ಆಗಿರುವ ಕೆಲಸವೇ ಪ್ರಚಾರಕ್ಕೆ ವಸ್ತು
Team Udayavani, Mar 18, 2018, 8:00 AM IST
ಕಾಂಗ್ರೆಸ್ನ ಪ್ರಭಾವಿ ಯುವನಾಯಕನೆಂದು ಗುರುತಿಸಲ್ಪಟ್ಟಿರುವ, ಮಾತಿನಲ್ಲೇ ಕಾರ್ಯಕರ್ತರನ್ನು ಆಕರ್ಷಿಸಬಲ್ಲ ಶಕ್ತಿ ಹೊಂದಿರುವ ಅಮೃತ್ ಶೆಣೈ ಅವರು ಮೊನ್ನೆ ಮೊನ್ನೆ ಎಐಸಿಸಿ ಸದಸ್ಯರಾಗಿ ನೇಮಕಗೊಂಡವರು. ರಾಜ್ಯ ಯುವ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ, ಉಡುಪಿ-ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಮಂಗಳೂರು ವಿ.ವಿ. ಸೆನೆಟ್ ಸದಸ್ಯರಾಗಿ ದುಡಿದಿರುವ ಅಮೃತ್ ಶೆಣೈ ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಉಸ್ತುವಾರಿ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ. ರಾಜ್ಯ ಸರಕಾರ, ಅದರಲ್ಲೂ ವಿಶೇಷವಾಗಿ ಪ್ರಮೋದ್ ಮಧ್ವರಾಜ್ ಅವರು ಮಾಡಿರುವ ಜನಪರ ಕೆಲಸಗಳೇ ನಮ್ಮ ಪ್ರಚಾರದ ಮುಖ್ಯ ವಿಷಯ ಎನ್ನುತ್ತಾರೆ ಅಮೃತ್ ಶೆಣೈ.
ಪ್ರಚಾರ ಯಾವ ರೀತಿ?
ಈಗಾಗಲೇ ಬೂತ್ ಸಮಿತಿ ಸಭೆಗಳು ಶೇ. 90ರಷ್ಟು ಮುಗಿದಿವೆ. ಬೂತ್ ಮಟ್ಟದಲ್ಲಿ ವಿವಿಧ ಘಟಕಗಳನ್ನು ರಚಿಸಲಾಗಿದ್ದು ಅವರೆಲ್ಲರೂ ಕೂಡ ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಾಟ್ಸಪ್, ಫೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸೂಕ್ತ ರೀತಿಯ ಪ್ರಚಾರ ಮಾಡುತ್ತಿದ್ದೇವೆ.
ಪ್ರಮೋದ್ ಮಧ್ವರಾಜ್ ಅಂಥದ್ದೇನು ಮಾಡಿದ್ದಾರೆ?
24 ಗಂಟೆ ವಿದ್ಯುತ್ ದೊರೆಯುತ್ತಿದೆ. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ವಾರಾಹಿಯಿಂದ ನೀರು ತರುವ ಯೋಜನೆಗೆ ಚಾಲನೆ ಸಿಕ್ಕಿದೆ. 18,000 ಕುಟುಂಬಗಳಿಗೆ ಬಿಪಿಎಲ್ ನೀಡಲಾಗಿದೆ. ಪಡುಕರೆ ಸೇತುವೆ, ಬೀಡಿನಗುಡ್ಡೆ ಬಯಲು ರಂಗಮಂಟಪ, ಕ್ರೀಡಾಂಗಣ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಹಕ್ಕುಪತ್ರ ವಿತರಣೆ ಇತ್ಯಾದಿ ಜನಪರ ಕೆಲಸಗಳು ಆಗಿವೆ. ಬಿ.ಆರ್.ಶೆಟ್ಟಿ ಅವರೊಂದಿಗಿನ ಒಪ್ಪಂದದಿಂದಾಗಿ ಉತ್ತಮ ಆಸ್ಪತ್ರೆ ದೊರೆಯುವಂತಾಗಿದೆ. ರಾಜ್ಯ ಸರಕಾರದ ಇತರ ಯೋಜನೆಗಳು ಕೂಡ ಉಡುಪಿಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನವಾಗಿವೆ.
ಸಚಿವರು ಉಡುಪಿಗೆ ಸೀಮಿತರಾಗಿದ್ದಾರಾ?
ಹಾಗೇನಿಲ್ಲ. ಉಡುಪಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲ ಕಡೆ ಗಮನ ಹರಿಸಿದ್ದಾರೆ. ಜನಬೆಂಬಲ ದೊರೆಯುತ್ತಿದೆ.ನೀವೂ ಕೂಡ ಹಿಂದೆ ಆಕಾಂಕ್ಷಿ ಎಂಬ ಮಾತುಗಳಿದ್ದವು…ನಾನಾಗಿ ಸ್ಥಾನಮಾನ, ಪಕ್ಷದ ಟಿಕೆಟ್ ಕೇಳಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಅವಕಾಶ ನೀಡಬೇಕೆಂಬ ಬೇಡಿಕೆ ನನ್ನ ಬೆಂಬಲಿಗರದ್ದು. ನನಗೆ ಇಷ್ಟರ ವರೆಗೆ ಕೇಳದೆಯೇ ದೇವರು ಕೊಡುತ್ತಾ ಬಂದಿದ್ದಾನೆ.
ಉಡುಪಿಯಲ್ಲಿ ಕೆಲಸ ಬಾಕಿ ಇಲ್ಲವೆ?
ಹೆಚ್ಚಿನ ಕೆಲಸಗಳು ಪ್ರಮೋದ್ ಅವರಿಂದ ನಡೆದಿವೆ. ಕುಡಿಯುವ ನೀರಿನ ಯೋಜನೆಯಂಥ ಕೆಲವು ಕಾಮಗಾರಿಗಳು ಆರಂಭಗೊಂಡಿವೆ ಮಾತ್ರ. ಅವು ಪೂರ್ಣಗೊಳ್ಳಬೇಕಿದೆ. ಉಳಿದಂತೆ ಸಮರ್ಪಕ ಒಳಚರಂಡಿ ಮತ್ತಿತರ ಕೆಲಸಗಳು ನಡೆಯಬೇಕಿವೆ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್