ಶ್ರೀಕೃಷ್ಣಮಠದಲ್ಲಿ ತಗ್ಗಿದ ನೀರಿನ ಸಮಸ್ಯೆ
Team Udayavani, Jun 15, 2019, 5:23 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಕಳೆದೊಂದು ತಿಂಗಳಿಂದ ಎದುರಾದ ನೀರಿನ ಸಮಸ್ಯೆ ಬಹುತೇಕ ಬಗೆ ಹರಿದಿದೆ.
ಬುಧವಾರ ಭಾಗೀರಥೀ ಜನ್ಮದಿನದಂದು ಶ್ರೀಕೃಷ್ಣಮಠದಲ್ಲಿ ಉತ್ಸವ ಕೊನೆಗೊಂಡಿದ್ದು ಅದೇ ದಿನ ಭಾರೀ ಮಳೆ ಬಂದು ರಥಬೀದಿಯಲ್ಲಿ ಅರ್ಧ ಅಡಿ ನೀರು ನಿಂತು ಉತ್ಸವ ನಡೆಸಲೂ ತೊಂದರೆಯಾಗಿತ್ತು. ಅದರ ಮರುದಿನವೇ ರಥಬೀದಿಯ ಸುತ್ತಮುತ್ತಲ ಬಾವಿಯಲ್ಲಿ ನೀರಾಗಿದೆ. ಈಗ ರಾಜಾಂಗಣದಲ್ಲಿರುವ ಬಾವಿಯಲ್ಲಿ ನೀರು ಆಗಿದೆ. ಶ್ರೀಕೃಷ್ಣಮಠದ ಒಳಗಿನ ಬಾವಿನಲ್ಲಿ ನೀರು ಇತ್ತು, ಈಗ ಜಾಸ್ತಿಯಾಗುತ್ತಿದೆ. ಪಾರ್ಕಿಂಗ್ ಪ್ರದೇಶದ ಬೋರ್ವೆಲ್ ನೀರಿನ ಬಳಕೆ ಕಡಿಮೆಯಾಗಿದೆ. ನಗರಸಭೆಯಿಂದ ಎರಡು ನೀರಿನ ಮಾರ್ಗಗಳಿದ್ದು ಒಂದು ಮಾರ್ಗದಲ್ಲಿ ನೀರು ಬರಲು ಆರಂಭವಾಗಿದೆ. ಮಧ್ವಸರೋವರದಲ್ಲಿ ಅಪ್ಪಟ ಮಳೆಗಾಲದಲ್ಲಿ ಆಗುವಷ್ಟು ನೀರಾಗದಿದ್ದರೂ ಈಜಾಡುವಷ್ಟು ನೀರಾಗಿದೆ.
ಒಂದೆರಡು ದಿನಗಳಿಂದೀಚೆ ಟ್ಯಾಂಕರ್ ನೀರು ತರಿಸುವುದು ಗಣನೀಯವಾಗಿ ಇಳಿದಿದೆ. ಮೂರ್ನಾಲ್ಕು ದಿನಗಳ ಹಿಂದೆ 12,000 ಲೀ. ಸಾಮರ್ಥ್ಯದ 15 ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದರೆ, ಶುಕ್ರವಾರ 4 ಟ್ಯಾಂಕರ್ ನೀರನ್ನು ತರಿಸಿಕೊಳ್ಳಲಾಗಿದೆ. ‘ನಮಗೆ ಮುಖ್ಯವಾಗಿ ನೀರು ಬೇಕಾಗುವುದು ಕೈತೊಳೆಯಲು. ಒಂದೆರಡು ದಿನಗಳಲ್ಲಿ ಟ್ಯಾಂಕರ್ ನೀರನ್ನು ನಿಲ್ಲಿಸಲಾಗುವುದು’ ಎಂದು ಶ್ರೀಮಠದ ಅಧಿಕಾರಿ ಹರೀಶ್ ಭಟ್ ‘ಉದಯವಾಣಿ’ಗೆ ತಿಳಿಸಿದರು.
ರಾಜಾಂಗಣದ ಪಾರ್ಕಿಂಗ್ ಪ್ರದೇಶದ ಯಾತ್ರಾರ್ಥಿಗಳ ಶೌಚಾಲಯದಲ್ಲಿ ಎರಡು ತಿಂಗಳಿಂದ ದಿನವೂ ತಲಾ 6,000 ಲೀ. ಸಾಮರ್ಥ್ಯದ ಆರು ಟ್ಯಾಂಕರ್ ನೀರನ್ನು ತರಿಸಲಾಗುತ್ತಿತ್ತು. ಇದು ಶ್ರೀಕೃಷ್ಣಮಠಕ್ಕೆ ಬರುವ ಸಾವಿರಾರು ಯಾತ್ರಾರ್ಥಿಗಳ ಸ್ನಾನ, ಶೌಚಾಲಯದ ಬಳಕೆಗಾಗಿ. ಎರಡು ದಿನಗಳಿಂದ ಸ್ವಂತ ಬಾವಿಯಲ್ಲಿ ನೀರಾಗಿರುವುದರಿಂದ ಟ್ಯಾಂಕರ್ ನೀರನ್ನು ನಿಲ್ಲಿಸಲಾಗಿದೆ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?