ಫಲಿತಾಂಶ ಆತ್ಮವಿಶ್ವಾಸ ಹೆಚ್ಚಿಸಿದೆ: ಸ್ವಾತಿ
Team Udayavani, Apr 16, 2019, 6:15 AM IST
ಉಡುಪಿ: ಎಂಜಿಎಂ ವಿದ್ಯಾರ್ಥಿನಿ ಸ್ವಾತಿ 592 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಅಂಬಾಗಿಲು ಮಹಾಲಕ್ಷ್ಮೀ ನಗರದ ಉದಯಶಂಕರ ನಾಯಕ್ ಹಾಗೂ ಗಿರಿಜಾ ನಾಯಕ್ ದಂಪತಿಯ ದ್ವಿತೀಯ ಪುತ್ರಿ ಸ್ವಾತಿ. ಗಣಿತ ಮತ್ತು ರಾಸಾಯನಶಾಸ್ತ್ರದಲ್ಲಿ ತಲಾ 100, ಭೌತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ತಲಾ 99 ಅಂಕ, ಹಿಂದಿಯಲ್ಲಿ 98, ಇಂಗ್ಲಿಷ್ನಲ್ಲಿ 96, ಗಳಿಸಿದ್ದಾರೆ.
ತಂದೆ ಬೆಂಗಳೂರು ಗಾಂಧಿ ನಗರ ಸಿಂಡಿಕೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದು, ತಾಯಿ ಕುಂಜಿಬೆಟ್ಟು ಯುಪಿಎಂಸಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಕ್ಲರ್ಕ್ ಕೆಲಸ ಮಾಡುತ್ತಿದ್ದಾರೆ.
ಎಂಜಿನಿಯರಿಂಗ್ ಕನಸು
ಪಿಯುಸಿ ಫಲಿತಾಂಶ ಬೇಗನೆ ಪ್ರಕಟಗೊಂಡಿರುವುದರಿಂದ ಸಿಇಟಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಹೆಚ್ಚಾಗಿದೆ. ಪೂರ್ವ ತಯಾರಿಗೂ ಅನುಕೂಲ ವಾಗಿದೆ. ಸಿಇಟಿ ಪರೀಕ್ಷೆ ಬರೆದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಕಲಿತು ಮುಂದೆ ಸಾಫ್ಟ್ವೇರ್ ಎಂಜಿನಿಯರ್ ಆಗಬೇಕೆಂಬುದು ನನ್ನ ಕನಸು ಎಂದರು.
ಮಗಳ ಸಾಧನೆ ಖುಷಿ
ತಂದಿದೆ ಮಗಳ ಸಾಧನೆ ಅತ್ಯಂತ ಖುಷಿ ತಂದಿದೆ. ಇಂತಹ ಮಗಳನ್ನು ಪಡೆದ ನಾವು ನಿಜವಾಗಿಯೂ ಪುಣ್ಯವಂತರು. ನಾವು ಯಾರು ಕೂಡ ಓದುವಂತೆ ಅವಳ ಮೇಲೆ ಒತ್ತಡ ಹೇರಿಲ್ಲ. ಅವಳ ಇಷ್ಟದಂತೆ ಓದಿ, ಸ್ವ ಪ್ರಯತ್ನದಿಂದಲೇ ಈ ಸಾಧನೆ ಮಾಡಿದ್ದಾಳೆ.
-ಗಿರಿಜಾ ನಾಯಕ್, ತಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ