ಸತ್ಯ, ವಿಜ್ಞಾನ, ರೋಗಿಪರ ಧೈರ್ಯ ಅಗತ್ಯ
ಮಾಹೆ ವಿ.ವಿ.: ತೃತೀಯ ದಿನದ ಘಟಿಕೋತ್ಸವದಲ್ಲಿ ಡಾ| ಪೀಟರ್
Team Udayavani, Nov 23, 2020, 1:54 AM IST
ಸಾಂದರ್ಭಿಕ ಚಿತ್ರ
ಉಡುಪಿ: ಅಧಿಕಾರದಲ್ಲಿರುವವರಿಗೆ ಸತ್ಯ ಹೇಳಲು, ವಿಜ್ಞಾನದ ಪ್ರತಿಪಾದ ಕರಾಗಲು, ರೋಗಿಗಳಿಗಾಗಿ ಪ್ರತಿಪಾದಿಸಲು ಸದಾ ಧೈರ್ಯ ಬೇಕು. ರೋಗಿಗಳಿಗಾಗಿ ಮಾಡಿದ ಶ್ರಮ ಉತ್ತಮ ಫಲಿತಾಂಶ ನೀಡದಿದ್ದರೂ ಅಗತ್ಯದ ಕೆಲಸಕ್ಕಾಗಿ ನಾವು ಶ್ರಮಿಸ ಲೇಬೇಕು. ಈ ಪರಿಶ್ರಮ ಜಗತ್ತಿನ ಒಳಿತಿಗಾಗಿ ಎಂಬ ಅರಿವು ಇದ್ದಿರಬೇಕು ಎಂದು ನ್ಯಾಶನಲ್ ಬೋರ್ಡ್ ಆಫ್ ಮೆಡಿಕಲ್ ಎಕ್ಸಾಮಿನರ್ ಅಧ್ಯಕ್ಷ ಮತ್ತು ಸಿಇಒ ಡಾ| ಪೀಟರ್ ಜೆ. ಕತ್ಸುಪ್ರಾಕಿಸ್ ಕರೆ ನೀಡಿದರು.
ರವಿವಾರ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ 28ನೇ ಇ ಘಟಿಕೋತ್ಸವದ ಮೂರನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಾಠ ಕಲಿಸಿದ ಕೋವಿಡ್
ಕೊರೊನಾ ಕಾಲಘಟ್ಟದಲ್ಲಿ ವಿಜ್ಞಾನವೇ ವೈದ್ಯಕೀಯ ಪ್ರಯೋಗಕ್ಕೆ ಮೂಲ ಎನ್ನುವ ಪಾಠವನ್ನು ಕಲಿಯಲಾಗಿದೆ. ವೈದ್ಯಕೀಯ ಶಿಕ್ಷಣ ಪಡೆದ ಬಳಿಕವೂ ವೃತ್ತಿ ಜೀವನದುದ್ದಕ್ಕೂ ವಿದ್ಯಾರ್ಥಿಗಳಾಗಿ ಕಲಿಯುತ್ತಿ ರಬೇಕು ಎಂಬ ಸಂದೇಶವಿದೆ. ಇದು ಹೊರೆಯಲ್ಲ, ಬದಲಾಗಿ ಇದು ಅವಕಾಶ. ವೈದ್ಯಕೀಯ ಕ್ಷೇತ್ರದಲ್ಲಿ ಮಾನವ ಜನಾಂಗದ ಸುಧಾರಣೆಯಲ್ಲಿ ನಾವು ಪಾಲ್ಗೊಳ್ಳಲು ಸಿಕ್ಕಿದ ಅವಕಾಶವಿದು ಎಂದರು.
ಮಾಹೆ ಟ್ರಸ್ಟಿ ವಸಂತಿ ಆರ್. ಪೈ, ಸಹಕುಲಾಧಿಪತಿ ಡಾ| ಎಚ್. ಎಸ್.ಬಲ್ಲಾಳ್, ಸಹ ಕುಲಪತಿಗ ಳಾದ ಡಾ| ಪಿಎಲ್ಎನ್ಜಿ ರಾವ್, ಡಾ| ದಿಲೀಪ್ ಜಿ. ನಾಯ್ಕ, ಡಾ| ಸಿ.ಎಸ್. ತಮ್ಮಯ್ಯ, ಕುಲಸಚಿವ ಡಾ| ನಾರಾಯಣ ಸಭಾಹಿತ್, ಮೌಲ್ಯಮಾಪನ ಕುಲಸಚಿವ ಡಾ| ವಿನೋದ ಥಾಮಸ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ, ಉಪಕುಲಸಚಿವರಾದ ಡಾ| ಗುರು ಪ್ರಸಾದ್, ಡಾ| ಪ್ರೀತಮ್ ಕುಮಾರ್ ಉಪಸ್ಥಿತ ರಿದ್ದರು. ಐಕಾಸ್ ನಿರ್ದೇಶಕ ಡಾ| ರಾಧಾಕೃಷ್ಣ ಎಸ್. ಐತಾಳ ಅವರು ವಂದಿಸಿದರು.
ಅತೀ ದೊಡ್ಡ ಖಾಸಗಿ ವಿ.ವಿ.ಯಾಗಲು ಯತ್ನ
ದೇಶದ ಅತೀ ದೊಡ್ಡ ಖಾಸಗಿ ವಿ.ವಿ.ಯಾಗಲು ನಮ್ಮ ನಿರಂತರ ಪ್ರಯತ್ನ ನಡೆಯುತ್ತಿದೆ. ಭಾರತದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಸುಧಾರಿಸಲು ನಾವು ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್