ನೀರಿನ ಟ್ಯಾಂಕ್ ಸಮೀಪವೇ ಕಸದ ರಾಶಿ
ಮಾಂಡಿ ಮೂರುಕೈ ಸಮೀಪ
Team Udayavani, Mar 20, 2020, 5:50 AM IST
ಗೋಳಿಯಂಗಡಿ: ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಡಿ ಮೂರು ಕೈ ಸಮೀಪದ ಹಲವಾರು ಮನೆಗಳಿಗೆ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್ ಪಕ್ಕದಲ್ಲೇ ಕಸವನ್ನು ಡಂಪ್ ಮಾಡಲಾಗುತ್ತಿದೆ. ನೀರಿನ ಟ್ಯಾಂಕ್ ಪಕ್ಕದಲ್ಲೇ ಕಸದ ರಾಶಿ ಬಿದ್ದಿದೆ.
ಹೆಬ್ರಿ, ಸೋಮೇಶ್ವರ ಹಾಗೂ ಬೆಳ್ವೆ – ಗೋಳಿಯಂಗಡಿ ಪೇಟೆಗಳನ್ನು ಸಂಧಿಸುವ ಮಾಂಡಿ ಮೂರುಕೈ ಪ್ರದೇಶ ಪ್ರಮುಖ ಜಂಕ್ಷನ್ ಆಗಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜಂಕ್ಷನ್ನಿಂದ ತುಸು ದೂರದಲ್ಲೇ ಸ್ವಲ್ಪ ಒಳ ಪ್ರದೇಶದಲ್ಲಿ ಈ ನೀರಿನ ಟ್ಯಾಂಕ್ ಇದೆ. ಅದರ ಸಮೀಪವೇ ಈ ಕಸವನ್ನು ಡಂಪ್ ಮಾಡಲಾಗಿದೆ.
ಪಂಚಾಯತ್ನವರ ಬಳಿ ಕೇಳಿದರೆ ಇದು ಪಂಚಾಯತ್ ವ್ಯಾಪ್ತಿಯವರು ಕಸ ಎಸೆಯುತ್ತಿರುವುದಲ್ಲ, ವಾಹನಗಳಲ್ಲಿ ಬೇರೆ ಬೇರೆ ಕಡೆಗಳಿಂದ ಬಂದಂತಹ ಜನರು ಬೆಳಗ್ಗೆ ಬೇಗ ಹಾಗೂ ರಾತ್ರಿ ವೇಳೆ ಇಲ್ಲಿಗೆ ಬಂದು ಕಸ ಎಸೆದು ಹೋಗುತ್ತಾರೆ ಎನ್ನುತ್ತಾರೆ.
ವಿಲೇವಾರಿ ಘಟಕವಿಲ್ಲ
ಮಡಾಮಕ್ಕಿ, ಅಲಾºಡಿ, ಗೋಳಿಯಂಗಡಿ ಪಂಚಾಯತ್ ವ್ಯಾಪ್ತಿಗಳಲ್ಲಿ ಎಲ್ಲಿಯೂ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲದಿರುವುದೇ ಇಂತಹ ಡಂಪಿಂಗ್ ಯಾರ್ಡ್ಗಳು ಅಲ್ಲಲ್ಲಿ ಸೃಷ್ಟಿಯಾಗಲು ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ತೆರವಿಗೆ ಆಗ್ರಹ
ಕೊರೊನಾ ಸೋಂಕು, ಹಕ್ಕಿ ಜ್ವರ ಮತ್ತಿತರ ಸಾಂಕ್ರಮಿಕ ರೋಗಗಳು ಎಲ್ಲೆಡೆ ಹಬ್ಬುತ್ತಿದ್ದು, ಕುಡಿಯುವ ನೀರಿನ ಟ್ಯಾಂಕ್ ಸಮೀಪವೇ ರಾಶಿ ಬಿದ್ದಿರುವ ಕಸದ ರಾಶಿಯನ್ನು ಕೂಡಲೇ ಸಂಬಂಧಪಟ್ಟ ಸ್ಥಳೀಯ ಪಂಚಾಯತ್ನವರು ತೆರವು ಮಾಡಬೇಕು ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ