ಡಾಮರೇ ಕಾಣದ ಮಲ್ಲಾರ್‌-ಮುಗ್ಗೇರ್ಕಳ- ಚೌಕಿ ಸಂಪರ್ಕ ರಸ್ತೆ !

ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರು; ಮನವಿಗೆ ಸಿಗದ ಸ್ಪಂದನೆ

Team Udayavani, Sep 23, 2019, 5:54 AM IST

2209PALLI01

ಬಜಗೋಳಿ (ಪಳ್ಳಿ ): ಮಾಳ ಗ್ರಾ.ಪಂ. ವ್ಯಾಪ್ತಿಯ ಮಲ್ಲಾರ್‌ ಮುಗ್ಗೇರ್ಕಳ -ಚೌಕಿ ಸಂಪರ್ಕ ರಸ್ತೆಯು ಡಾಮರು ಕಾಣದೇ ಸಂಚಾರ ದುಸ್ತರವಾಗಿದೆ. ಸುಮಾರು 4.5 ಕಿ.ಮೀ. ಉದ್ದದ ಈ ರಸ್ತೆಯ ಪ್ರಾರಂಭದಲ್ಲಿ 100 ಮೀ. ಕಾಂಕ್ರೀಟಿಕರಣಗೊಂಡಿದ್ದರೂ ಉಳಿದದ್ದು ಕಚ್ಚಾ ರಸ್ತೆ.

ಮಾಳ, ಮಲ್ಲಾರ್‌ ಹಾಗೂ ಚೌಕಿ ಪ್ರದೇಶಗಳಿಗೆ ತೆರಳಲು ಸ್ಥಳೀಯರು ಈ ರಸ್ತೆಯನ್ನೇ ಅವಲಂಭಿಸಿದ್ದು, ರಸ್ತೆ ಹೊಂಡಗುಂಡಿಗಳಿಂದ ಕೂಡಿರುವ ಕಾರಣ ಸಂಚಾರ ಬಲು ಕಷ್ಟಕರ ಎಂಬುದು ಸ್ಥಳೀಯರ ಅಳಲು.

ಬಾಡಿಗೆ ವಾಹನಗಳೂ ಬರುತ್ತಿಲ್ಲ!
ಈ ಪರಿಸರದಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಮನೆಗಳು ಸೇರಿ ಸುಮಾರು 100ಕ್ಕೂ ಅಧಿಕ ಮನೆಗಳಿವೆ. ಕನೆಗುಂಡಿ, ಮುಗ್ಗೇರ್ಕಲ, ಸುಂಕದಕಟ್ಟೆ ಅಸುಪಾಸಿನ ಸ್ಥಳೀಯರು ದಿನ ನಿತ್ಯದ ವ್ಯವಹಾರಕ್ಕೆ ಈ ರಸ್ತೆ ಅತ್ಯಗತ್ಯ. ಆದರೆ ರಸ್ತೆಯ ದುರಾವಸ್ಥೆಯಿಂದಾಗಿ ಬಾಡಿಗೆ ವಾಹನಗಳೂ ಬರಲು ಹಿಂದೇಟುಹಾಕುತ್ತಿವೆ. ಪಡಿತರ ಕೇಂದ್ರ, ಗ್ರಾ.ಪಂ. ಕಚೇರಿ ಹಾಗೂ ಪ್ರಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕೆಂದರೂ ಈ ರಸ್ತೆಯ ಮೂಲಕವೇ ತೆರಳಬೇಕು. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಗ್ರಾಮಸ್ಥರು ಹರಸಾಹಸ ಪಡಬೇಕು ಎಂಬುದು ಗ್ರಾಮಸ್ಥರ ಆರೋಪ.

ಮಳೆಗಾಲದಲ್ಲಿ ಕೆಸರುಮಯ
ಈ ಭಾಗದಲ್ಲಿ ಮುಗ್ಗೇರ್ಕಳ ದೈವಸ್ಥಾನವೂ ಇದ್ದು ನಿರಂತರ ಮಳೆ ಸುರಿದಲ್ಲಿ ರಸ್ತೆ ಕೆಸರಿನಿಂದ ಆವೃತವಾಗುವ ಕಾರಣ ಸಂಚಾರದ ವೇಳೆ ಹಲವು ವಾಹನಗಳು ಹೂತುಹೋದ ಉದಾಹರಣೆಗಳೂ ಇವೆ. ಸಮಸ್ಯೆ ಕುರಿತು ಜನಪ್ರತಿನಿಧಿಗಳ ಗಮನ ಸೆಳೆದ ಪರಿಣಾಮ ಕಳೆದ ಬಾರಿ 50, 000 ರೂ. ವೆಚ್ಚದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ದುರಸ್ತಿಗೊಳಿಸಲಾಗಿತ್ತಾದರೂ ಈ ಬಾರಿಯ ಮಳೆಗೆ ರಸ್ತೆ ಮತ್ತೆ ಕೆಸರಿನಿಂದ ಆವೃತ್ತವಾಗಿದೆ ಎನ್ನುತ್ತಾರೆ ಸ್ಥಳೀಯರು.

ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈ ವರೆಗೆ ಬೇಡಿಕೆ ಈಡೇರಿಲ್ಲ. ಇನ್ನಾದರೂ ರಸ್ತೆ ಡಾಮರೀಕರಣಗೊಳಿಸಿ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸರ್ವೇ ಕಾರ್ಯ ಮುಗಿದಿದೆ
ಈ ರಸ್ತೆಯ ಸರ್ವೇಕಾರ್ಯ ಇತ್ತೀಚೆಗೆ ಮುಗಿದಿದ್ದು, ಮುಂದಿನ ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದ ಬಳಿಕ ರಸ್ತೆಕಾಮಾಗಾರಿ ಕೈಗೊಳ್ಳಲಾಗುವುದು.
-ಉದಯ ಎಸ್‌. ಕೋಟ್ಯಾನ್‌,ಜಿ.ಪಂ. ಸದಸ್ಯರು

ಪ್ರಸ್ತಾವನೆ ಸಲ್ಲಿಕೆ
ಮಲ್ಲಾರ್‌-ಮುಗ್ಗೇರ್ಕಳ- ಚೌಕಿ ಸಂಪರ್ಕ ರಸ್ತೆ ಡಾಮರೀಕರಣಕ್ಕೆ ಪಂಚಾಯತ್‌ನಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಡಾಮರೀಕರಣ ಕಾಮಗಾರಿ ನಡೆಸಲಾಗುವುದು.
-ಅಜಿತ್‌ ಹೆಗ್ಡೆ,ಮಾಳ ಗ್ರಾ.ಪಂ.ಅಧ್ಯಕ್ಷರು

ಶಾಲಾ ವಾಹನವೂ ಬರುತ್ತಿಲ್ಲ
ರಸ್ತೆ ದುರ‌ವಸ್ಥೆಯಿಂದಾಗಿ ಶಾಲಾ ಮಕ್ಕಳ ವಾಹನ ಬರದೆ ಮಕ್ಕಳು ನಡೆದುಕೊಂಡೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಶೀಘ್ರವಾಗಿ ಡಾಮರೀಕರಣಗೊಂಡಲ್ಲಿ ಜನರ ಬಹುಕಾಲದ ಬೇಡಿಕೆ ಇಡೇರಿದಂತಾಗುತ್ತದೆ.
– ಶಂಕರ್‌,ಸ್ಥಳೀಯರು

- ಸಂದೇಶ್‌ಕುಮಾರ್‌ ನಿಟ್ಟೆ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.