ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಅಪಘಾತ ವಡ್ಡರ್ಸೆಯ ಮಹಿಳೆ ಸಾವು
Team Udayavani, Aug 14, 2017, 8:15 AM IST
ಕೋಟ: ಕುಟುಂಬ ಸಮೇತ ಟವೆರೋ ವಾಹನದಲ್ಲಿ ಮಂತ್ರಾಲಯಕ್ಕೆ ತೀರ್ಥಯಾತ್ರೆ ತೆರಳುತ್ತಿದ್ದ ಸಂದರ್ಭ ಅಪಘಾತ ನಡೆದು ಮಹಿಳೆ ಮೃತಪಟ್ಟ ಘಟನೆ ರವಿವಾರ ರಾಯಚೂರಿನ ಮಾನ್ವಿಯಲ್ಲಿ ಸಂಭವಿಸಿದೆ.
ಕೋಟ ಸಮೀಪ ವಡ್ಡರ್ಸೆಯ ನಿವಾಸಿ ಸುಗುಣ ಶೆಟ್ಟಿ (40) ಮೃತಪಟ್ಟ ಮಹಿಳೆ. ಅವರು ನೇರಳಕಟ್ಟೆಯಲ್ಲಿರುವ ಗಂಡ ಶಂಕರ ಶೆಟ್ಟಿಯವರ ಕುಟುಂಬದವರೊಂದಿಗೆ ಒಂಬತ್ತು ಮಂದಿ ಜತೆಯಾಗಿ ಶನಿವಾರ ಸಂಜೆ ಮಂತ್ರಾಲಯ ಯಾತ್ರೆಗೆ ಹೊರಟಿದ್ದು, ರವಿವಾರ ಬೆಳಗಿನ ಜಾವ ರಾಯಚೂರು ಬಳಿಯ ಮಾನ್ವಿ ಎಂಬಲ್ಲಿ ಇವರು ಪ್ರಯಾಣಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾಗಿ ಈ ಘಟನೆ ನಡೆದಿದೆ.
ಪ್ರಯಾಣಿಕರಲ್ಲಿ ಆನಂದ ಶೆಟ್ಟಿ, ಚಂದ್ರಮತಿ ಶೆಟ್ಟಿ ಅವರು ಗಂಭೀರ ಗಾಯಗೊಂಡಿದ್ದು, ರಾಯಚೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸಣ್ಣ ಪುಟ್ಟ ಗಾಯವಾಗಿದೆ ಹಾಗೂ ವಾಹನದ ಚಾಲಕ ಸಾಲಿಗ್ರಾಮ,ಕಾರ್ಕಡದ ಮಹೇಶ್ಗೆ ಕೂಡ ಸಣ್ಣ-ಪುಟ್ಟ ಗಾಯಗಳಾಗಿದೆ.
ಸುಗುಣಾ ಶೆಡ್ತಿ ತನ್ನ ಮನೆ ವಡ್ಡರ್ಸೆಯಲ್ಲಿ ಕೃಷಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿ ಶಂಕರ ಶೆಟ್ಟಿ ಶಿವಮೊಗ್ಗದಲ್ಲಿ
ಹೋಟೆಲ್ ಕೆಲಸ ನಿರ್ವಹಿಸ್ತುತಿದ್ದರು. ಮೃತರು ಪತಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅವರ ಕುಟುಂಬದವರು ರಾಯಚೂರಿಗೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ