹೋಗಿದ್ದು, ಇದು ಅತಿ ಹಳೆಯದಾಗಿರುವುದರಿಂದ ತುಂಡಾಗಿ ಕೆರೆಗೆ ಬಿದ್ದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಈ ಸಮಸ್ಯೆ ಕುರಿತು ಇಲ್ಲಿಯ ಸದಸ್ಯರು ತಮ್ಮ ಆರ್‌ಆರ್‌ ನಂಬರ್‌ ಲಗತ್ತಿಸಿ ಕಾರ್ಕಳ ಹಾಗೂ ಮೂಡುಬಿದಿರೆ ಇಲಾಖೆಗೆ ಮನವಿ ನೀಡಿದ್ದರು. 2015ರಲ್ಲಿ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಜಯ ಎಸ್‌. ಕೋಟ್ಯಾನ್‌ ಸ್ಥಳೀಯಾಡಳಿತದ ಮೂಲಕ ಕಾರ್ಕಳ, ಮೂಡಬಿದಿರೆ ಮೆಸ್ಕಾಂಗೆ ಪತ್ರ ಬರೆದು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಕುರಿತು ವಿವರಿಸಿದ್ದರು. ಈ ಸಂದರ್ಭ ಸಮಸ್ಯೆ ಪರಿಹರಿಸುವ ಭರವಸೆಯನ್ನೂ ಅವರು ನೀಡಿದ್ದರು.

ಚರ್ಚಿಸಿ ಸೂಕ್ತ ಕ್ರಮ
ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಈ ಭಾಗದ ಜನರ ಸಮಸ್ಯೆ ಪರಿಹರಿಸುವಲ್ಲಿ ಕ್ರಮ ಕೈಗೊಳ್ಳುತ್ತೇವೆ
-ನಾರಾಯಣ ನಾಯ್ಕ,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಕಾರ್ಕಳ

ಸಮಸ್ಯೆ ಶೀಘ್ರ ಪರಿಹರಿಸಿ
ಹಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಪರಿಹಾರ ಕಂಡಿಲ್ಲ. ಇನ್ನಾದರೂ ಎಚ್ಚೆತ್ತು ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನಿಸಿ.
-ಸುಧಾಕರ ಪೂಜಾರಿ, ಮದಕ

-ಸಂದೇಶ್‌ ಕುಮಾರ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.