ಮರವಂತೆ, ಉಪ್ಪುಂದ ಮಳೆ ಆರ್ಭಟ, ಕಡಲಬ್ಬರ
Team Udayavani, Jul 23, 2019, 5:00 AM IST
ಉಪ್ಪುಂದ: ರವಿವಾರ ಕಡಿಮೆಯಾಗಿದ್ದ ಮಳೆ ಮರವಂತೆ, ಖಂಬದಕೋಣೆ, ನಾಗೂರು, ಉಪ್ಪುಂದ ಪರಿಸರದಲ್ಲಿ ಸೋಮವಾರ ಮತ್ತೆ ಅಬ್ಬರಿಸಿದೆ.
ಶನಿವಾರದಿಂದ ರವಿವಾರ ರಾತ್ರಿಯವರೆಗೆ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಸೋಮವಾರ ಬೆಳಗ್ಗೆಯಿಂದ ಬಿರುಸುಗೊಂಡಿದೆ. ಉಪ್ಪುಂದ, ಶಾಲೆಬಾಗಿಲು, ಬಿಜೂರು ರಾ. ಹೆದ್ದಾರಿಯಲ್ಲಿ ಮಳೆ ನೀರು ನಿಂತುಕೊಂಡ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.
ತ್ರಾಸಿ-ಮರವಂತೆ ಬೀಚ್ ವ್ಯಾಪ್ತಿಯಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದೆ. ದೊಡ್ಡ ಗಾತ್ರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಯಾವುದೇ ಅಪಾಯವಾಗಿಲ್ಲ
ತ್ರಾಸಿ ಬೀಚ್ನ ಗಾಳಿ ತೋಪಿನ ಬಳಿ ಕಡಲ್ಕೊರೆತ ಕಾಣಿಸಿಕೊಂಡಿದೆ. ತೀರದ ಮನೆಗಳಿಗೆ ಯಾವುದೇ ಅಪಾಯವಾಗಿಲ್ಲ ಎಂಬ ಮಾಹಿತಿ ಇದೆ.
ಖಂಬದಕೋಣೆ, ನಾಗೂರು, ನಾವುಂದ ಪ್ರದೇಶ ಗಳ ತೋಡುಗಳಲ್ಲಿ ನೀರು ತುಂಬಿ ಹರಿಯುತ್ತದೆ.
ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಕಾರಣ ಬಿಜೂರು ಸುಮನಾವತಿ ನದಿ, ಖಂಬದಕೋಣೆ ಯಡಮಾವಿನ ಹೊಳೆಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದು, ತುಂಬಿ ಹರಿಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ