ಮಳೆಗಾಲ ಶುರುವಾದರೂ ಮುಗಿಯದ ಬೈಲೂರು ಜೋಡು ರಸ್ತೆ ಕಾಮಗಾರಿ
Team Udayavani, Jun 24, 2019, 5:53 AM IST
ಅಜೆಕಾರು: ಕಾರ್ಕಳ -ಉಡುಪಿ ಮುಖ್ಯ ರಸ್ತೆಯ ಜೋಡುರಸ್ತೆಯಿಂದ ಬೈಲೂರು ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿತ್ತಾದರೂ ಮಳೆ ಗಾಲ ಮುಗಿಯುವ ಮುನ್ನ ಪೂರ್ಣಗೊಳ್ಳದೆ ವಾಹನ ಸವಾರರು ಸಂಕಷ್ಟ ಪಡು ವಂತಾಗಿದೆ.
ಮೋರಿಗಳ ಕೆಲಸ ಆಗಿಲ್ಲ
ಕೇಂದ್ರ ರಸ್ತೆ ನಿಧಿ ಯೋಜನೆಯಡಿ ರೂ. 25 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಗಲಗೊಳಿಸಿ ಡಾಮರು ಹಾಕುವ ಕಾಮಗಾರಿ ಶುರುವಾಗಿತ್ತು. ಇದಕ್ಕಾಗಿ ರಸ್ತೆಯ ಇಕ್ಕೆಲಗಳ ಮಣ್ಣನ್ನು ತೆಗೆಯಲಾಗಿದೆ ಯಾದರೂ ಡಾಮರೀಕರಣ ಪೂರ್ಣ ಗೊಂಡಿಲ್ಲ. ಕೆಲವೆಡೆ ರಸ್ತೆಯ ಒಂದು ಪಾರ್ಶ್ವ ಮಾತ್ರ ಡಾಮರು ಹಾಕಲಾಗಿದೆ. ಇನ್ನು ಕೆಲವೆಡೆ ರಸ್ತೆ ಅಗೆದು ಹಾಕಲಾಗಿದೆ. ಜೋಡುರಸ್ತೆಯಿಂದ ಬೈಲೂರುವರೆಗೆ 12 ಕ್ಕೂ ಹೆಚ್ಚು ಮೋರಿಗಳಿದ್ದು ಎಲ್ಲ ಮೋರಿಗಳ ಕಾಮಗಾರಿ ಅರ್ಧದಷ್ಟೇ ನಡೆದಿದೆ. ಇದರಿಂದ ವಾಹನ ಚಾಲನೆ ಕಷ್ಟಕರವಾಗಿದೆ.
ರಸ್ತೆಯಲ್ಲಿಯೇ ಹರಿಯುವ ಮಳೆ ನೀರು
ಕಾಮಗಾರಿ ಪೂರ್ಣಗೊಳ್ಳದೇ ಇರುವು ದರಿಂದ ಮಳೆನೀರು ರಸ್ತೆಯಲ್ಲೇ ಹರಿ ಯುತ್ತಿದೆ. ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣಗೊಂಡಿವೆ. ಇನ್ನು ರಸ್ತೆ ಅಂಚಿನಲ್ಲಿ ಹೊಸ ಮಣ್ಣ ನ್ನು ಹಾಕಲಾಗಿದ್ದು ಇದು ಮಳೆಯ ನೀರಿಗೆ ಕೊಚ್ಚಿ ಹೋಗಿದೆ. ಇದು ದಾರಿಹೋಕರಿಗೂ ಸಮಸ್ಯೆತಂದಿದೆ.
ತೆರವಾಗದ ವಿದ್ಯುತ್ ಕಂಬ, ಮರಗಳು
ರಸ್ತೆ ವಿಸ್ತಾರಗೊಳ್ಳುವ ಸಂದರ್ಭ ರಸ್ತೆಯಂಚಿನ ವಿದ್ಯುತ್ ಕಂಬಗಳು ಹಾಗೂ ನೂರಾರು ಮರಗಳು ಹಾಗೆಯೇ ಬಿಡಲಾಗಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ಮರಗಳ ಸುತ್ತಲಿನ ಮಣ್ಣು ತೆಗೆದಿರುವುದರಿಂದ ಗಾಳಿ ಬಂದಾಗ ರಸ್ತೆಗೆ ಉರುಳಿ ಬೀಳುವ ಸಾಧ್ಯತೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…